ಬೀದರ್ | ಬೌದ್ಧ ಧಮ್ಮ ಸಂಸ್ಕೃತಿಯು ಜೀವಪರ ಪರವಾಗಿದೆ: ಭಂತೆ ಜ್ಞಾನ ಸಾಗರ

Date:

Advertisements

ಬೌದ್ಧ ಧಮ್ಮ ಸಂಸ್ಕೃತಿ ಜೀವಪರ ಮತ್ತು ಸಮಾನತೆ ಪರವಾಗಿದೆ. ಕತ್ತಲಿನಿಂದ ಬೆಳಕಿನಡೆ ಬರಲು ದಾರಿದೀಪವಾಗಿದೆ. ಮೈಲೂರಿನಲ್ಲಿ ಧಮ್ಮ ಸಂಸ್ಕೃತಿ ಉತ್ಸವ ಆಯೋಜಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಭಂತೆ ಜ್ಞಾನ ಸಾಗರ ಅವರು ಹೇಳಿದರು.

ಬೀದರ್‌ನ ವಿಶ್ವ ಶಾಂತಿ ಬುದ್ಧ ವಿಹಾರದಲ್ಲಿ ನಡೆದ ‘ಧಮ್ಮ ಸಂಸ್ಕೃತಿ ಉತ್ಸವ’ ಹಾಗೂ ಬುದ್ಧ ವಿಹಾರ ಸಮಿತಿಯ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಿತಿಯ ಸಲಹೆಗಾರರಾದ ಶಂಭುಲಿಂಗ ಕುದರೆ ಪ್ರಾಸ್ತಾವಿಕವಾಗಿ ಮಾತನಾಡಿ, “ಬುದ್ಧ ವಿಹಾರ ಅಭಿವೃದ್ಧಿಗಾಗಿ ಹಿರಿಯರು ಶ್ರಮಪಟ್ಟ ಪ್ರತಿಫಲವಾಗಿ ಇಂದು ವಿಹಾರ ಹೆಮ್ಮರವಾಗಿದೆ. ಹಿರಿಯರ ಶ್ರಮ ವ್ಯರ್ಥವಾಗದಂತೆ ನೂತನ ಪದಾಧಿಕಾರಿಗಳು ಮುನ್ನಡೆಸಿಕೊಂಡು ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಬೇಕೆಂದು” ಸಲಹೆ ನೀಡಿದರು.

Advertisements

ಇದೇ ಸಂಧರ್ಭದಲ್ಲಿ ವಿಶ್ವ ಶಾಂತಿ ಬುದ್ಧ ವಿಹಾರ ಅಭಿವೃದ್ಧಿ ಸಮಿತಿಯ ನೂತನ ಪದಾಧಿಕಾರಿಗಳಿಗೆ ಭಿಕ್ಕು ಸಂಘದಿಂದ ಪಂಚಶೀಲವನ್ನು ನೀಡಿ ಪ್ರಮಾಣ ಬೋಧಿಸಿ ವಿಹಾರಕ್ಕಾಗಿ ಶ್ರಮಪಟ್ಟ 40 ಮಹನೀಯರಿಗೆ ಸನ್ಮಾನಿಸಿದರು.

ವಿಶ್ವ ಶಾಂತಿ ಬುದ್ಧ ವಿಹಾರ ಅಭಿವೃದ್ಧಿ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ ಗೋರನಾಳಕರ್, ಸಮಿತಿಯ ಸಲಹೆಗಾರ ಜಗನಾಥ ಬಡಿಗೇರ, ಚಂದ್ರಕಲಾ ಬಡಿಗೇರ್, ಸಮಿತಿಯ ಕಾರ್ಯದರ್ಶಿ ಪ್ರಶಾಂತ ಭಾವಿಕಟ್ಟಿ ಇದ್ದರು.

ಈ ಸುದ್ದಿ ಓದಿದ್ದೀರಾ? ಬೀದರ್ | ನೀರಿನ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ದುರ್ಮರಣ

ನೂತನ ಪದಾಧಿಕಾರಿಗಳಾಗಿ ನೇಮಕ: 

(ಗೌರವಾಧ್ಯಕ್ಷ) ಸಂಜುಕುಮಾರ ಮೇತ್ರೆ, (ಅಧ್ಯಕ್ಷ) ರಾಜಕುಮಾರ ಭಾವಿಕಟ್ಟಿ (ಉಪಾಧ್ಯಕ್ಷ) ಕುಶಾಲರಾವ ಬಡಿಗೇರ, (ಪ್ರಧಾನ ಕಾರ್ಯದರ್ಶಿ) ಅಮರ ಪೂಜಾರಿ (ಖಜಾಂಚಿ) ನವನಾಥ ಒಂಟೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಕಾಶ ಕುದರೆ, ಬುಧ್ದಾನಂದ ಬಡಿಗೇರ, ಸುಜೀತ ಒಂಟೆ, ಸುನೀಲ ನವಲಸಪೂರ ಅವರನ್ನು ನೇಮಕವಾಗಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X