ಪನೌತಿಯಿಂದ ಸೋಲು ಎಷ್ಟು ಸುಳ್ಳೊ, ಶ್ರೀರಾಮನಿಂದ ಗೆಲ್ಲುವುದೂ ಅಷ್ಟೇ ಸುಳ್ಳು : ನಟ ಕಿಶೋರ್‌

Date:

Advertisements

ಭಾರತ ವಿಶ್ವಕಪ್‌ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಪನೌತಿ ಎಂಬ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ. ಪನೌತಿ ಎಂದರೇ ಅಪಶಕುನ ಎಂದರ್ಥ. ಚಂದ್ರಯಾನ ವಿಫಲವಾದಾಗ ಕಾಂಗ್ರೆಸ್‌ನವರು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪನೌತಿ ಎಂದು ಕರೆದಿದ್ದರು. ಇದೀಗ, ನಟ ಕಿಶೋರ್‌ ಅವರು ”ಪನೌತಿಯಿಂದ ಸೋಲುವುದು ಎಷ್ಟು ಸುಳ್ಳೊ, ಜೈಶ್ರೀರಾಮನಿಂದ ಗೆಲ್ಲುವುದೂ ಅಷ್ಟೇ ಸುಳ್ಳು” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಪರ ಮತ್ತು ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ. ”ಇಂದಿನ ವ್ಯವಸ್ಥೆಯ ವ್ಯಂಗ್ಯವೇನೆಂದರೆ ಸಜ್ಜನರ ಆಟ ಎಂದು ಕರೆಯಲ್ಪಡುವ ಕ್ರಿಕೆಟ್‌ನಲ್ಲೂ, ಪ್ರೇಕ್ಷಕರನ್ನು ಜೈ ಶ್ರೀರಾಮ್ ಎಂದು ಧಾರ್ಮಿಕ ಘೋಷಣೆಗಳನ್ನು ಕೂಗುವ ಮಟ್ಟಕ್ಕೆ ತಂದಿಟ್ಟವರು ಪನೌತಿಯ ಪ್ರಭಾವವನ್ನೂ ಹೆಗಲಿಗೇರಿಸಿಕೊಳ್ಳಲೇಬೇಕು” ಎಂದು ನಟ ಹುಲಿ ಕಿಶೋರ್ ಕುಮಾರ್ ಬರೆದುಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಮರು ನೇಮಕ

Advertisements

”ಹೊಲಸು ಧರ್ಮಾಂಧ ರಾಜಕಾರಣದಿಂದ ಮೂಢನಂಬಿಕೆಯ ಕೂಪದಲ್ಲಿ ತಳ್ಳಲ್ಪಟ್ಟು ಮೂರ್ಖರಾದ ನಾವು ತಿಳಿದುಕೊಳ್ಳಬೇಕಿರುವುದು ನಿಜವಾದ ಪನೌತಿ ಈ ದೇಶವನ್ನು ವಿನಾಶದಂಚಿಗೆ ತಳ್ಳುತ್ತಿರುವ ಧರ್ಮಾಂಧತೆ, ಮೂಢನಂಬಿಕೆ, ಬಡತನ, ಅಸಮಾನತೆ, ನಿರುದ್ಯೊಗ ಮತ್ತು ಭ್ರಷ್ಟಾಚಾರಗಳು ಎಂದು” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

7 COMMENTS

  1. ನಿಮ್ಮ ಅನಿಸಿಕೆ ಪ್ರಕಾರ ಧರ್ಮಾಂಧತೆ ಹಿಂದೂಗಳಲ್ಲಷ್ಟೆ ಇದೆಯೋ ಹೇಗೆ?

  2. ನಮ್ಮಲ್ಲಿ ಇದ್ದಕ್ಕಿದ್ದಾಗೆ ಉದ್ಬವ ಮೂರ್ತಿಗಳಾಗಿ ತಮಗೆ ತೋಚುದಂಗೆ ಹೇಳೋಕೆ ಶುರುಮಾಡುತ್ತಾರೆ ಅವರ ಬಗ್ಗೆ ತಾತ್ಸಾರ ಮನೋಬಾವ ಬೆಳಸಿಕೊಳ್ಳಬೇಕು ಯಾಕೆಂದ್ರೆ ಇವರೆಲ್ಲ ದೇಶಕ್ಕೆ ಅಥವಾ ಮಾನವ ಕುಲಕ್ಜೆ ಒಳೇಯದನ್ನ ಬಯಸೋರಲ್ಲ ಮತ್ತು ನಾವು ಅಪೇಕ್ಷಿಸಲೂ ಬಾರದೂ

  3. ನಿಮ್ಮ ಕುರುಡು ವಿಶ್ಲೇಷಣೆಯ ಪ್ರಕಾರ ಶ್ರೀರಾಮ ದೇವರನ್ನು ಪ್ರಾರ್ಥಿಸುವುದು ಕುರುಡು ನಂಬಿಕೆಯಾಗಿದ್ದರೆ ಮತ್ತೇನು ಕುರುಡು ನಂಬಿಕೆ ಅಲ್ಲ? ಒಂದು ಗಾದೆ ಇದೆ “ಒಳ್ಳೆಯ ಬಟ್ಟೆ ಧರಿಸಿದ ಮೂರ್ಖ ಮಾತನಾಡುವವರೆಗೂ ಸ್ಮಾರ್ಟ್ ಆಗಿ ಕಾಣುತ್ತಾನೆ” ನೀವು ಆ ಗಾದೆಗೆ ಸರಿಹೊಂದುತ್ತೀರಿ.

  4. ಅವಕಾಶಗಳು ಕಡಿಮೆ ಆದಾಗ ಈ ತರಹ ಹೇಳಿಕೆ ಕೊಟ್ಟು ಮತ್ತೆ ಅವಕಾಶಗಳನ್ನು ಪಡೆಯುವದು ಈಗ ಸಾಮಾನ್ಯ ಆಗಿದೆ..ಈ ಮೂಡನು ಇದೆ ಸಾಲಿಗೆ ಸೇರುತ್ತಾನೆ.. ಧರ್ಮದ ಆಧಾರದ ಮೇಲೆ ಹುಟ್ಟಿರುವ ಪಾಕಿಸ್ತಾನ್ ಇಸ್ಲಾಮಿಕ್ ರಾಷ್ಟ್ರ ಆಗಿದೆ..ಭಾರತ ಹಿಂದೂ ರಾಷ್ಟ್ರ ಏಕೆ ಆಗಬಾರದು?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X