ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

Date:

Advertisements

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ…ಇನ್ನು ಕೆಲವರ ಕೆಲಸ ಕಾರ್ಯ ತೀವ್ರ ನಿರಾಸೆ ಹುಟ್ಟಿಸುತ್ತದೆ’ ಎಂದು ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ(CJI) ಬಿ.ಆರ್.ಗವಾಯಿ ಹೇಳಿದ್ದಾರೆ.

‘ಸರ್ವರಿಗೂ ನ್ಯಾಯ ಸಲ್ಲಿಸುವುದು ಹೇಗೆ- ಕಾನೂನು ನೆರವು ಮತ್ತು ಮಧ್ಯಸ್ಥಿಕೆ: ವಕೀಲರು ಮತ್ತು ಜಡ್ಜುಗಳು ಜೊತೆಗೂಡಿ ವಹಿಸಬೇಕಿರುವ ಪಾತ್ರ’ ಎಂಬ ವಿಷಯ ಕುರಿತು ಸುಪ್ರೀಮ್ ಕೋರ್ಟ್ ವಕೀಲರ ಸಂಘ ಏರ್ಪಡಿಸಿರುವ ಉಪನ್ಯಾಸ ಮಾಲೆಯ ಉದ್ಘಾಟನಾ ಭಾಷಣ ಮಾಡಿದರು ಗವಾಯಿ.

‘ಜಗತ್ತಿನ ಬಹುದೊಡ್ಡ ಜನತಂತ್ರದಲ್ಲಿ (ಭಾರತ) ನ್ಯಾಯವೆಂಬುದು ಇತ್ತೀಚಿನವರೆಗೆ ಉಳ್ಳವರ ಕೈಗೆಟುಕುವ ವಿಶೇಷಾಧಿಕಾರವಾಗಿತ್ತು. ಕಾನೂನು ಶುಲ್ಕಗಳು ಕಕ್ಷಿದಾರರ ಮಾಸಿಕ ವೇತನಗಳಿಗೆ ಗ್ರಹಣ ಹಿಡಿಸುತ್ತವೆ, ವಿಧಿವಿಧಾನಗಳು ಇನ್ನೂ ಕೋಟಿ ಕೋಟಿ ಅನಕ್ಷರರ ದೇಶದಲ್ಲಿ ಸಾಕ್ಷರತೆಯನ್ನು ಬೇಡುತ್ತವೆ. ಕೋರ್ಟ್ ಹೌಸ್ ಕಾರಿಡಾರ್ ಗಳು ಕಕ್ಷಿದಾರರನ್ನು ಸ್ವಾಗತಿಸುವ ಬದಲಿಗೆ ಭಯಗೊಳಿಸಿ ಬೆಚ್ಚಿಬೀಳಿಸುತ್ತವೆ. ಯಾವ ಜನರ ಸೇವೆಗೆಂದು ಈ ನ್ಯಾಯದೇಗುಲಗಳನ್ನು ಕಟ್ಟಲಾಗಿದೆಯೋ, ಆ ಜನರ ಪ್ರವೇಶವೇ ದುಸ್ಸಾಧ್ಯ ಎನಿಸುವಂತೆ ಅವುಗಳ ಬಾಗಿಲುಗಳನ್ನು ತೀರಾ ಕಿರಿದು ಮಾಡಿ ಇಡಲಾಗಿದೆ. ತಮ್ಮ ದೂರುದುಮ್ಮಾನಗಳನ್ನು ಇಬ್ಬದಿಗಳೂ ಹೇಳಿಕೊಳ್ಳುವ ಅವಕಾಶವಿರಬೇಕು. ಆದರೆ ಒಂದೇ ಬದಿಯವರು (ಉಳ್ಳವರು) ಮಾತ್ರವೇ ಕೋರ್ಟಿನ ಕದ ಬಡಿಯುವುದು ಸಾಧ್ಯವೆನಿಸಿದೆ. ಹೀಗಾದರೆ ನ್ಯಾಯದ ತಕ್ಕಡಿ ಮೇಲೆದ್ದು ಸಮವಾಗಿ ತೂಗುವುದಾದರೂ ಹೇಗೆ’ ಎಂದು ಗವಾಯಿ ಪ್ರಶ್ನಿಸಿದ್ದಾರೆ.

Advertisements

ಇದನ್ನೂ ಓದಿ ಯುಗಧರ್ಮ | ಚುನಾವಣಾ ಆಯೋಗದ ಕುರಿತು ಎತ್ತಲಾದ ಪ್ರಶ್ನೆಗಳು; ಈಗ ಕಳ್ಳತನದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೀರಾ?

‘ವಿಳಂಬವಾಗಿ ದೊರೆಯುವ ನ್ಯಾಯವು, ನ್ಯಾಯ ನಿರಾಕರಣೆ ಮಾಡಿದಂತೆಯೇ ಸರಿ. ನ್ಯಾಯನೀಡಿಕೆ ಸಕಾಲಕ್ಕೆ ಆಗಬೇಕು. ಹೀಗಾಗಿ ಮೊಕದ್ದಮೆಗಳ ವಿಚಾರಣೆ ಬಾಕಿಯು ಬೆಟ್ಟದಂತೆ ಬೆಳೆಯುವುದು ನ್ಯಾಯ ನೀಡಿಕೆಯ ನಿರಾಕರಣೆಗೆ ದಾರಿ ಮಾಡಿಕೊಡುತ್ತಿದೆ’ ಎಂದೂ ಅವರು ಹೇಳಿದ್ದಾರೆ.

‘ವಕೀಲರು ಮತ್ತು ನ್ಯಾಯಾಧೀಶರು ಸದುದ್ದೇಶ ಉಳ್ಳವರೇ ಆಗಿದ್ದಾರೆ. ಆದರೆ ವಿಳಂಬ ಉಂಟಾಗುವ ಪದ್ಧತಿಗಳನ್ನೇ ಅನುಸರಿಸಿದ್ದಾರೆ. ಮುಂದೂಡಿಕೆಯ ವಿನಂತಿಗಳು ವಿರಳವಾಗಿರಬೇಕು, ಆದರೆ ನಿತ್ಯ ವಿಚಾರಣೆಯ ಭಾಗವೇ ಆಗಿ ಹೋಗಿವೆ’ ಎಂದಿದ್ದಾರೆ. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X