ಬೀದರ್‌ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ

Date:

Advertisements

ಸೀತಾಫಲ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಸ್ವಾದಿಷ್ಟ, ರೋಗ ನಿರೋಧಕ ಶಕ್ತಿಯೂ ಹೊಂದಿರುವ ಕಾರಣ ಸೀತಾಫಲ ಸೀಜನ್‌ ನಲ್ಲಿ ಒಮ್ಮೆಯಾದರೂ ಈ ಹಣ್ಣು ಸವಿಯಲೇಬೇಕೆಂದು ಜನ ತುಂಬಾ ಇಷ್ಟಪಡುತ್ತಾರೆ.

ಬೆಟ್ಟ, ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಸೀತಾಫಲ ಹಣ್ಣು ಇದೀಗ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಹಣ್ಣಾಗಿದೆ. ವರ್ಷದಲ್ಲಿ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ಈ ಎರಡು ತಿಂಗಳು ಮಾತ್ರ ದೊರೆಯುವ ಸೀತಾಫಲ ಸಿಹಿ ಸವಿಯಲು ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಸೀತಾಫಲ ಹೆಚ್ಚಾಗಿ ಬೆಳೆಯುವುದು ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ ಹಾಗೂ ಬೀದರ್‌ ಜಿಲ್ಲೆಯಲ್ಲಿ, ಉಷ್ಣ ವಲಯದ ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುವ ಸೀತಾಫಲ ಮಳೆಗಾಲ ಆರಂಭವಾಗುತ್ತಿದ್ದಂತೆ ಸ್ವಚ್ಛಂದವಾಗಿ ಚಿರುರೊಡೆದು, ಸುವಾಸನೆಯುಕ್ತ ಹೂಗಳಿಂದ ಕಂಗೊಳಿಸಿ ಕಾಯಿ ಬಿಡುತ್ತದೆ. ಹೆಚ್ಚು ಬೀಜಗಳು ಹೊಂದಿರುವ ಈ ಹಣ್ಣು ಒಮ್ಮೆ ಸವಿದರೆ ಸಾಕು ತಿನ್ನಲು ಮಜಾ ಬರುತ್ತದೆ. ಇಂಥ ಅಪರೂಪದ ಹಣ್ಣು ವರ್ಷ ಎಲ್ಲೆಡೆ ಉತ್ತಮ ಮಳೆಯಾದ ಕಾರಣ ಹೆಚ್ಚಾಗಿ ಬೆಳೆದಿದೆ, ಅಷ್ಟೇ ಬೇಡಿಕೆಯೂ ಹೆಚ್ಚಿದೆ.

Advertisements

ಸೀತಾಫಲ ಹಣ್ಣಿಗೆ ಔರಾದ ʼಫೇಮಸ್ʼ :

ಬೀದರ್‌ ಜಿಲ್ಲಾದ್ಯಂತ ಸೀತಾಫಲ ಹಣ್ಣು ಬೆಳೆಯುತ್ತದೆ, ಆದರೆ ಅತೀ ಹೆಚ್ಚು ಬೆಳೆಯುವುದು ಔರಾದ ತಾಲೂಕಿನಲ್ಲಿ, ಗುಡ್ಡಗಾಡು ಪ್ರದೇಶ ಹೊಂದಿರುವ ಈ ತಾಲೂಕಿನಲ್ಲಿ ಸೀತಾಫಲ ಗಿಡಗಳು ಹೆಚ್ಚಾಗಿ ಬೆಳೆಯುತ್ತವೆ. ತಾಲೂಕಿನ ಚಿಂತಾಕಿ, ಸಂತಪೂರ ಸೇರಿದಂತೆ ಇತರೆ ಹೋಬಳಿಗಳಲ್ಲಿ ನೈಸರ್ಗೀಕವಾಗಿ ಬೆಳೆಯುವ ಸೀತಾಫಲ ಸಿಹಿಗೆ ಜಿಲ್ಲೆಯಲ್ಲಿ ಭಾರೀ ಡಿಮ್ಯಾಂಡ್‌.

ಪ್ರಾಕೃತಿಕವಾಗಿ ಅರಣ್ಯ ಪ್ರದೇಶ, ಗುಡ್ಡಗಾಡು ಪ್ರದೇಶಲ್ಲಿ ಬೆಳೆಯುವ ಸೀತಾಫಲಕ್ಕೆ 2 ತಿಂಗಳು ಸುಗ್ಗಿಯ ಕಾಲ, ಈ ಭಾಗದ ಹಲವು ಕುಟುಂಬಗಳಿಗೆ ಎರಡು ತಿಂಗಳು ತಕ್ಕ ಮಟ್ಟಿನ ಆದಾಯದ ಮೂಲವಾಗಿದೆ. ಸೀತಾಫಲ ಗಿಡಗಳಿಗೆ ಯಾರೂ ನೀರು, ಗೊಬ್ಬರ ಹಾಕಿ ಪೋಷಣೆ ಮಾಡುವುದಿಲ್ಲ. ತಂತಾನೇ ಬೆಳೆಯುವ ಸೀತಾಫಲ ಹಣ್ಣು ಪುಕ್ಕಟೆಯಾಗಿ ದೊರೆಯುತ್ತದೆ. ಹೀಗಾಗಿ ಅನೇಕ ಕುಟುಂಬಗಳು ಎರಡು ತಿಂಗಳು ಮುಂಜಾನೆ ಎದ್ದು ಕೈಯಲ್ಲಿ ಚೀಲ ಹಿಡಿದುಕೊಂಡು ಗುಡ್ಡಗಾಡು , ಅರಣ್ಯ ಪ್ರದೇಶದೊಳಗೆ ಹೊಕ್ಕರೆ ಸಾಕು ಹಣ್ಣು ಮತ್ತು ಕಾಯಿಯ ಚೀಲ ತುಂಬಿಕೊಂಡು ಬಂದು ಹಣ್ಣಿನ ವ್ಯಾಪಾರ ನಡೆಸಿ ಆದಾಯ ಗಳಿಸುತ್ತಾರೆ.

ಮಾರುಕಟ್ಟೆ ಇಲ್ಲ; ಬೀದಿಯಲ್ಲಿ ವ್ಯಾಪಾರ:

ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಎಲ್ಲಾ ಹಣ್ಣುಗಳು ರಾಸಾಯನಿಕ ಮಿಶ್ರಿತ, ಸೀತಾಫಲ ತೋಟಗಾರಿಕೆ ಬೆಳೆಯಾದರೂ ಬೆಳೆಯುವವರ ರೈತರ ಸಂಖ್ಯೆ ತುಂಬಾ ವಿರಳ. ಯಾವುದೇ ರಾಸಾಯನಿಕ ಮಿಶ್ರಿತವಿಲ್ಲದೇ ಇರುವ ಸೀತಾಫಲ ಹಣ್ಣಿಗೆ ಬೇಡಿಕೆ ಹೆಚ್ಚಿದ್ದರೂ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ವ್ಯಾಪಾರಿಗಳು ಬೀದಿಬದಿಯಲ್ಲಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ.

ಸುಮಾರು 30-40 ಕಿ.ಮೀ. ದೂರದ ಹಳ್ಳಿ-ತಾಂಡಾಗಳಿಂದ ಬೀದರ್‌ ನಗರಕ್ಕೆ ಬುಟ್ಟಿ ಹೊತ್ತಿಕೊಂಡು ಬರುವ ಬಡ ವ್ಯಾಪಾರಿಗಳು ಬೀದರ್‌ ನಗರದ ಸಿದ್ದಾರ್ಥ ಕಾಲೇಜು ಮುಂಭಾಗ, ಜನವಾಡ ರಸ್ತೆ, ಅಂಬೇಡ್ಕರ್‌ ವೃತ್ತ, ಹಳೆ ಬಸ್‌ ನಿಲ್ದಾಣ ಸೇರಿದಂತೆ ನಗರದ ವಿವಿಧ ಕಡೆ ಬೀದಿ ಮೇಲೆ ಕುಳಿತು ಮಾರಾಟ ಮಾಡುವ ವ್ಯಾಪಾರಿಗಳಿಗೆ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಬಿಸಿಲು, ಮಳೆಯಲ್ಲೇ ವಹೀವಾಟು ನಡೆಸುತ್ತಿದ್ದಾರೆ.

ಸೀತಾಫಲ ಮಾರಾಟ

ಸೀತಾಫಲ ಹಣ್ಣಾದ ನಂತರ ಎರಡ್ಮೂರು ದಿನಗಳ ಕಾಲ ಉಳಿಯುವುದಿಲ್ಲ. ಹೀಗಾಗಿ ಹಣ್ಣಾದ ದಿನವೇ ಮಾರಾಟ ಆಗಲೇಬೇಕು ಎಂಬುವ ಕಾರಣ ಅಂದಂದೇ ಸಾಗಾಣೆ ಮಾಡಿ ಮಾರಾಟ ಮಾಡುತ್ತಾರೆ. ಒಂದು ಹಣ್ಣಿಗೆ 5, 10 ರೂ. ಯಂತೆ ಬೇಡಿಕೆಯಿದೆ, ಇನ್ನು 100, 200, 400 ರೂಪಾಯಿಗೆ 1 ಬುಟ್ಟಿಯಂತೆ ಮಾರಾಟ ಮಾಡುತ್ತಾರೆ. ಎರಡು ತಿಂಗಳ ಸುಗ್ಗಿಯ ಕಾಲದಲ್ಲಿ ಕನಿಷ್ಠ 40-50 ಸಾವಿರ ಆದಾಯ ಗಳಿಸುತ್ತಾರೆ.

ಸೀತಾಫಲಕ್ಕೆ ಸೂಕ್ತ ಬೆಲೆ ನಿಗದಿಪಡಿಬೇಕು:

ಗ್ರಾಮೀಣ ಭಾಗದ ಕೆಲ ಕೂಲಿ ಕಾರ್ಮಿಕರು, ಕೃಷಿಕರು ವರ್ಷದ ಎರಡು ತಿಂಗಳು ಸೀತಾಫಲ ಹಣ್ಣಿನ ವ್ಯಾಪಾರ ಮಾಡುತ್ತಾರೆ. ಗುಡ್ಡಗಾಡು, ಅರಣ್ಯ ಪ್ರದೇಶಗಳಿಂದ ಕಷ್ಟಪಟ್ಟು ಕಡಿದು ತಂದು ಮಾರಾಟ ಮಾಡುವ ಬಡ ವ್ಯಾಪಾರಿಗಳಿಗೆ ದುಡಿಮೆಯಂತೆ ಆದಾಯ ಸಿಗುತ್ತಿಲ್ಲ. ಅವರಿಗೂ ಸೂಕ್ತ ಮಾರುಕಟ್ಟೆ ಹಾಗೂ ಸಾಗಾಣೆ ವ್ಯವಸ್ಥೆ ಕಲ್ಪಿಸಿ ನಿರ್ದಿಷ್ಟ ಬೆಲೆ ನಿಗದಿಪಡಿಸಿದರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಹಾಗೂ ಬೇರೆ ರಾಜ್ಯಗಳಿಗೆ ಸಾಗಾಟ ಮಾಡಲು ಅನುಕೂಲ ಆಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದರ ಈದಿನ.ಕಾಮ್‌ ದೊಂದಿಗೆ ಮಾತನಾಡಿ ಹೇಳಿದರು.

ನಗರಕ್ಕೆ ಹೆಚ್ಚಾಗಿ ಔರಾದ ತಾಲೂಕಿನಿಂದ ಸೀತಾಫಲ ಹಣ್ಣು ಬರುತ್ತದೆ, ಹಳ್ಳಿಗಳಿಂದ ತರುವ ಕೆಲ ವ್ಯಾಪಾರಿಗಳು ಬೀದಿ ಬದಿಯಲ್ಲೇ ಕುಳಿತು ಮಾರಾಟ ಮಾಡಿದರೆ ಉಳಿದವರು ಸಗಟು ಬೆಲೆಗೆ ಮಾರಾಟ ಮಾಡುತ್ತಾರೆ. ಒಂದು ಬುಟ್ಟಿಯಲ್ಲಿ ನೂರು, ಇನ್ನೂರು ಹೀಗೆ ಆಯಾ ಹಣ್ಣಿನ ರುಚಿಕರ ತಕ್ಕಂತೆ ಬೆಲೆ ಇರುತ್ತದೆ. ನಾವು ಬುಟ್ಟಿಯ ರೂಪದಲ್ಲಿ ಖರೀದಿಸಿ ಚಿಲ್ಲರೆ ಮಾರಾಟ ಮಾಡುತ್ತೇವೆ, ಇದರಿಂದ ದಿನಕ್ಕೆ 500, 600 ಆದಾಯ ಆಗುತ್ತದೆ ಎಂದು ಬೀದಿಬದಿ ವ್ಯಾಪಾರಿ ಪ್ರೇಮಾ ಮಿರಗಂಜಿ ಹೇಳುತ್ತಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಮನೆ ಗೋಡೆ ಕುಸಿದು 8 ವರ್ಷದ ಬಾಲಕಿ ಸಾವು

ಬೀದರ್‌ ತೋಟಗಾರಿಕೆ ಮಾಹಾವಿದ್ಯಾಲಯದ ಡೀನ್‌ ಡಾ. ಎಸ್.ವಿ.ಪಾಟೀಲ್‌ ಈದಿನ.ಕಾಮ್‌ ದೊಂದಿಗೆ ಮಾತನಾಡಿ, ” ಸೀತಾಫಲ ಹೆಚ್ಚಾಗಿ ಔರಾದ ತಾಲೂಕಿನಲ್ಲಿ ಬೆಳೆಯುತ್ತದೆ, ಎರಡು ತಿಂಗಳು ಕಾಲ ಇರುವ ಸೀತಾಫಲ ಸುಗ್ಗಿ ಅನೇಕರು ಆದಾಯದ ಮೂಲವಾಗಿದೆ. ಸೀತಾಫಲ ಹಣ್ಣಾದ ನಂತರ ಜಾಸ್ತಿ ದಿನಗಳಾದರೆ ಕೊಳೆಯುತ್ತದೆ. ಹೀಗಾಗಿ ದೂರದ ನಗರಗಳಿಗೆ ಸಾಗಾಣೆ ಮಾಡುವುದು ಕಷ್ಟಕರ. ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳಲ್ಲಿ ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆಯಿದೆ. ಸೀತಾಫಲ ಹೆಚ್ಚಾಗಿ ಹಣ್ಣಿನ ಮಾರುಕಟ್ಟೆಗೆ ಹೋಗುವುದಿಲ್ಲ, ಬೀದಿ ಬದಿಯಲ್ಲಿ ಮಾತ್ರ ಮಾರಾಟ ನಡೆಯುತ್ತದೆ. ಇದಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯೋಚಿಸೋಣ” ಎಂದು ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X