ಧಾರವಾಡ | ನಿವೃತ್ತಿ ಅನಿವಾರ್ಯವಾಗಿದೆ: ಬಶೀರ್ ಅಹ್ಮದ್ ಜಹಗೀರದಾರ್

Date:

Advertisements

ವೃತ್ತಿಯಿಂದ ನಿವೃತ್ತಿ ಅನಿವಾರ್ಯವಾಗಿದ್ದು, ನಿವೃತ್ತಿಯವರೆಗೆ ದುಡಿಯುವದೂ ಅನಿವಾರ್ಯ ಎಂದು ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಬಶೀರ್ ಅಹ್ಮದ್ ಜಹಗೀರದಾರ್ ಹೇಳಿದರು.

ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಗುದಗನವರ ಮತ್ತು ಹೆಚ್ ಕೆ ನಾಯಕವಾಡಿ ಜುಲೈ 31ರಂದು ಸೇವಾ ನಿವೃತ್ತರಾದ ನಿಮಿತ್ತ ಧಾರವಾಡದ ಅಂಜುಮನ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ನಾಗರಾಜ ಗುದಗನವರ ಮತ್ತು ಹೆಚ್ ಕೆ ನಾಯಕವಾಡಿ ಇವರಿಬ್ಬರ ಸೇವೆಯೂ ಗಮನಾರ್ಹವಾಗಿದೆ. ಗುದಗನವರ ನಿಷ್ಠೆ ಮತ್ತು ಪ್ರೀತಿಯಿಂದ ನಮ್ಮ ಸಂಸ್ಥೆಗೆ ನಿಸ್ವಾರ್ಥ ಸೇವೆ ನೀಡಿದ್ದಾರೆ. ಅವರಿಗೆ ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ” ಎಂದು ಹಾರೈಸಿದರು.

Advertisements

ಡಾ. ಎ ಎಸ್ ಬಳ್ಳಾರಿ, ಡಾ. ರುದ್ರೇಶ್ ಮೇಟಿ, ಪ್ರೊ.ನಾಗರಾಜ ಕನಕಣಿ, ರಜಿಯಾ ತಹಶೀಲ್ದಾರ್ ಸೇವಾ ನಿವೃತ್ತಿಯೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡರು. ಧಾರವಾಡದ ಲಯನ್ಸ್ ಕ್ಲಬ್ ಗ್ಯಾಲಕ್ಸಿ ವತಿಯಿಂದ ನಿವೃತ್ತರನ್ನು ಸನ್ಮಾನಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಫಲಶೃತಿ | ಬಸ್‌ ನಿಲ್ದಾಣದಲ್ಲಿದ್ದ ಜ್ಯೋತಿಷ್ಯದ ಜಾಹೀರಾತು ಫಲಕ ತೆರವು: ವರದಿಗೆ ಅಧಿಕಾರಿಗಳ ಸ್ಪಂದನೆ

ಡಾ. ಎನ್ ಬಿ ನಾಲತವಾಡ ನಿರೂಪಣೆ ಮಾಡಿದರು, ಡಾ. ರುದ್ರೇಶ ಮೇಟಿ ವಚನ ಪಠಣ ಮಾಡಿದರು, ಕುಮಾರಿ ಅಕ್ಸಾ ಮುಲ್ಲಾ ಶ್ಲೋಕ ಪಠಿಸಿದರು, ಸೌಭಾಗ್ಯ ಜಾದವ್ ಸ್ವಾಗತಿಸಿದರು, ಡಾ. ಗೌರಿ ಕೇರಿಮಠ ಪರಿಚಯಿಸಿದರು ಹಾಗೂ ಡಾ. ಬೀಬಿ ಆಯಿಷಾ ಚಕೋಲಿ ವಂದಿಸಿದರು.

ರಫೀಕ ಶಿರಹಟ್ಟಿ, ಕೈರುದ್ದೀನ್ ಶೇಕ್, ಅಬ್ದುಲ್ ಅಜೀಜ್ ಬಡ್ಬಡೇ, ರಿಯಾಜ ನನ್ನೇ ಸಾಬಣ್ಣವರ್, ಖಲಿಲ ದಾಸನಕೊಪ್, ಡಾ ಶಿವಾನಂದ ಶೆಟ್ಟರ್, ಪ್ರೊ. ಡಿ ಎಮ್ ನಿಡವನಿ, ಡಾ ಎನ್ ಎಮ್ ಮಕಂದಾರ್, ಡಾ ಎಲ್ ಆರ್ ಅಂಗಡಿ, ರೇಣುಕಾ ಗುದಗನವರ, ಸುರೇಶ ಗುದಗನವರ, ಡಾ ರತ್ನಾ ಕಡಪಟ್ಟಿ, ಡಾ. ರಾಜಶ್ರೀ ಗುದಗನವರ, ಶಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X