ಬೆಂಗಳೂರು | ಮೆಡಿಕಲ್ ಸ್ಟೋರ್‌ಗಳಲ್ಲಿ ಕಳ್ಳತನ ಎಸಗುತ್ತಿರುವ ‘ಮಂಕಿ ಕ್ಯಾಪ್ ಗ್ಯಾಂಗ್’

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಷ್ಟು ದಿನ ‘ಚಡ್ಡಿ ಗ್ಯಾಂಗ್‌’ ಮನೆಗಳನ್ನು ಟಾರ್ಗೆಟ್‌ ಮಾಡಿ ಕಳ್ಳತನ ಮಾಡುತ್ತಿತ್ತು. ಇದರ ಜತೆಗೆ ಇದೀಗ, ‘ಮಂಕಿ ಕ್ಯಾಪ್‌ ಗ್ಯಾಂಗ್‌’ ಬಂದು ಸೇರಿದೆ. ಆದರೆ, ಈ ಗ್ಯಾಂಗ್‌ ಮನೆಗಳಲ್ಲದೇ, ಮೆಡಿಕಲ್ ಸ್ಟೋರ್ಸ್‌, ಅಪೋಲೋ ಫಾರ್ಮಸಿಗಳಲ್ಲಿ ಕಳ್ಳತನ ಮಾಡುತ್ತಿದೆ.

ಕಳೆದ ಹದಿನೈದು ದಿನಗಳಲ್ಲಿ ಕೊತ್ತನೂರು, ಹೆಚ್​ಎಸ್​ಆರ್ ಲೇಔಟ್, ಮಾರತ್ತಹಳ್ಳಿಯ ಅಪೋಲೋ ಫಾರ್ಮಸಿಗಳಲ್ಲಿ ಕಳ್ಳತನ ನಡೆದಿದೆ.  

ಈ ಮಂಕಿ ಕ್ಯಾಪ್‌ ಗ್ಯಾಂಗ್‌ ತಮ್ಮ ಮುಖವನ್ನು ಮಂಕಿ ಕ್ಯಾಪ್‌ ಮೂಲಕ ಮುಚ್ಚಿಕೊಂಡು ಔಷಧಿ ಖರೀದಿ ಮಾಡುವ ನೆಪದಲ್ಲಿ ಮೆಡಿಕಲ್‌ ಸ್ಟೋರ್‌ಗೆ ತೆರಳುತ್ತಾರೆ. ಬಳಿಕ ಒಂದು ವಸ್ತುವನ್ನು ಖರೀದಿ ಮಾಡಿ, ಹಣ ನೀಡುತ್ತಾರೆ. ಬಳಿಕ ಆ ವಸ್ತು ಬೇಡವೆಂದು ಹಣ ವಾಪಾಸ್‌ ಕೇಳುತ್ತಾರೆ. ಬಳಿಕ ಮೆಡಿಕಲ್ ಸಿಬ್ಬಂದಿ ಹಣ ನೀಡಲು ಗಲ್ಲಾಪೆಟ್ಟಿಗೆ ತೆರೆದಾಗ ಚಾಕು ತೋರಿಸಿ ರಾಬರಿ ಮಾಡಲು ಮುಂದಾಗುತ್ತಾರೆ. ಇದಕ್ಕೆ ನಿರಾಕರಿಸಿದ ಸಿಬ್ಬಂದಿಗೆ ಚಾಕವಿನಿಂದ ಇರಿದು ಪರಾರಿಯಾಗುತ್ತಾರೆ.

Advertisements

ಮಧ್ಯರಾತ್ರಿ ಮೆಡಿಕಲ್ ಅಂಗಡಿಗಳನ್ನು ಟಾರ್ಗೆಟ್‌ ಮಾಡಿ ಕಳ್ಳತನ ಮಾಡಲು ಮುಂದಾಗುತ್ತಾರೆ. ಈ ವೇಳೆ, ಸ್ಟೋರ್‌ ಬಳಿ ಯಾರಾದರೂ ಬರುತ್ತಿದ್ದಾರಾ? ಎಂದು ನೋಡಿಕೊಳ್ಳಲು ಹೊರಗಡೆ ಒಬ್ಬ ನಿಂತಿರುತ್ತಾನೆ. ಮತ್ತೊಬ್ಬ ಶೆಟರ್ಸ್​ ಮುರಿದು ಅಂಗಡಿಯೊಳಗಿರುವ ಹಣವನ್ನು ಕದಿಯುತ್ತಾನೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಾಯಿ, ಮಗನ ಬರ್ಬರ ಹತ್ಯೆ; ಆರೋಪಿ ಪತ್ತೆಗೆ ತಂಡ ರಚನೆ

ಮುಖವನ್ನು ಮಂಕಿ ಕ್ಯಾಪ್​ನಲ್ಲಿ ಮುಚ್ಚಿಕೊಂಡು ಕೈಯಲ್ಲಿ ಕಬ್ಬಿಣದ ಸಲಾಕೆಗಳನ್ನು ಹಿಡಿದು ಬರುವ ಖದೀಮರು ಮೆಡಿಕಲ್ ಸ್ಟೋರ್​ಗಳ ಶೆಟರ್ಸ್​ ಮುರಿದು ಕಳ್ಳತನ ಮಾಡುತ್ತಿದ್ದಾರೆ. ಈ ಘಟನೆಗಳು ಹೆಚ್ಚಾಗಿ ನಗರದ ವಿಜಯನಗರದ ಸುತ್ತಮುತ್ತ ಮರುಕಳಿಸುತ್ತಿವೆ‌.

ಕಳೆದ ಆಗಸ್ಟ್ 31 ರಂದು ಮಧ್ಯರಾತ್ರಿ ವಿಜಯನಗರದ ಮೆಡಿಕಲ್ ಸ್ಟೋರ್ ಒಂದಕ್ಕೆ ಖದೀಮರು ನುಗ್ಗಿದ್ದರು. ಬಳಿಕ, ಅಂಗಡಿ ಸಿಬ್ಬಂದಿ ಇರುವುದನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದರು. ಕಳ್ಳರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಕುರಿತು ಮಾರತ್ತಹಳ್ಳಿ, ಎಚ್‌ಎಸ್‌ಆರ್‌ ಲೇಔಟ್, ಕೊತ್ತನೂರು ಹಾಗೂ ಗೋವಿಂದರಾಜನಗರ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X