ರಾಯಚೂರು | ಕಟ್ಟಡ ವಾಲಿದ ಪ್ರಕರಣ: ಸಾರ್ವಜನಿಕ ಭದ್ರತೆಗಾಗಿ ತೆರವಿಗೆ ಮುಂದಾದ ಪಾಲಿಕೆ

Date:

Advertisements

ನಗರದ ವಾರ್ಡ 8 ರಲ್ಲಿ ಎರಡು ಅಂತಸ್ತಿನ ಕಟ್ಟಡ ವಾಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಕಟ್ಟಡ ತೆರವು ಕಾರ್ಯಾಚರಣೆ ಪ್ರಾರಂಭಿಸಿದರು. ಪಾಲಿಕೆ ಅಭಿಯಂತರ ಬಸವರಾಜ ನೇತೃತ್ವದ ಅಧಿಕಾರಿಗಳ ತಂಡ ಜೆಸಿಬಿಗಳೊಂದಿಗೆ ಸ್ಥಳಕ್ಕೆ ತೆರಳಿ ಕಂಪೌಂಡ್ ತೆರವುಗೊಳಿಸಿದರು.

ಕಟ್ಟಡ ಮಾಲೀಕರಿಗೆ ಕಳೆದ ಹತ್ತುದಿನ ಹಿಂದೆಯೇ ತೆರವುಗೊಳಿಸಲು ಸೂಚಿಸಿದ್ದರೂ ಕಟ್ಟಡಮಾಲೀಕರು ತೆರವುಗೊಳಿಸದೇ ಇರುವರಿಂದ ಪಾಲಿಕೆ ತೆರವಿಗೆ ಮುಂದಾಗಿತ್ತು. ಮಾಲೀಕರು ನಾಳೆಯೊಳಗೆ ಪೂರ್ಣವಾಗಿ ಕಟ್ಟಡ ತೆರವುಗೊಳಿಸಲು ಗಡವು ನೀಡಿದ್ದು ಇಲ್ಲದೇ ಹೋದರೆ ಪಾಲಿಕೆಯಿಂದ ತೆರವುಗೊಳಿಸುವದಾಗಿ ಎಚ್ಚರಿಸಲಾಯಿತು.

ಕಟ್ಟಡ ಪಕ್ಕದಲ್ಲಿರುವ ವ್ಯಾಪಾರಿ ಅಂಗಡಿಗಳನ್ನು ಸಹ ಖಾಲಿ ಮಾಡಿಸಲಾಯಿತು. ಮಹ್ಮದ ದಸ್ತಗೀರ ಎಂಬುವವರಿಗೆ ಸೇರಿ ಕಟ್ಟಡ ವಾಲಿನಿಂತಿದ್ದು ಕುಸಿತ ಬೀಳುವ ಆತಂಕ ಉಂಟಾಗಿದೆ. ಕಟ್ಟಡ ಪಕ್ಕದ ಮನೆ ಮೇಲೆ ನಿಂತಿರುವದು ಅವಘಡ ಸಂಭವಿಸುವ ಭಯ ಸೃಷ್ಟಿಯಾಗಿದೆ. ಮಾಲೀಕರು ಕಟ್ಟಡದ ಮೇಲ್ಬಾಗ ಮಾತ್ರ ತೆರವುಗೊಳಿಸಿ ಸುಮ್ಮನಾಗಿದ್ದರು. ಪಾಲಿಕೆ ಅಧಿಕಾರಿಗಳು ಪೂರ್ಣವಾಗಿ ಕಟ್ಟಡ ತೆರವುಗೊಳಿಸುವಂತೆ ಸೂಚಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಕ್ಯಾಥೋಲಿಕ್ ಕನ್ಯಾಸ್ತ್ರೀಯರ ಬಂಧನ ಖಂಡಿಸಿ ಪ್ರತಿಭಟನೆ

ನಾಳೆಯೊಳಗೆ ಸ್ವಯಂಪ್ರೇರಣೆಯಿಂದ ಕಟ್ಟಡ ತೆರವುಗೊಳಿಸಬೇಕು. ಇಲ್ಲದೆ ಹೋದಲ್ಲಿ ಪಾಲಿಕೆಯಿಂದ ತೆರವುಗೊಳಿಸಲಾಗುತ್ತದೆ ಎಂದು ಅಂತಿಮ ಎಚ್ಚರಿಕೆಯನ್ನು ನೀಡಿದರು.

Advertisements
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ನೀಡುವಂತೆ ಒತ್ತಾಯ

ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕಲ್ಯಾಣ...

ರಾಯಚೂರು | ಸಾಗುವಳಿ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು : ಮಾರೆಪ್ಪ ಹರವಿ

ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X