ಬೆಂಗಳೂರಿನಲ್ಲಿ ಇದ್ದಾನೆ ಜಗತ್ತಿನ ಅತೀ ದುರಾಸೆ ಮಾಲೀಕ; ಮನೆಗೆ ₹23 ಲಕ್ಷ ಅಡ್ವಾನ್ಸ್‌ – ₹2.3 ಲಕ್ಷ ತಿಂಗಳ ಬಾಡಿಗೆ

Date:

Advertisements

ಜಗತ್ತಿನಲ್ಲೇ ಅತೀ ದುರಾಸೆ ಮಾಲೀಕ ಬೆಂಗಳೂರಿನಲ್ಲಿದ್ದಾನೆ. ಆತ ಮನೆಯನ್ನು ಬಾಡಿಗೆ ಕೊಡಲು 23 ಲಕ್ಷ ರೂ. ಅಡ್ವಾನ್ಸ್‌ ಮತ್ತು 2.3 ಲಕ್ಷ ರೂ. ಮಾಸಿಕ ಬಾಡಿಕೆ ಕೇಳುತ್ತಿದ್ದಾನೆ ಎಂದು ಕೆನಡಿಯನ್ ಪ್ರಜೆಯೊಬ್ಬರು ಆರೋಪಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಕೆನಡಿಯನ್ ಪ್ರಜೆಯೊಬ್ಬರು ಬಾಡಿಗೆ ಮನೆಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ, ಬಾಡಿಗೆ ಮನೆಯೊಂದರ ಮಾಲೀಕ ಕೇಳಿದ ಅಡ್ವಾನ್ಸ್‌ ಮತ್ತು ಬಾಡಿಗೆ ಹಣದ ಮಾಹಿತಿ ಕೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಜಗತ್ತಿನಲ್ಲಿಯೇ ಅತೀ ಹೆಚ್ಚು ದುರಾಸೆ ಮಾಲೀಕರು ಬೆಂಗಳೂರಿನಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, “ಮನೆ ಮಾಲೀಕನೊಬ್ಬ 4 ಬೆಡ್ ರೂಮ್‌ಗಳು ಇರುವ ಮನೆಗೆ 2.3 ಲಕ್ಷ ರೂ. ಮಾಸಿಕ ಬಾಡಿಗೆ ಮತ್ತು ಬರೋಬ್ಬರಿ 23 ಲಕ್ಷ ರೂ. ಅಡ್ವಾನ್ಸ್‌ ಕೇಳುತ್ತಿದ್ದಾರೆ. 4 ಬಿಎಚ್‌ಕೆ ಮನೆಗೆ ಇಷ್ಟೊಂದು ಡೆಪಾಸಿಟ್ ಮತ್ತು ಬಾಡಿಗೆ ಯಾಕೆ? ಇದು ಯಾವ ನಿಮಯ? ವಿಶ್ವದ ಯಾವುದೇ ನಗರದಲ್ಲಿ ಇಲ್ಲದೇ ಇರುವ ನಿಯಮ ಇಲ್ಲಿದೆ” ಎಂದು ಆರೋಪಿಸಿದ್ದಾರೆ.

Advertisements

“ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮನೆ ಬಾಡಿಗೆ ಪಡೆಯಲು ಒಂದು ತಿಂಗಳ ಬಾಡಿಗೆ ಮೊತ್ತವನ್ನು ಮಾತ್ರವೇ ಅಡ್ವಾನ್ಸ್‌ಆಗಿ ಪಡೆಯಲಾಗುತ್ತದೆ. ಟೊರೆಂಟೋದಲ್ಲಿ ಕೂಡ 1 ತಿಂಗಳ ಬಾಡಿಗೆ ಮೊತ್ತವನ್ನೇ ಅಡ್ವಾನ್ಸ್‌ ಆಗಿ ಪಡೆಯುತ್ತಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 2 ತಿಂಗಳ ಬಾಡಿಗೆ ಮೊತ್ತವನ್ನು ಮಾತ್ರವೇ ಅಡ್ವಾನ್ಸ್‌ ರೂಪದಲ್ಲಿ ನೀಡಲಾಗುತ್ತದೆ. ದುಬೈನಲ್ಲಿ ವಾರ್ಷಿಕ ಬಾಡಿಗೆ ಮೊತ್ತದ ಪೈಕಿ 5ರಿಂದ 10% ಹಣವನ್ನು ಡೆಪಾಸಿಟ್‌ಆಗಿ ಪಡೆಯಲಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಬರೋಬ್ಬರಿ 10 ತಿಂಗಳ ಬಾಡಿಗೆ ಮೊತ್ತವನ್ನು ಅಡ್ವಾನ್ಸ್‌ ನೀಡಬೇಕು” ಎಂದು ವಿವರಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X