ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಮುಂದುವರೆದಿದೆ ಈ ನಡುವೆ, ಗಾಜಾದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತವು ಅಗತ್ಯ ವೈದ್ಯಕೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.
“ಅಗತ್ಯ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್ಗಳು, ಮಲಗುವ ಬ್ಯಾಗ್ಗಳು, ಟಾರ್ಪಲಿನ್ಗಳು, ನೈರ್ಮಲ್ಯ ಉಪಕರಗಳು ಮತ್ತು ಇತರ ಅಗತ್ಯ ವಸ್ತುಗಳು ಹಾಗೂ ನೀರು ಶುದ್ಧೀಕರಣ ಮಾತ್ರೆಗಳನ್ನು ಗಾಜಾಗೆ ಕಳುಹಿಸಲಾಗಿದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ಮೇಲೆ ಹಮಸ್ ದಾಳಿ ಮಾಡಿದ ಬಳಿಕ ಇಸ್ರೇಲಿ ಮಿಲಿಟರಿ ಗಾಜಾದ ಮೇಲೆ ನಿರಂತರ ದಾಳಿ ಮಾಡಿದೆ. ಗಾಜಾದಲ್ಲಿ ಸಾಕಷ್ಟು ಹಾನಿಯಾಗಿದೆ. 1,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಲವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇತ್ತೀಚೆಗೆ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ನಡೆದಿದೆ.
🇮🇳 sends Humanitarian aid to the people of 🇵🇸!
An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt.
The material includes essential life-saving medicines,… pic.twitter.com/28XI6992Ph
— Arindam Bagchi (@MEAIndia) October 22, 2023
ಹೀಗಾಗಿ, ಗಾಜಾದಲ್ಲಿರುವ ಜನರು ಎಲ್ಲಿಗೆ ಹೋಗಬೇಕು. ತಮ್ಮ ಕುಟುಂಬಗಳನ್ನು ಹೇಗೆ ರಕ್ಷಿಸಬೇಕು ಎಂಬುದೇ ತೋಚನೆ ಅಸಹಾಯಕರಾಗಿದ್ದಾರೆ.
ಈ ಮಧ್ಯೆ, ಈಜಿಪ್ಟ್ನಲ್ಲಿ ಶಾಂತಿ ಸಭೆ ನಡೆದಿದ್ದು, ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು “ಈ ಭಯಾನಕ ದುಃಸ್ವಪ್ನವನ್ನು ಕೊನೆಗೊಳಿಸಬೇಕು” ಎಂದಿದ್ದು, ಸಂಘರ್ಷವನ್ನ ಕೊನೆಗೊಳಿಸುವಂತೆ ಒತ್ತಾಯಿಸಿದ್ದಾರೆ.
ಸಭೆಯ ಬಳಿಕ, ಆಹಾರ, ನೀರು ಮತ್ತು ಔಷಧಿ ಈಜಿಪ್ಟ್ನಿಂದ ಗಾಜಾಗೆ ರವಾನೆಯಾಗಿದೆ. ಇದೀಗ, ಭಾರತವೂ ಅಗತ್ಯ ಸಲಕರಣೆಗಳನ್ನು ಈಜಿಪ್ಟ್ನ ರಫಾ ಗಡಿಯ ಮೂಲಕ ಗಾಜಾಗೆ ರವಾಸುತ್ತಿದೆ.