ಅತೀ ಹಿಂದುಳಿದ ಅಲೆಮಾರಿ -ಅರೆ ಅಲೆಮಾರಿ ಸಮುದಾಯಗಳಿಗಾಗಿರುವ ಘೋರ ಅನ್ಯಾಯ ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ವಿವಿಧ ಕ್ಷೇತ್ರದ 277 ಸಮಾನ ಮನಸ್ಕ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಕಳೆದ ಮೂರು ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿದ್ದ ಪರಿಶಿಷ್ಟಜಾತಿಗಳಿಗೆ ‘ಒಳಮೀಸಲಾತಿ’ ಜಾರಿ ಮಾಡಿ ಸಾಮಾಜಿಕ ನ್ಯಾಯವನ್ನು ಸಮಕಾಲೀನಗೊಳಿಸಿದ ತಮಗೆ ಮತ್ತು ಸರ್ಕಾರಕ್ಕೆ ಗೌರವಪೂರ್ವಕ ಅಭಿನಂದನೆಗಳು. ಇದೊಂದು ಚಾರಿತ್ರಿಕ ತೀರ್ಮಾನವಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ, ಹೆಚ್ಚಿನ ಆರ್ಥಿಕ ಸವಲತ್ತುಗಳನ್ನೇ ಪಡೆಯದೆ ಹಿಂದುಳಿದಿರುವ ಸಮುದಾಯಗಳ ಬಗೆಗೆ ನೀವು ತೋರಿದ ಕಾಳಜಿ ಶ್ಲಾಘನೀಯ. ತಾವು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ತಮ್ಮ ಸರ್ಕಾರ ಈ ಸಮುದಾಯಗಳ ಕಾಳಜಿಯನ್ನು ನಿರಂತರವಾಗಿ ತೋರಿಸುತ್ತ ಬಂದಿದೆ. ಈ ಮೂರು ದಶಕಗಳ ಹೋರಾಟಕ್ಕೆ ತಾರ್ಕಿಕ ಅಂತ್ಯವನ್ನು ತಂದಿದ್ದೀರಿ. ಅದು ನಿಮ್ಮ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಪ್ರಶಂಸಿದ್ದಾರೆ.
ನ್ಯಾಯಮೂರ್ತಿ ನಾಗಮೋಹನ್ದಾಸ್ ವರದಿಯನ್ನು ಆಧರಿಸಿ ತಾವು ಸಚಿವ ಸಂಪುಟದಲ್ಲಿ ಪ್ರವರ್ಗ ಎ, ಪ್ರವರ್ಗ ಬಿ ಹಾಗೂ ಪ್ರವರ್ಗ ಸಿ ಎಂದು ವಿಭಾಗಿಸಿ ಅವರವರ ಸಾಮಾಜಿಕ ಮತ್ತು ಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ನೀಡಿರುತ್ತೀರಿ. ಈ ವಿಷಯವನ್ನು ಸದನದಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದೀರಿ. ಇದು ವೈಜ್ಞಾನಿಕವಾದ ಮತ್ತು ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಕೊಡಮಾಡುವ ಮುಂದಾಲೋಚನೆಯ ಕ್ರಮವಾಗಿದೆ. ಈ ಅಂಶಗಳನ್ನು ಹೇಳುತ್ತಲೇ, ತಾವು ನ್ಯಾಯಮೂರ್ತಿ ನಾಗಮೋಹನ್ದಾಸ್ ಆಯೋಗ ಅತಿ ಹಿಂದುಳಿದವರೆಂದು ಗುರುತಿಸಿದ್ದ 59 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ʼಎʼಎಂದು ವರ್ಗೀಕರಿಸಿ ಶೇ 1 ರಷ್ಟು ಒಳ ಮೀಸಲಾತಿಯನ್ನು ಕಲ್ಪಿಸಲು ಶಿಫಾರಸ್ಸು ಮಾಡಿತ್ತು. ತಾವು ಇದನ್ನು ಪ್ರವರ್ಗ ʼಸಿʼಗೆ ಸೇರಿಸುವ ಮೂಲಕ ಈ ಸಮುದಾಯಗಳಿಗೆ ಘೋರ ಅನ್ಯಾಯವೆಸಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್ ಗಾಂಧಿ ಗಮನಿಸುವರೇ?
ಈ ತಬ್ಬಲಿ ಸಮುದಾಯಗಳನ್ನು ತಮ್ಮ ಸಂಪುಟ ಗುರುತಿಸಿರುವ ವಿಧಾನ ಹಾಗೂ ವರ್ಗೀಕರಣ ಸಮರ್ಥನೀಯವಲ್ಲ. ತಮ್ಮ ಸರ್ಕಾರದ ಈ ನಿರ್ಧಾರ ಈ ಅವಕಾಶ ವಂಚಿತ ಸಮುದಾಯವನ್ನು ಮತ್ತಷ್ಟು ಅವಕಾಶಗಳಿಂದ ವಂಚಿಸುತ್ತದೆ. ಇದರಿಂದ ಈ ಸಮುದಾಯ ಎಲ್ಲ ರೀತಿಯಿಂದಲೂ ಮತ್ತಷ್ಟು ವಂಚಿತರಾಗುತ್ತಾರೆ. ಇದು ನಿಮ್ಮ ಗಮನದಲ್ಲಿದೆ ಎಂದು ನಾವು ಭಾವಿಸುತ್ತೇವೆ. ಈ ತಳಸ್ತರದ ಜನರಿಗೆ ನ್ಯಾಯ ದೊರೆತಾಗ ಮಾತ್ರ ಸಾಮಾಜಿಕ ನ್ಯಾಯದ ಆಶಯ ಈಡೇರಲು ಸಾಧ್ಯ. ಒಂದು ಮಟ್ಟಿಗೆ ಈಗಾಗಲೇ ಮುಂದುವರಿದ ಸಮುದಾಯಗಳ ಜೊತೆ ಸೇರಿಸಿರುವುದು ಸಾಮಾಜಿಕ ನ್ಯಾಯ ಎನಿಸುವುದಿಲ್ಲ.ಈ ಅಲೆಮಾರಿ ಸಮುದಾಯಗಳಿಗೆ ಮೊದಲೇ ಶಿಕ್ಷಣದ ಅರಿವಿಲ್ಲ. ಸಾಮಾಜಿಕ ಆರ್ಥಿಕ ಸಮಾನತೆ ದೂರದ ಮಾತು. ಈ ಸಮುದಾಯಗಳು ತಮ್ಮ ಬದುಕಿಗಾಗಿ ಹಲವು ವೇಷಗಳನ್ನು ಧರಿಸಿಕೊಂಡು ಬೀದಿಯಲ್ಲಿ ಭಿಕ್ಷೆ ಬೇಡುತಾ ಬದುಕನ್ನು ಕಟ್ಟಿಕೊಳ್ಳಲು ಊರಿಂದ ಊರಿಗೆ ತಿರುಗುವ ಪರಿಸ್ಥಿತಿ ಇದೆ. ಈ ಸಮುದಾಯಗಳು ಒಂದೆಡೆ ನೆಲೆಗೊಳ್ಳುವ ಮೂಲಕ ಘನತೆಯ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದು, ಶೈಕ್ಷಣಿಕ ಸವಲತ್ತುಗಳಿಲ್ಲದೆ, ಉದ್ಯೋಗಗಳನ್ನು ಪಡೆಯದೆ ಅಲೆಯುತ್ತಲೇ ಬದುಕನ್ನು ಸಾಗಿಸುತ್ತಿರುವ ಈ ಸಮುದಾಯಗಳ ಅಭಿವೃದ್ಧಿ ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಬೇಕೆಂದು ನಾವು ಒತ್ತಾಯಿಸುತ್ತೇವೆ. ಈ ಹಿಂದೆ ನಿಮ್ಮ ನಾಯಕತ್ವದಲ್ಲಿಯೇ ಅಲೆಮಾರಿ ಸಮುದಾಯಗಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಿರಿ. ಈ ಸಮುದಾಯಗಳ ಸಂಸ್ಕೃತಿ, ಆಚರಣೆ, ಬದುಕು ನಮ್ಮ ನಾಡಿನ ಜನಮಾನಸದ ಭಾಗವೇ ಆಗಿದೆ. ಅವರು ಬಳಸುವ ಭಾಷೆ, ಉಡುಗೆ ತೊಡುಗೆ, ಸಂಸ್ಕೃತಿ ಮತ್ತು ಬದುಕು ನಮ್ಮ ನಾಡಿನ ಅಸ್ಮಿತೆಗೆ ಮತ್ತಷ್ಟು ‘ಮೆರುಗು’ ನೀಡುತ್ತದೆ. ಈ ಸಮುದಾಯಗಳ ಅಭಿವೃದ್ಧಿ ನಾಡಿನ ಅಭಿವೃದ್ಧಿಯಾಗುತ್ತದೆ. ಇವರ ಬದುಕು ವೈವಿಧ್ಯತೆ ಮತ್ತು ಅಸ್ಮಿತೆಯ ಭಾಗವಾಗಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ‘ಮೆರುಗು’ ತಂದಿದೆ. ಅಲೆಮಾರಿಗಳ ಬದುಕು ಹಸನಾಗಿ ಸುಸ್ಥಿರವಾಗಿದ್ದರೆ ಮಾರ ಅವರ ಸಂಸ್ಕೃತಿ, ಭಾಷೆ ಮತ್ತು ಆ ಸಮುದಾಯ ಉಳಿಯುತ್ತದೆ ಎಂದು ತಿಳಿಸಿದ್ದಾರೆ.
ಈ ಎಲ್ಲವನ್ನೂ ಅರಿತಿರುವ ತಾವುಗಳು ನ್ಯಾಯಮೂರ್ತಿ ನಾಗಮೋಹನ್ದಾಸ್ ಆಯೋಗ ಗುರುತಿಸಿದ್ದಂತೆ 59 ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ವರ್ಗವೆಂದು ವಿಂಗಡಿಸಿ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕೆಂದು ನಾವು ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ. ನಿಮ್ಮ ನೇತೃತ್ವದ ಸರ್ಕಾರ ಈ ಅಲೆಮಾರಿ ಸಮುದಾಯಗಳಿಗೆ ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವಂತೆ ಅನುವು ಮಾಡಿ ಅವರ ಭಾಷೆ, ಸಂಸ್ಕೃತಿ ಮತ್ತು ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಅವರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸುತ್ತೇವೆ.
ಸಮಾನ ಮನಸ್ಕ ಪ್ರತಿನಿಧಿಗಳು
- ನಿರಂಜನಾರಾಧ್ಯ ವಿ.ಪಿ., ಬೆಂಗಳೂರು
- ಬಸವರಾಜ ಸೂಳಿಭಾವಿ ಗದಗ
- ಡಾ. ಎಚ್ ಎಸ್ ಅನುಪಮಾ, ಕವಲಕ್ಕಿ
- ರಘನಂದನ ರಂಗಕರ್ಮಿ ಬೆಂಗಳೂರು
- ಡಾ. ರಾಜಶೇಖರ ನಾರನಾಳ ಗಂಗಾವತಿ
- ಅಶೋಕ ಶೆಟ್ಟರ ಧಾರವಾಡ
- ಕೆ.ಪಿ. ಲಕ್ಷ್ಮಣ ಬೆಂಗಳೂರ
- ಸನತಕುಮಾರ ಬೆಳಗಲಿ ಧಾರವಾಡ
- ಡಿ.ಎಸ್. ಚೌಗಲೆ ಬೆಂಗಳೂರು
- ಬಂಜಗೆರೆ ಜಯಪ್ರಕಾಶ ಹಾರೋಹಳ್ಳಿ
- ರಾಜಾರಾಂ ತಲ್ಲೂರು, ಉಡುಪಿ
- ಮೂಡ್ನಾಕೂಡು ಚಿನ್ನಸ್ವಾಮಿ ಬೆಂಗಳೂರು
- ಸಂಜ್ಯೋತಿ ವಿ.ಕೆ ಬೆಂಗಳೂರು
- ಅಶೋಕ್ ಡಿ’ಸೋಜ, ಬೆಳಗಾವಿ
- ಬಾ ಹ ರಮಾಕುಮಾರಿ ತುಮಕೂರು
- ಮುತ್ತು ಬಿಳಿಯಲಿ ಗದಗ
- ಡಾ. ನರಸಿಂಹಪ್ಪ ಜಿ.ಎಂ. ಬೆಂಗಳೂರು
- ಚಂದ್ರಶೇಖರ ತಾಳ್ಯ ಚಿತ್ರದುರ್ಗ
- ಎನ್.ಎಸ್ ಶಂಕರ್, ಬೆಂಗಳೂರು
- ಮಂಗ್ಳೂರ ವಿಜಯ, ಬೆಂಗಳೂರು
- ಜಿ.ಪಿ ಬಸವರಾಜು ಮೈಸೂರು
- ಕುಂ. ವೀರಭದ್ರಪ್ಪ ಕೊಟ್ಟೂರು
- ರಹಮತ್ ತರೀಕೆರೆ ಹೊಸಪೇಟೆ
- ಕಾಳೇಗೌಡ ನಾಗವಾರ ಮೈಸೂರು
- ಲಕ್ಷ್ಮೀಪತಿ ಕೋಲಾರ
- ರಂಜಾನ ದರ್ಗಾ ಧಾರವಾಡ
- ಚಿಕ್ಕಪ್ಪನಹಳ್ಳಿ ಷಣ್ಮುಖ ತುಮಕೂರು
- ಡಾ. ರಾಮಲಿಂಗಪ್ಪ ಬೇಗೂರ ಬೆಂಗಳೂರು
- ಶಶಾಂಕ ಎಸ್ ಆರ್ ಬೆಂಗಳೂರು
- ಹೇಮಲತಾ ಮೂರ್ತಿ ಬೆಂಗಳೂರು
- ಕೆ. ಎಸ್. ಪಾರ್ಥಸಾರಥಿ ಬೆಂಗಳೂರು
- ಬಿ. ಸುರೇಶ ಬೆಂಗಳೂರು
- ಸಿ ಎಚ್ ಭಾಗ್ಯ ಬೆಂಗಳೂರು
- ಬಸವರಾಜು ಬೆಂಗಳೂರು
- ಕಾಡಶೆಟ್ಟಿಹಳ್ಳಿ ಸತೀಶ್ ತಿಪಟೂರು
- ಹಸನ್ ನಯೀಂ ಸುರಕೋಡ ರಾಮದುರ್ಗ
- ಟಿ. ರತ್ನಾಕರ ಕುಕನೂರು
- ವಿಶುಕುಮಾರ ಬೆಂಗಳೂರು
- ಸುನಂದಾ ಕಡಮೆ ಹುಬ್ಬಳ್ಳಿ
- ಮಲ್ಲಿಕಾರ್ಜುನ ಸಿದ್ದಣ್ಣನವರ ಹುಬ್ಬಳ್ಳಿ
- ಉಮಾಶಂಕರ ಜರೆ ಬಾಗಲಕೋಟ
- ಡಾ ಜೀವನಸಾಬ ವಾಲಿಕಾರ ಬಿನ್ನಾಳ
- ಡಿ. ಎಂ ನಧಾಪ್ ಅಫ್ಜಲಪುರ
- ಶರಣಪ್ಪ ಬಾಚಲಾಪುರ ಕೊಪ್ಪಳ
- ಕುಮಾರ್ ಲಾಲ್ ನದಾಫ್ ಧಾರವಾಡ
- ರಾಜೇಂದ್ರ ಪ್ರಸಾದ ಮಂಡ್ಯ
- ರೇಣುಕಾ ನಿಡಗುಂದಿ ದೆಹಲಿ
- ಅಕ್ಷತಾ ಹುಂಚದಕಟ್ಟೆ ಶಿವಮೊಗ್ಗ
- ಸುಪರ್ಣ ಕೆ ಎಂ ಚಿಕ್ಕಮಗಳೂರು
- ಬಿ. ಆರ್. ಮಂಜುನಾಥ ಬೆಂಗಳೂರು
- ವೀರೇಶ ಶಾನುಭೋಗರ ಅಣ್ಣಿಗೇರಿ
- ಅಬ್ದುಲ್ ಹೈ, ತೋರಣಗಲ್ಲ
- ರಾಯಸಾಬ ದರ್ಗಾದವರ ಹುಬ್ಬಳ್ಳಿ
- ಜಯಲಕ್ಷ್ಮೀ ಪಾಟೀಲ ಬೆಂಗಳೂರು
- ಜಯದೇವಿ ಗಾಯಕವಾಡ ಬೀದರ
- ಸುಭಾಸ ರಾಜಮಾನೆ ಬೆಂಗಳೂರು
- ನಂದಕುಮಾರ ಪಿ ಗುಲ್ಬರ್ಗ
- ರವಿಕುಮಾರ ಎನ್ ಶಿವಮೊಗ್ಗ
- ಕೃಷ್ಣೇಗೌಡ ಟಿ ಎಲ್ ತಲಗವಾಡಿ
- ಪೂಜಾ ಸಿಂಗೆ ಗದಗ
- ಬಸವರಾಜ ಬೋದೂರ ಯಲಬುರ್ಗ
- ಸುರೇಶ ಹುಟ್ಟಿ
- ಕೆ. ರೋಹಿತ ಹಾಸನ
- ಡಾ. ಮುದ್ದಪ್ಪ ಆರ್ ವಿ
- ಶರಣು ಈಳಿಗನೂರ
- ರಜನಿ ಗರುಡ ಧಾರವಾಡ
- ಪೃಥ್ವಿರಾಜ ಬಿ ಎಲ್ ಮಂಡ್ಯ
- ಸುರೇಶ ಅಂಗಡಿ ಹೂವಿನ ಹಡಗಲಿ
- ಎಸ್ ಎ ಗಫಾರ ಕೊಪ್ಪಳ
- ರವೀಂದ್ರಪ್ರಕಾಶ ಯಲಬುರ್ಗ
- ಬಾಸ್ಕರ್ ವೈ ಬೆಂಗಳೂರ
- ಶರಣು ಶೆಟ್ಟರ ಕಲ್ಲೂರ
- ಫಾತಿಮಾ ರಲಿಯಾ ಉಡುಪಿ
- ಡಾ. ಮಹೇಂದ್ರ ಮೂರ್ತಿ ದೇವನೂರು
- ಎಚ್.ಎಸ್.ಬಸವಪ್ರಭು ಕಲಬುರಗಿ
- ಬಸವರಾಜ ಶೀಲವಂತರ ಕೊಪ್ಪಳ
- ಶಶಿಧರ ತೋಡಕರ, ಧಾರವಾಡ
- ಕಲ್ಲೇಶ ಕುಂಬಾರ, ತೇರದಾಳ
- ಡಾ. ಎಚ್. ಬಿ. ಪೂಜಾರ ಬೆಟಗೇರಿ
- ಡಾ. ಪ್ರತಾಪ್ ಸಿಂಗ್ ತಿವಾರಿ, ಮಾಜಿ ಕುಲಪತಿ, ಗುಲ್ಬರ್ಗ
- ಶೀಲಾ ತಿವಾರಿ, ಸಂಪಾದಕಿ, ಚಿಂತಕ ಕನ್ನಡ ದಿನ ಪತ್ರಿಕೆ, ಕಲಬುರ್ಗಿ
- ಶಿವರಾಜ್ ಮೋತಿ, ಬೆಂಗಳೂರು
- ರಾಜೇಶ್ ಶಿಂಧೆ, ಬೀದರ್
- ಚಂದ್ರು ವಿ ವರ್ತೂರು, ಬೆಂಗಳೂರು
- ಅಜಿತ್ ಬೆಳ್ಳಿಬಟ್ಲು, ತುಮಕೂರು
- ಸಿ ಡಿ ಚಿನ್ನರಾಜ(ಮೆಟ್ರಿ), ಬೆಂಗಳೂರು
- ರೇಖಾಂಭ ಶಿವಮೊಗ್ಗ
- ಎಚ್ ಎಸ್ ಹರೀಶ್ ಬೆಂಗಳೂರು
- ಡಾ. ಹುಸೇನಪ್ಪ ಅಮರಾಪುರ ಸಿಂಧನೂರ
- ಶ್ರೀಧರ ಎಸ್.ನಾಯ್ಕ, ಶಿರಸಿ
- ಧರ್ಮರಾಜ ಎಂ. ಕಲ್ಯಾಣಿ -ಬೆಂಗಳೂರು
- ಕೆ. ಶ್ರೀನಾಥ ಬೆಂಗಳೂರು
a. ಜ್ಯೋತಿ ಎ. ಬೆಂಗಳೂರು - ಚಂದ್ರಶೇಖರ ರೋಣದ ನರೇಗಲ್ಲ
- ನಾಗರಾಜ್ ಹೆತ್ತೂರು, ಹಾಸನ
- ನಾಗರಾಜ ಹರಪನಹಳ್ಳಿ ಕುಮಟಾ
- ಗೋವಿಂದರಾಜು ಚಾಮರಾಜನಗರ
- ಅನಂತ ಕಟ್ಟಿಮನಿ ಲಕ್ಷ್ಮೇಶ್ವರ
- ನಾ ದಿವಾಕರ ಮೈಸೂರು
- ಗಿರಿಧರ ಕಾರ್ಕಳ
- ಸಿಕಂದರ ಅಲಿ ತೋರಣಗಲ್ಲ
- ಶ್ರೀಪಾದ ಭಟ್ ಬೆಂಗಳೂರು
- ಗೌರೀಶಾರಾಧ್ಯ, ಗೌರಿಬಿದನೂರು.
- ಶ್ರೀನಿವಾಸ ಶಾಸ್ತ್ರಿ ಹುಬ್ಬಳ್ಳಿ
- ಕೃಷ್ಣ ಜಿಂಗಾಡೆ ಅಣ್ಣಿಗೇರಿ
- ಅನಿಲ ಹೊಸಮನಿ, ವಿಜಯಪುರ
- ವಿಜುಗೌಡ ಕಾಳಶೆಟ್ಟಿ, ತನು ಫೌಂಡೇಶನ್, ವಿಜಯಪುರ
- ಓದೇಶ ಸಕಲೇಶಪುರ ರಾಮನಗರ
- ಕೆ ಆನಂದ್ ಕಾರೂರು, ಉಡುಪಿ ಜಿಲ್ಲೆ
- ಎನ್.ಕೆ. ಮೋಹನ್ ರಾಂ ಬೆಂಗಳೂರು
- ಸರೋಜ ಎಂ.ಎಸ್ ಸಾಗರ
- ಡಾ. ಮಣಿಶ್ರೀ, ಮೈಸೂರು
- ಮಂಜುಳಾದೇವಿ ಬಿ. ಕೆ ಬೆಂಗಳೂರು
- ಎ. ಬಿ. ಹಿರೇಮಠ ಮುಂಡರಗಿ
- ಎಸ್. ಜಿ ಚಿಕ್ಕನರಗುಂದ ರಾಮದುರ್ಗ
- ಸುಧಾ ಸಿ ಹಗರಿಬೊಮ್ಮನಹಳ್ಳಿ
- ಮೇಟಿ ಮಲ್ಲಿಕಾರ್ಜುನ ಶಿವಮೊಗ್ಗ
- ಪ್ರೊ. ತುಮಕೂರು ಚಂದ್ರಕಾಂತ ತುಮಕೂರು
- ಡಾ. ರವೀಂದ್ರ ಬೆಳ್ಳಿ ಬಿಜಾಪುರ
- ಸಿದ್ಧಾರ್ಥ್ ಸಿಂಗೆ,ಅಥಣಿ
- ಸ್ವಾಮಿ ಪೊನ್ನಾಚಿ
- ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಬೆಂಗಳೂರು
- ವಿಜಯಕಾಂತ ಪಾಟೀಲ
- ಕೆ.ಎಚ್.ಪಾಟೀಲ ಧಾರವಾಡ
- ಶಾಂತಕುಮಾರ ಹರ್ಲಾಪುರ ಅಣ್ಣಿಗೇರಿ
- ಸದಾಶಿವ ಸೊರಟೂರ ದಾವಣಗೆರೆ
- ಜಬೀವುಲ್ಲಾ ಎಂ ಅಸದ್
- ,ರಮೇಶ ಕೋಳೂರ ಗದಗ
- ವಿ.ಬಿ.ಮಲ್ಲಪ್ಪ ಬಳ್ಳಾರಿ
- ಕೆ.ಬಿ.ವೀರಲಿಂಗನಗೌಡ್ರ ಸಿದ್ದಾಪುರ
- ಸಾಸ್ವೆಹಳ್ಳಿ ಸತೀಶ್ ಶಿವಮೊಗ್ಗ
- ಮಾರುತಿ ಹಿಪ್ಪರಗಿ. ಮುದ್ದೇಬಿಹಾಳ
- ಡಾ.ಸಂಪಿಗೆ ನಾಗರಾಜ್
- ಶಿವಶಂಕರ ಬಣಗಾರ ಹೊಸಪೇಟೆ
- ಸಂತೆಬೆನ್ನೂರ ಫೈಜ್ನಟ್ರಾಜ್ ಹರಿಹರ,
- ಆನಂದ ಋಗ್ವೇದಿ ದಾವಣಗೆರೆ
- ಕುಮಾರ್ ಯಾಚನ
- ಡಾ. ನವೀನ ಹಳೇಮನೆ
- ಅನುಸೂಯ ಸತೀಶ್ ಬೆಂಗಳೂರು
- ಬಾ.ಚೆನ್ನೇಶ, ಹೊನ್ನಾಳಿ
- ಸುಶೀಲಾದೇವಿ, ದಾವಣಗೆರೆ
- ರಂಗಮ್ಮ ಹೊದೆಕಲ್ ತುಮಕೂರು
- ರಮೇಶ ನೆಲ್ಲಿಸರ
- ಶೇಖಣ್ಣ ಕವಳಿಕಾಯಿ ಗದಗ
- ಮಂಜುನಾಥ ಕೊಡಗವಲ್ಲಿ
- ಚಿಕ್ಕಮಠ ಎಫ್.ವಿ. ಧಾರವಾಡ
- ಮಹಾಂತೇಶ ಕೊತಬಾಳ ಕೊಪ್ಪಳ
- ಪೂರ್ಣಿಮಾ ರಾಜಾರಾವ್ ಬೆಂಗಳೂರು
- ಸಿದ್ಧರಾಮ ತಳವಾರ
- ಕೇಶವ ಕಟ್ಟಿಮನಿ ಕೊಪ್ಪಳ
- ಶಿವಾನಂದ ತಮ್ಮಣ್ಣವರ ಗದಗ
- ಡಾ.ಸಿ ಕೊಟ್ರೇಶ
- ಜೋಶೆಫ್ ಮಲ್ಲಾಡಿ , ಧಾರವಾಡ
- ಡಾ. ವಸಂತಕುಮಾರ್ ಕಡ್ಲಿಮಟ್ಟಿ, ಇಳಕಲ್.
- ಹಾರೋಹಳ್ಳಿ ರವೀಂದ್ರ
- ಮಹೇಶ್ ಹೊರಕೇರಿ ಹುಬ್ಬಳ್ಳಿ
- ರಾಜೇಸಾಬ ಬಾಗವಾನ ಗಜೇಂದ್ರಗಡ
- ಪ್ರಕಾಶ ಕೋನಾಪುರ ಶಿವಮೊಗ್ಗ
- ಚೇತನ ಜಮಖಂಡಿ, ಬೆಳಗಾವಿ
- ದಾದಾಪೀರ್ ನವಲೇಹಾಳ ದಾವಣಗೆರೆ
- ಕೇಶವಮೂರ್ತಿ ಪಿ. ಹಿರಿಯೂರು
- ವಾಸುದೇವ ಕಾಳೆ, ವಿಜಯಪುರ
- ಆರ್ ಕುಮಾರ ಉದ್ದೂರು
- ಪರಶು ಕಾಳಿ ಗದಗ
- ಖಾಸಿಂಅಲಿ ಜಿ ಹುಜರತಿ, ಹಂಪಿ
- ಶಶಿರಾಜ್ ಹರತಲೆ
- ಚಂದ್ರಶೇಖರ ಗೋರೆಬಾಳ ಸಿಂಧನೂರ
- ಅಶೋಕ ಟಿ ಕಟ್ಟಿಮನಿ ಹುಬ್ಬಳ್ಳಿ
- ಶಿವಕುಮಾರ್ ಗುಳಘಟ್ಟ (ನೈಸರ್ಗಿಕ ಬೇಸಾಯಗಾರ)
- ಮಲ್ಲಿಕಾರ್ಜುನ ಹಿರೇಮಠ ಧಾರವಾಡ
- ಚಂದ್ರಶೇಖರ ಕಗ್ಗಲ್ಲಗೌಡ್ರು ಶಿವಮೊಗ್ಗ
- ಪ್ರಿಯಾಂಕ ಮಾವಿನಕರ ಕಲ್ಬುರ್ಗಿ
- ಆರ್.ಎಚ್.ನಟರಾಜ್, ಬೆಂಗಳೂರು
- ಮಹಮ್ಮದ್ ಪೀರ್ ಲಟಗೇರಿ, ಇಳಕಲ್
- ಹೇಮಂತ ಭೂತ್ನಾಳ ಇಲ್ಕಲ್ಲ
- ಎಸ್.ಎಂ.ನೆರಬೆಂಚಿ, ಮುದ್ದೇಬಿಹಾಳ
- ಎನ್ ಕೆ ಶೇಷಾದ್ರಿ, ಸಿರುಗುಪ್ಪ
- ದಾದಾಯಾತ ಬಾವುಜಿ ಹಂಪಿ
- ಮಹೇಶಕುಮಾರ ಹನಕೆರೆ, ಬರಹಗಾರ ಮಂಡ್ಯ
- ನಿಂಗು ಬೆಣಕಲ್ಲ ಕೊಪ್ಪಳ
- ಅಭಿಗೌಡ ಮಂಡ್ಯ
- ಪ್ರಕಾಶ ಬಿ ಶಿರಸಿ
- ಡಾ ನವೀನ್ ಹಳೇಮನೆ
- ಬಸವರಾಜ ಕುರುಗೋಡ ಹಿರೇನಾಗನೂರ
- ಶೌಕತ್ ಅಲಿ ಆಲೂರ ಗುಲ್ಬರ್ಗ
- ದೇವರಾಜ ಹುಣಸಿಕಟ್ಟಿ ರಾಣೇಬೆನ್ನೂರ
- ಮಾರುತಿ ಗೋಖಲೆ ಕಲ್ಬುರ್ಗಿ
- ಗುಲಾಬಿ ಬಿಳಿಮಲೆ ಮಂಗಳೂರು
- ಡಾ. ಸುಭಾಷ ರಾಮರಥ ಹುಬ್ಬಳ್ಳಿ
- ಡಾ. ಕೆ ಶಶಿಕಾಂತ ಲಿಂಗಸುಗೂರು
- ಇಮ್ತಿಯಾಜ್ ಹುಸೇನ ದಾವಣಗೆರೆ
- ಎಸ್ ನಂದೀಶ ನೆಲಮಂಗಲ
- ಕೆ ನಾರಾಯಣ ಸ್ವಾಮಿ, ಬೆಂಗಳೂರು
- ಮಾದವಿ ಭಂಡಾರಿ ಶಿರಸಿ
- ಕೆ ನಾರಾಯಣ ಸ್ವಾಮಿ, ಬೆಂಗಳೂರು
- ವೀರಭದ್ರ ಕೌದಿ-ಬೈಲಹೊಂಗಲ
- ಅರುಣ ಭಾಸ್ಕರ ಬೆಂಗಳೂರು
- ಬಿ. ಪೀರ್ ಬಾಷಾ ಹೊಸಪೇಟೆ
- ಬಿ. ಮಹೇಶ್ ಹರವೆ ಮೈಸೂರು
- ಭೀಮೇಶ ಯರಡೋಣಿ ಗುಡಗೇರಿ
- ನಂದಕುಮಾರ ಕುಂಬ್ರಿ ಉಬ್ಬು
- ಡಾ. ಮಹೇಂದ್ರ ಕುಮಾರ ಬಿ ಪಿ ದಾಂಡೇಲಿ
- ಮಹಾಂತಪ್ಪ ನಂದೂರ ಹುಬ್ಬಳ್ಳಿ
- ಡಾ. ವೆಂಕಟಯ್ಯ ಅಪ್ಪಗೆರೆ ಬಳ್ಳಾರಿ
- ಚಂದುಸಾಬ ಚವಡಾಪುರ ಚಿಕ್ಕೋಡಿ
- ತ್ರೀಭುವನೇಶ್ವರಿ ಗೌರಿಬಿದನೂರು
- ಅಚುಶ್ರೀ ಬಾಂಗೇರು ದಕ
- ಬಿ. ಸಿದ್ದಪ್ಪ ಹಿರಿಯೂರ
- ವಿ. ಆರ್. ಕಾರ್ಪೆಂಟರ್ ಬೆಂಗಳೂರು
- ಬಸವರಾಜ ಬಿ ಸಿ ಬೆಂಗಳೂರು
- ಮುತ್ತುರಾಜು ಬೆಂಗಳೂರು
- ಡಾ. ವಿ ಎ ಲಕ್ಷ್ಮಣ ಬೆಂಗಳೂರು
- ಅಶ್ವಜೀತ ದಂಡೀನ ಬೀದರ
- ,* ಬಸವನಗೌಡ ಸುಳೇಕಲ್ಲ ಕನಕಗಿರಿ
- ಮಹಾಂತೇಶ ಬಿ. ನಿಟ್ಟೂರ ದಾವಣಗೆರೆ
- ಅನಂತ ಕಟ್ಟೀಮನಿ ಲಕ್ಷ್ಮೇಶ್ವರ
- ಗೀತಾ.ಎಂ.ಹೀರೊಳ್ಳಿ (ಕಲ್ಬುರ್ಗಿ)
- ದೊಡ್ಡಿಶೇಖರ್
- ಚಿಕ್ಕಣ್ಣ ಬಿ ಎಸ್ ತುಮಕೂರು
- ಅಭಿಷೇಕ ಎಂ. ಕುಪ್ಯಂ
- ಎನ್.ಟಿ.ಅನಂತಪದ್ಮನಾಭ ಬೆಂಗಳೂರು
- ರುಕ್ಮಿಣಿ ವಿ ಬೆಂಗಳೂರು
- ಸತೀಶ ಕ ಪಾಶಿ ಗದಗ
- ,* ಬಸವರಾಜ ಬ್ಯಾಗವಾಟ ದೇವದುರ್ಗ
- ಮಲ್ಲಿಕಾರ್ಜುನ ಗದ್ದನಕೇರಿ ಬಿಜಾಪುರ
- ಶರಣಪ್ಪ ಸಂಗನಾಳ ಹಾವೇರಿ
- ಸರಸ್ವತಿ ಚಿತ್ರದುರ್ಗ
- ಬಸವರಾಜ ಹೃತಾಕ್ಷಿ
- ಲಕ್ಷ್ಮಣ ಮಂಡಲಗೇರಾ
- ಗುರುಪ್ರಸಾದ ಬಿಜಿ ತಾಳಿಕೋಟಿ
- ಬಸವರಾಜ ನಾಡಗೌಡ ಹುನಗುಂದ
- ಪ್ರಗಾಥ ಕೆ ಆರ್ ಬೆಂಗಳೂರು
- ಸಿ ಎಸ್ ಭೀಮರಾಯ
- ಎಸ್ ಕೆ ರಾಜೂಗೌಡ
- ಮಲ್ಲಿಕಾರ್ಜುನ ಭಾಸ್ಕರ
- ಸತೀಶ ಚಿಕ್ಕಮಗಳೂರ
- ಡಾ.ಪ್ರದೀಪ ಆರ್.ಎನ್, ಮಂಡ್ಯ
- ಅನಿರೀಕ್ಷಿತ ನಾರಾಯಣ
- ಉಗ್ರಸಿಂಹೇಗೌಡ ಮೈಸೂರು
- ಸಂಕೇತ ಪಾಟೀಲ, ಬೆಂಗಳೂರು
- ನಾರಾಯಣ ರವಿಶಂಕರ
- ನವೀನ್ ಪೂಜಾರಳ್ಳಿ
- ಸೋಮಶೇಖರ್ ಪಡುಕರೆ
- ಅಬ್ಬೂರ ಪ್ರಕಾಶ
- ಪ್ರಸನ್ನ ಎಚ್ ಜಿ
- ಭಾಗ್ಯಲಕ್ಷ್ಮಿ
- ಡಾ. ಮಂಜುನಾಥ, ಬೆದವಟ್ಟಿ
- ಡಾ.ಎಂ.ಡಿ.ಒಕ್ಕುಂದ ಧಾರವಾಡ
- ಡಾ. ಪ್ರಸಾದ್ ಗೌಡ, ಚನ್ನಪಟ್ಟಣ
- ಫಕ್ಕಿರೇಶ ಹುಳ್ಳಳ್ಳಿ ದಾವಣಗೆರೆ
- ಮನುಶ್ರೀ ಬಾಬು
- ವಿನಯಾ ಒಕ್ಕುಂದ ಧಾರವಾಡ
- ಶಿವಶಂಕರ ಬಣಕಾರ ಹೊಸಪೇಟೆ
- ಗುರುಬಸವ ಬರಗೂರ
- ಮಂಜುಳ ಬಿವಿ ಬೆಂಗಳೂರು
- ಮೈಲಾರಪ್ಪ ಡಿ ಎಚ್
- ಕೆ ವಿ ವೆಂಕಟಶಿವಪ್ಪ
- ಕೆ ಅಮರೇಶ ದೊರೆ
- ಬಾಲಾಜಿ ಕೆ ಕಾಂಬಳೆ
- ಪ್ರೊ ಗಂಗರಾಮ್ ಚಂಡಾಲ ಮೈಸೂರ್
- ಕೆ. ಆರ್ ದುರ್ಗಾದಾಸ ಧಾರವಾಡ
- ಕಲ್ಲಯ್ಯ ಚಿಕ್ಕಮಗಳೂರು
- ಉಷಾ ಅಂಬ್ರೋಜ್ ಮೈಸೂರು
- ರಮೇಶ ಮಲ್ಲಪ್ಪ ಬಳಗಾರ ಬೆಳಗಾವಿ
- ಬಸವರಾಜ ಜಾಲವಾದಿ ಬಿಜಾಪುರ
- ಇಂದುಮತಿ ಲಮಾಣಿ ಬಿಜಾಪುರ
- ಲೋಹಿತ ಸುಡುಗಾಡು ಸಿದ್ಧ ಚಿಕ್ಕಮಗಳೂರು
- ರಾಘವೇಂದ್ರ ಬಿ ಮಧುಗಿರಿ
- ಕೆ. ಬಿ. ಗೋನಾಳ ಕೊಪ್ಪಳ
- ಶಂಕರಗೌಡ ಸಾತ್ಮಾರ ಹುಬ್ಬಳ್ಳಿ
- ಎಂ ಗಂಗಾಧರ ಆರ್ ಸಿ ಎಫ್ ಸಿಂಧನೂರ
- ಸೌಮ್ಯ ವಿ, ಬೆಂಗಳೂರು
- ರವಿಕುಮಾರ ಎನ್. ಎಸ್. ತುಮಕೂರು
- ಸತೀಶ್ ಎ.ಎಂ. ಕೊರಟಗೆರೆ
- ಹನುಮಂತಪ್ಪ ಬನ್ನಿ
- ಹುಚ್ಚೇಗೌಡ ಕುಪ್ಯ
- ಡಾ. ನಾಗಭೂಷಣ ಬಗ್ಗನಾಡು
- ಪಾರ್ಥ ಸಿರವಾರ, ರಾಯಚೂರ್