ಚಿತ್ರದುರ್ಗ, ದಾವಣಗೆರೆ | ಕೆಎಸ್ಸಾರ್ಟಿಸಿ ನೌಕರರ ಮುಷ್ಕರ, ಬಸ್ ಸಂಚಾರ ವಿರಳ, ಪ್ರಯಾಣಿಕರಿಗೆ ತಟ್ಟಿದ ಬಂದ್ ಬಿಸಿ

Date:

Advertisements

ಸ್ಥಳೀಯವಾಗಿ ಕೆಲವೇ ಬೆರಳೆಣಿಕೆಯಷ್ಟು ಬಸ್ ಗಳ ಸಂಚಾರ, ದೂರದೂರುಗಳಿಗೆ ತೆರಳಲು ಮುಂಜಾನೆಯಿಂದಲೇ ಆಗಮಿಸುತ್ತಿದ್ದ ಪ್ರಯಾಣಿಕರು, ಸರ್ಕಾರದ ಮಾತುಕತೆ, ಎಸ್ಮಾ ಅಸ್ತ್ರಕ್ಕೂ ಬಗ್ಗದೇ ಮುಷ್ಕರ ಮುಂದುವರೆಸಿರುವ ಕೆಎಸ್ಸಾರ್ಟಿಸಿ ನೌಕರರು. ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಸಾಮಾನ್ಯವಾಗಿ ಇಂದು ಮುಂಜಾನೆಯಿಂದಲೇ ಕಂಡು ಬಂದ ದೃಶ್ಯಗಳು. ಬಸ್ ಸಂಚಾರ ವಿರಳವಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲದ ಬಿಸಿ ತಟ್ಟಲಾರಂಬಿಸಿದೆ.

1002447567

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರಾರಂಭಿಸಿರುವ ಧರಣಿ ಇಂದು ಮುಂಜಾನೆಯಿಂದಲೇ ಪ್ರಾರಂಭವಾಗಿದ್ದು, ಬೇರೆ ಬೇರೆ ಊರುಗಳಿಗೆ ತೆರಳಿದ್ದ ಬಸ್ ಗಳು ಮಾತ್ರ ತಮ್ಮ ತಮ್ಮ ವಿಭಾಗಗಳಿಗೆ ತೆರಳಲು ಆಗಮಿಸುತ್ತಿದ್ದುದು ಹೊರತುಪಡಿಸಿ ದೂರದ ನಗರಗಳಿಗೆ ಯಾವುದೇ ಬಸ್ ಗಳು ಸಂಚಾರಕ್ಕಿಳಿಯದೇ ನಿಲ್ದಾಣದಲ್ಲಿ ಪ್ರಯಾಣಿಕರು ಮಾತ್ರ ಕಾಯುವಂತಹ‌ ದೃಶ್ಯ ಸಾಮಾನ್ಯವಾಗಿತ್ತು. ಬೆಳಿಗ್ಗೆ 9 ಗಂಟೆಯ ನಂತರ ಗ್ರಾಮಾಂತರ ಬಸ್ ಗಳ ಸಂಚಾರ ಕೆಲ ಮಟ್ಟಿಗೆ ಪ್ರಾರಂಭವಾಗಿದೆ. ಆದರೆ ಬೆಂಗಳೂರು, ಮೈಸೂರು, ಬೆಳಗಾವಿ, ಸೇರಿದಂತೆ ಬಹುತೇಕ ದೂರದ ಪ್ರಯಾಣದ ಬಸ್ ಗಳು ಸಂಚಾರ ನಿಲ್ಲಿಸಿವೆ.‌

1002447560

ಕೆಎಸ್ಸಾರ್ಟಿಸಿ ನೌಕರರ ಮುಷ್ಕರ ಎಂದು ತಿಳಿದು ತುರ್ತಾಗಿ ಬೇರೆಡೆಗೆ ಹೋಗಬೇಕಿದ್ದವರು, ತಿಳಿಯದೇ ಬಂದಿದ್ದ ಹಲವು ಪ್ರಯಾಣಿಕರು ಬಸ್ ಗಳ‌ ನಿರೀಕ್ಷೆಯಲ್ಲಿ ನಿಂತು ಕಾಯುವ ಆಗೊಮ್ಮೆ ಈಗೊಮ್ಮೆ ಟ್ರಾಫಿಕ್ ಕಂಟ್ರೋಲರ್ ಹತ್ತಿರ ಹೋಗಿ ವಿಚಾರಿಸುವ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕ ಸಾರಿಗೆ ನೌಕರರ ಮುಷ್ಕರ ಸಾರ್ವಜನಿಕರಿಗೆ ಪ್ರಯಾಣದ ಅವ್ಯವಸ್ಥೆ, ಬಿಸಿ ಮುಟ್ಟುವ ಲಕ್ಷಣಗಳು ಗೋಚರಿಸಲಾರಂಭಿಸಿದೆ. ಇದರ ಮಧ್ಯೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಖಾಸಗಿ ಬಸ್ಸುಗಳು ಸಾಮಾನ್ಯವಾಗಿ ಸಂಚರಿಸುತ್ತಿದ್ದು, ದೂರದ ನಗರಗಳಿಗೆ ಪ್ರಯಾಣದ ದರವನ್ನು ಬೇಕಾಬಿಟ್ಟಿಯಾಗಿ ಏರಿಸಿವೆ.‌ 287 ರೂ. ಇರುವ ಚಿತ್ರದುರ್ಗ ಬೆಂಗಳೂರು ಪ್ರಯಾಣದ ದರಕ್ಕೆ 500 ರೂ ಗೆ ಏರಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ಹೊರೆ ಬೀಳಲಿದೆ.

Advertisements
1002447579


ಬಸ್ ಗಳ ಸಂಚಾರವಿಲ್ಲದ ಶಕ್ತಿ ಯೋಜನೆಯಡಿ ಉತ್ತಮ ಪ್ರಯಾಣದ ವ್ಯವಸ್ಥೆ ಪಡೆದಿದ್ದ ಮಹಿಳೆಯರು ಇಂದು ಸಂಚಾರದ ವ್ಯತ್ಯಯದಿಂದಾಗಿ ಪರ್ಯಾಯ ವ್ಯವಸ್ಥೆಗೆ ಹುಡುಕಾಟ ನೆಡೆಸುತ್ತಿದ್ದುದು ಕಂಡು ಬರುತ್ತಿತ್ತು. ಮುಷ್ಕರದ ಪ್ರಚಾರದಿಂದಾಗಿ ಕೂಡ ಪ್ರಯಾಣಿಕರ ಸಂಖ್ಯೆ ಕೂಡ ಅರ್ಧದಷ್ಟು ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಕಳಪೆ ಬೀಜ-ನಕಲಿ ಗೊಬ್ಬರದ ಹಾವಳಿ; ರೈತರ ನೆರವಿಗೆ ನಿಲ್ಲದ ಇಲಾಖೆ

ಮುಷ್ಕರ ಮತ್ತು ಬಸ್ ಗಳ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ದಾವಣಗೆರೆ ವಿಭಾಗೀಯ ನಿಯಂತ್ರಣಿಧಿಕಾರಿ ಕಿರಣ್ ಕುಮಾರ್, “ದಾವಣಗೆರೆ ವಿಭಾಗದಿಂದ ಇಂದು ಶೇ.40ರಷ್ಟು ಬಸ್ ಗಳು ಕಾರ್ಯಿಚರಣೆಗಿಳಿದಿವೆ. ಗ್ರಾಮಾಂತರ ಮಟ್ಟದಲ್ಲಿ ಹೆಚ್ಚು ಓಡಾಟ ನಡೆಸಿವೆ.‌ ದೂರದ ನಗರಗಳಿಗೆ ಕೆಲವು ಬಸ್ ಗಳು ಮಾತ್ರ ತೆರಳುತ್ತಿವೆ.‌ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆ ಇದ್ದು ಹೆಚ್ಚು ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ವಾಯುವ್ಯ, ಈಶಾನ್ಯ ಸಾರಿಗೆ ಸಂಸ್ಥೆಗಳ ಕೆಲವು ಬಸ್ಸುಗಳು ಕೂಡ ನಿಲ್ದಾಣಕ್ಕೆ ಬಂದು ಹೋಗಿ ಸಂಚರಿಸುತ್ತಿವೆ” ಎಂದು ಮಾಹಿತಿ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X