ಗುಬ್ಬಿ | ಸಿಡಿಲು ಬಸವೇಶ್ವರಸ್ವಾಮಿ ಅದ್ದೂರಿ ಪರೇವು ಜಾತ್ರೆ

Date:

Advertisements

ಶ್ರಾವಣ ಮಾಸದ ಕಡೇ ಸೋಮವಾರ ನಡೆಯುವ ಗುಬ್ಬಿಯ ಇತಿಹಾಸ ಪ್ರಸಿದ್ಧ ಶ್ರೀ ಸಿಡಿಲು ಬಸವೇಶ್ವರಸ್ವಾಮಿ ಪರೇವು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಶ್ರಾವಣ ಮಾಸದ ಕಡೇ ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ ನಡೆದು ಪುಷ್ಪಾಲಂಕಾರ ಭಕ್ತರನ್ನು ಸೆಳೆಯಿತು. ಈ ಜೊತೆಗೆ ತೊರೆಮಠದ ಶ್ರೀ ಆಟವಿ ಚನ್ನಬಸವೇಶ್ವರ ಸ್ವಾಮೀಜಿ ಅವರಿಗೆ ಪಾದಪೂಜೆ ಕಾರ್ಯಕ್ರಮ ಟ್ರಸ್ಟ್ ವತಿಯಿಂದ ನಡೆಸಲಾಯಿತು. ಮಧ್ಯಾಹ್ನ 12 ಕ್ಕೆ ಮಹಾ ಮಂಗಳಾರತಿ ಅನ್ನ ದಾಸೋಹ ಸಂಜೆವರೆಗೆ ನಿರಂತರ ನಡೆಯಿತು.

ತೊರೆ ಮಠದ ಅಧ್ಯಕ್ಷ ಶ್ರೀ ಅಟವಿ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ ಪ್ರತಿ ವರ್ಷ ನಡೆಯುವ ಈ ಪರೇವು ಜಾತ್ರೆಯಲ್ಲಿ ಅನ್ನ ದಾಸೋಹ ಕಾರ್ಯಕ್ರಮವೇ ವಿಶೇಷವಾಗಿ ನಡೆದು ಬಂದಿದೆ. ಸಾವಿರಾರು ಭಕ್ತರು ಆಗಮಿಸುವ ಈ ಸಿಡಿಲು ಬಸವೇಶ್ವರಸ್ವಾಮಿಗೆ ಇಂದಿಗೂ ಹರಕೆ ಕಟ್ಟಿಕೊಳ್ಳುವ ಹಾಗೂ ಹರಕೆ ತೀರಿಸುವ ಪೂಜೆ ಪ್ರತಿ ಅಮಾವಾಸ್ಯೆ ನಡೆದು ಬಂದಿದೆ. ಬಹಳ ಸತ್ಯ ನಿಷ್ಠೆಯಲ್ಲಿ ನಡೆದುಕೊಳ್ಳುವ ಭಕ್ತರು ದಾಸೋಹ ಕಾರ್ಯಕ್ರಮಕ್ಕೆ ದವಸ ಧಾನ್ಯ ಹಾಗೂ ಆರ್ಥಿಕ ದೇಣಿಗೆ ನೀಡುತ್ತಿದ್ದಾರೆ. ಭಿನ್ನ ವಿಗ್ರಹಕ್ಕೆ ಪೂಜೆ ನಡೆಯೋಲ್ಲ ಎಂಬ ಮಾತಿಗೆ ವಿರೋಧವಾಗಿ ಪೂಜೆ ವಿಧಿವತ್ತಾಗಿ ನಿರಂತರ ನಡೆದು ಬಂದಿದೆ. ಇಲ್ಲಿನ ಮಹಿಮೆ ಭಕ್ತರನ್ನು ಇಂದಿಗೂ ಆಕರ್ಷಿಸಿದೆ ಎಂದರು.

Advertisements
1001918114

ಟ್ರಸ್ಟಿ ಎಚ್.ಎನ್.ಲೋಕೇಶ್ ಮಾತನಾಡಿ ಸಿಡಿಲು ಬಡಿದು ಎರಡು ಹೋಳು ಆಗಿರುವ ಬಸವಣ್ಣನಿಗೆ ನಿತ್ಯ ಪೂಜೆ, ಅಮಾವಾಸ್ಯೆ ಕಟ್ಲೆ ಹಾಗೂ ವರ್ಷಕ್ಕೊಮ್ಮೆ ಪೆರೇವು ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಇಂದಿಗೂ ಸಿಡಿಲು ಬಸವಣ್ಣನ ಬಗ್ಗೆ ಅಪಾರ ನಂಬಿಕೆ, ಭಕ್ತಿ ಹೊಂದಿದ್ದಾರೆ. ನೂರಾರು ವರ್ಷದ ಬಸವಣ್ಣ ಕಲ್ಲಿನ ವಿಗ್ರಹ ಎರಡು ಭಾಗವಾದರೂ ಇಂದಿಗೂ ಬೆಳವಣಿಗೆ ಇದೆ. ಮತ್ತೊಂದು ವಿಶೇಷ ಸಮೀಪದ ಹೇರೂರು ಮಾಳೆ ಎಂಬ ಗ್ರಾಮದ ಮುಸ್ಲಿಂ ಸಮಾಜ ಕೂಡಾ ಇಲ್ಲಿನ ಬಸವಣ್ಣನಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಣೆ ಮಾಡುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಪಪಂ ಸದಸ್ಯರಾದ ಮಹಮ್ಮದ್ ಸಾದಿಕ್, ಶೌಕತ್ ಆಲಿ, ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಮುಖ್ಯಾಧಿಕಾರಿ ಮಂಜುಳಾದೇವಿ, ಟ್ರಸ್ಟ್ ಅಧ್ಯಕ್ಷ ಪಣಗಾರ್ ನಿಜಲಿಂಗಪ್ಪ, ಉಪಾಧ್ಯಕ್ಷ ಸೋಮಶೇಖರ್, ಸದಸ್ಯರಾದ ಮಹಾದೇವ್, ಎಚ್.ಎನ್.ರಮೇಶ್, ನಾಗರಾಜ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

ಹಾವೇರಿ | ಮಾದಕ ವಸ್ತು ಮಾರಾಟ; ನಾಲ್ವರು ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ...

ಶಿವಮೊಗ್ಗ | ಕಾಂಗ್ರೆಸ್ ಕಚೇರಿಯಲ್ಲಿ ಅರಸು ಮತ್ತು ರಾಜೀವ್‍ಗಾಂಧಿಯವರ ಜನ್ಮದಿನಾಚರಣೆ

ಶಿವಮೊಗ್ಗ, ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ನಾಯಕ ಹಾಗೂ...

ಶಿವಮೊಗ್ಗ | ಆರು ಜಿಲ್ಲೆಯ ಮುಖಂಡರಿಂದ ಅಹಿಂದ ಸಮಾವೇಶದ ಪೂರ್ವಭಾವಿ ಸಭೆ : ತೀ.ನ. ಶ್ರೀನಿವಾಸ್

ಶಿವಮೊಗ್ಗ, ಮಲೆನಾಡು ರೈತರ ಸಮಸ್ಯೆ ಹಾಗೂ ಕಾಂತ್‌ರಾಜ್ ವರದಿಯ ಜಾರಿಗೆ ಆಗ್ರಹಿಸಿ...

Download Eedina App Android / iOS

X