ಬೀದರ್‌ | ಅ.21, 22ರಂದು ಬಸವಕಲ್ಯಾಣದಲ್ಲಿ 2ನೇ ಸ್ವಾಭಿಮಾನಿ ʼಕಲ್ಯಾಣ ಪರ್ವʼ

Date:

Advertisements

ಬಸವಧರ್ಮ ಪೀಠದ ನಿಷ್ಠಾವಂತ ಸ್ವಾಭಿಮಾನಿ ಶರಣರ ಬಳಗದಿಂದ ಇದೇ ಅಕ್ಟೋಬರ್‌ 21, 22 ರಂದು ಎರಡು ದಿನಗಳ ಕಾಲ ಬಸವಕಲ್ಯಾಣದಲ್ಲಿ 2ನೇ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಬೀದರ್‌ ನಗರದ ಬಸವ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ” ಬಸವಕಲ್ಯಾಣದ ಎಂ.ಎಂ.ಬೇಗ್‌ ಕಲ್ಯಾಣ ಮಂಟಪದಲ್ಲಿ ಕಳೆದ ವರ್ಷ ಮೊದಲನೇ ಸ್ವಾಭಿಮಾನಿ ಕಲ್ಯಾಣ ಪರ್ವ ನಡೆಸಲಾಗಿತ್ತು. ಈ ಬಾರಿಯೂ ಅದೇ ಕಲ್ಯಾಣ ಮಂಟಪದಲ್ಲಿ ಎರಡನೇ ವರ್ಷದ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಲಾಗಿದೆ” ಎಂದರು.

ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ್‌ ಅತಿವಾಳ ಮಾತನಾಡಿ, ” ಕೂಡಲ ಸಂಗಮ ಬಸವ ಧರ್ಮ ಪೀಠಾಧ್ಯಕ್ಷರಾದ ಮಾತೆ ಗಂಗಾದೇವಿಯವರು ಕೆಲವು ಜಂಗಮಮೂರ್ತಿ ಹಾಗೂ ಲಕ್ಷಾಂತರ ಬಸವ ಅನುಯಾಯಿಗಳನ್ನು ದೂರವಿಟ್ಟು ಯಾರದೋ ಕೈಗೊಂಬೆಯಾಗಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕಳೆದ ವರ್ಷ ಎಲ್ಲರೂ ಒಗ್ಗೂಡಿ ಕಲ್ಯಾಣ ಪರ್ವ ಆಯೋಜಿಸೋಣ ಎಂದು ಸಂಧಾನ ಮಾಡಿಕೊಂಡು ಮೋಸ ಮಾಡಿದರು. ಹೀಗಾಗಿ ನಾವು ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಬೇಕಾಯಿತು. ಈ ವರ್ಷವೂ ಅದೇ ಪರಿಸ್ಥಿತಿ ಮುಂದುವರೆದ ಕಾರಣ ಪ್ರತ್ಯೇಕ ಕಲ್ಯಾಣ ಪರ್ವ ಆಯೋಜಿಸಲಾಗುತ್ತಿದೆ” ಎಂದರು.

Advertisements

“ಎರಡು ದಿನಗಳ ಕಾಲ ನಡೆಯುವ ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಬಸವ ಭಕ್ತರು ಪಾಲ್ಗೊಳ್ಳುತ್ತಾರೆ. ಸಮಾರಂಭಕ್ಕೆ ಆಗಮಿಸುವ ಎಲ್ಲರಿಗೂ ಊಟ, ವಸತಿ ಸೌಲಭ್ಯ ಮಾಡಲಾಗುವುದು. ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಕ ಪೂಜ್ಯರು, ಮಾತಾಜೀ ಹಾಗೂ ಬಸವ ಅನುಯಾಯಿಗಳು ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸುತ್ತಾರೆ, ಸಾರ್ವಜನಿಕರು, ಬಸವ ಭಕ್ತರಿಗೆ ದೇಣಿಗೆ ನೀಡಲು ಅವಕಾಶವಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಯುವಕನ ಕಿರುಕುಳಕ್ಕೆ ಮನನೊಂದು ಬಾಲಕಿ ಆತ್ಮಹತ್ಯೆ; ಒಂದು ತಿಂಗಳ ನಂತರ ಪ್ರಕರಣ ದಾಖಲು

ಬೀದರ್‌ ಬಸವ ಮಂಟಪ್‌ ಪೂಜ್ಯ ಸತ್ಯದೇವಿ ಮಾತಾಜೀ ಮಾತನಾಡಿ, “ನಾವು ಬಸವ ಧರ್ಮ ಪೀಠ ಬಿಟ್ಟು ಹೊರಹೋಗಿಲ್ಲ, ಪೂಜ್ಯ ಮಾತೆ ಗಂಗಾದೇವಿ ಅವರೇ ನಮನ್ನು ದೂರವಿಟ್ಟಿದ್ದಾರೆ. ಅವರ ಆಹ್ವಾನ ಮೇರೆಗೆ ಸೆ.19 ರಂದು ಕಲ್ಯಾಣ ಪರ್ವದ ಪೂರ್ವ ಸಿದ್ಧತಾ ಸಭೆಗೆ ಬಸವಕಲ್ಯಾಣಕ್ಕೆ ತೆರಳಿದ ಬಸವ ಅನುಯಾಯಿಗಳಿಗೆ ಸಭೆಗೆ ಪ್ರವೇಶ ನೀಡದಂತೆ ಪೋಲಿಸ್‌ ರನ್ನು ಕರೆಸಿ ನಮನ್ನು ಬಂಧಿಸಿ ಬಿಡುಗಡೆಗೊಳಿಸಿದರು. ಬಸವ ಧರ್ಮ ಆಶ್ರಮದಲ್ಲಿ ನಾವು ಹೋಗಬಾರದೇ? ಹೀಗೆ ಬಂಧಿಸಲು ನಾವೇನು ಭಯೋತ್ಪಾದಕರೇ? ಧರ್ಮಪೀಠ ನಂಬಿಕೊಂಡ ಬಂದ ನಾವುಗಳು ಎಲ್ಲಿ ಹೋಗಬೇಕು ಎಂದು ಪೂಜ್ಯ ಗಂಗಾ ಮಾತಾಜೀ ಹಾಗೂ ಸಿದ್ದರಾಮೇಶ್ವರ ಸ್ವಾಮೀಗಳು ಉತ್ತರಿಸಬೇಕು” ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಶರಣಪ್ಪ ಪಾಟೀಲ್‌, ಓಂಪ್ರಕಾಶ ರೊಟ್ಟೆ, ನಿರ್ಮಲಾ ನಿಲಂಗೆ ಸೇರಿದಂತೆ ಇತರರಿದ್ದರು.

-‌ ವರದಿ: ಸಿಟಿಜನ್‌ ಜರ್ನಲಿಸ್ಟ್‌, ಜಗದೀಶ್ವರ ಬಿರಾದರ್

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X