ನಗರದ ವಾರ್ಡ 8 ರಲ್ಲಿ ಎರಡು ಅಂತಸ್ತಿನ ಕಟ್ಟಡ ವಾಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಕಟ್ಟಡ ತೆರವು ಕಾರ್ಯಾಚರಣೆ ಪ್ರಾರಂಭಿಸಿದರು. ಪಾಲಿಕೆ ಅಭಿಯಂತರ ಬಸವರಾಜ ನೇತೃತ್ವದ ಅಧಿಕಾರಿಗಳ ತಂಡ ಜೆಸಿಬಿಗಳೊಂದಿಗೆ ಸ್ಥಳಕ್ಕೆ ತೆರಳಿ ಕಂಪೌಂಡ್ ತೆರವುಗೊಳಿಸಿದರು.
ಕಟ್ಟಡ ಮಾಲೀಕರಿಗೆ ಕಳೆದ ಹತ್ತುದಿನ ಹಿಂದೆಯೇ ತೆರವುಗೊಳಿಸಲು ಸೂಚಿಸಿದ್ದರೂ ಕಟ್ಟಡಮಾಲೀಕರು ತೆರವುಗೊಳಿಸದೇ ಇರುವರಿಂದ ಪಾಲಿಕೆ ತೆರವಿಗೆ ಮುಂದಾಗಿತ್ತು. ಮಾಲೀಕರು ನಾಳೆಯೊಳಗೆ ಪೂರ್ಣವಾಗಿ ಕಟ್ಟಡ ತೆರವುಗೊಳಿಸಲು ಗಡವು ನೀಡಿದ್ದು ಇಲ್ಲದೇ ಹೋದರೆ ಪಾಲಿಕೆಯಿಂದ ತೆರವುಗೊಳಿಸುವದಾಗಿ ಎಚ್ಚರಿಸಲಾಯಿತು.
ಕಟ್ಟಡ ಪಕ್ಕದಲ್ಲಿರುವ ವ್ಯಾಪಾರಿ ಅಂಗಡಿಗಳನ್ನು ಸಹ ಖಾಲಿ ಮಾಡಿಸಲಾಯಿತು. ಮಹ್ಮದ ದಸ್ತಗೀರ ಎಂಬುವವರಿಗೆ ಸೇರಿ ಕಟ್ಟಡ ವಾಲಿನಿಂತಿದ್ದು ಕುಸಿತ ಬೀಳುವ ಆತಂಕ ಉಂಟಾಗಿದೆ. ಕಟ್ಟಡ ಪಕ್ಕದ ಮನೆ ಮೇಲೆ ನಿಂತಿರುವದು ಅವಘಡ ಸಂಭವಿಸುವ ಭಯ ಸೃಷ್ಟಿಯಾಗಿದೆ. ಮಾಲೀಕರು ಕಟ್ಟಡದ ಮೇಲ್ಬಾಗ ಮಾತ್ರ ತೆರವುಗೊಳಿಸಿ ಸುಮ್ಮನಾಗಿದ್ದರು. ಪಾಲಿಕೆ ಅಧಿಕಾರಿಗಳು ಪೂರ್ಣವಾಗಿ ಕಟ್ಟಡ ತೆರವುಗೊಳಿಸುವಂತೆ ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕ್ಯಾಥೋಲಿಕ್ ಕನ್ಯಾಸ್ತ್ರೀಯರ ಬಂಧನ ಖಂಡಿಸಿ ಪ್ರತಿಭಟನೆ
ನಾಳೆಯೊಳಗೆ ಸ್ವಯಂಪ್ರೇರಣೆಯಿಂದ ಕಟ್ಟಡ ತೆರವುಗೊಳಿಸಬೇಕು. ಇಲ್ಲದೆ ಹೋದಲ್ಲಿ ಪಾಲಿಕೆಯಿಂದ ತೆರವುಗೊಳಿಸಲಾಗುತ್ತದೆ ಎಂದು ಅಂತಿಮ ಎಚ್ಚರಿಕೆಯನ್ನು ನೀಡಿದರು.
