ಇನ್ನು ತನಿಖೆ ಹಂತ ದಲ್ಲಿ ಇರುವಾಗ ಬಿಜೆಪಿ ಅವರು ಯಾಕೆ ಈ ರೀತಿ ಕುಂಬಳ ಕಾಯಿ ಕಳ್ಳ ಅಂದರೆ ಯಾಕೆ ಹೆಗಲು ಮುಟ್ಟಿ ಕೊಳ್ಳುತ್ತಾರೆ ಅಂತ ಅರ್ಥ ಆಗುತ್ತಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಸರಕಾರದ SIT ತನಿಖೆ ತುಂಬ ಸೂಕ್ಷ್ಮವಾಗಿನಡೆಯುತ್ತಿದೆ, ಅಪರಾಧಿಗಳನ್ನು ಮಟ್ಟ ಹಾಕಲು ಪ್ರಯತ್ನ ಪಡುತ್ತಿದೆ, ಬಿಜೆಪಿಯವರ ವರ್ತನೆ ನೋಡಿದರೆ ಇವರ ಪಕ್ಷದವರೇ ಎಲ್ಲೊ ಅಪರಾಧ, ಕೊಲೆ, ಅತ್ಯಾಚಾರ, ಮಾಡಿದ್ದಾರೆ ಹೇಗಾದರೂ ಮಾಡಿ ಬಚಾವ್ ಆಗ್ಬೇಕು ಅನ್ನೋ ವರ್ತನೆ ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ವೀರೇಂದ್ರ ಹೆಗ್ಗಡೆ ಅವರು ಬಿಜೆಪಿ ರಾಜ್ಯಸಭಾ ಸದಸ್ಯರು ಹಾಗೂ ವೀರೇಂದ್ರ ಹೆಗ್ಗಡೆ ಅವರಲ್ಲಿ ಕೋಟಿ ಕೋಟಿ ಹಣ ಇದೆ ಅನ್ನೋ ಕಾರಣಕ್ಕೆ ಮುಂದಿನ ಚುನಾವಣೆ ಹಾಗೂ ಧರ್ಮಸ್ಥಳ ಚಲೋ ಕಾರ್ಯಕ್ರಮ ಹಮ್ಮಿ ಕೊಂಡಿದ್ದಾರೆ, ಇದು ಧರ್ಮ ಕ್ಷೇತ್ರ ಧರ್ಮಸ್ಥಳದ ಪರವಾಗಿ ಅಲ್ಲ ಅನ್ನೋದು ವೀರೇಂದ್ರ ಹೆಗ್ಗಡೆಯವರಿಗೆ ಅರ್ಥ ಆದರೆ ಧರ್ಮಸ್ಥಳ ಕ್ಷೇತ್ರದ ನಿಜವಾದ ಭಕ್ತದಿಗಳಿಗೆ ಮುಂದಿನ ದಿನದಲ್ಲಿ ವೀರೇಂದ್ರ ಹೆಗ್ಗಡೆ ಬಗ್ಗೆ ದೈವ ಮಾನವ ಎಂಬ ನಂಬಿಕೆ ಬರಬಹುದು ಎಂದು ಹೇಳಿದರು.