ಶಿವಮೊಗ್ಗ, ಮೈಸೂರಿನಲ್ಲಿ ನಡೆಯುವ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ 5 ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನಕ್ಕೆ ಪತ್ರಿಕಾ ವಿತರಕರು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆ ಭಾಗವಹಿಸುವಂತೆ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ ಅಧ್ಯಕ್ಷರಾದ ಮಾಲತೇಶ್ ಕರೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಕಾರ್ಯಕ್ರಮ 27-08-2025ರ ಬೆಳಿಗ್ಗೆ 8 ಗಂಟೆಗೆ ಮುಂಜಾನೆ ಮುಕ್ತ ವಿಶ್ವ ವಿದ್ಯಾನಿಲಯದ ಮುಂಭಾಗದಲ್ಲಿರುವ ಕುವೆಂಪು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು ನಂತರ ಉಪಹಾರ 9:30ರಿಂದ ನೋಂದಣಿ ಕಾರ್ಯಕ್ರಮ 11:30ಕ್ಕೆ ಉದ್ಘಾಟನೆ 1 ಗಂಟೆಗೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಿರಿಯರಿಗೆ ಗೌರವ ಸಮರ್ಪ ಣೆ 2:30 ಕ್ಕೆ ಭೋಜನ 3:00ಗೆ ಸಮಾರೋಪ ಸಮಾರಂಭ ಕಾರ್ಯಕ್ರಮದ ಸ್ಥಳವು ಮುಕ್ತ ವಿಶ್ವವಿದ್ಯಾನಿಲಯ ಘಟಿಕೋತ್ಸವ ಭವನ ಹುಣಸೂರು ರಸ್ತೆಯಲ್ಲಿ ಆಯೋಜಿಸಲಾಗಿದೆ .
ಮೈಸೂರುನಲ್ಲಿ ನಡೆಯಲಿದೆ ನಮ್ಮ ಎಲ್ಲಾ ಪತ್ರಿಕಾ ಸಂಸ್ಥೆಗಳ ಮಾಲೀಕರಿಗೂ ಸಂಪಾದಕರಿಗೂ ಪ್ರಸಾರರಂಗ ವಿಭಾಗ ಅಧಿಕಾರಿಗಳಿಗೂ ರಾಜಕೀಯ ಗಣ್ಯರು ಹಾಗೂ ನಗರ ಜಿಲ್ಲಾ ತಾಲೂಕು ಸಂಘಟನೆಗಳಿಗೆ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ದಿನಪತ್ರಿಕ ವಿತರಕರಿಗೆ ಏಜೆಂಟರಿಗೆ ಪತ್ರಿಕೆ ಹಂಚುವ ಹುಡುಗರು ಈ ಕಾರ್ಯ ಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾರು ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ವಿಶ್ವ ಪತ್ರಿಕಾ ದಿನಾಚರಣೆ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಾಮು,ಜಿ, ಹರ್ಷ, ಅಜಿದ್ ಉಲ್ಲಾ, ಯುವರಾಜ್, ಉಮೇಶ್, ಮಂಜುನಾಥ್, ಯೋಗೇಶ್, ಶ್ರೀಧರ್, ಮೂಲ ಸಾಬ್, ದುರ್ಗೋಜಿ, ಪ್ರಾಣೇಶ್, ಜಗದೀಶ್, ಪ್ರವೀಣ್, ಸುರೇಶ್, ಗಣೇಶ್, ಉಪಸ್ಥಿತರಿದ್ದರು.