ಬೆಂಗಳೂರು | ಲೆಕ್ಕಕ್ಕಾಗಿ ಮರಗಳ ಸುತ್ತ ಬೈಂಡಿಂಗ್ ವೈರ್‌ ಬಿಗಿದ ಬಿಎಂಆರ್‌ಸಿಎಲ್

Date:

Advertisements
  • ಎರಡು ವರ್ಷಗಳ ಹಿಂದೆ ಮೆಟ್ರೋ ಮಾರ್ಗಕ್ಕಾಗಿ ಮರಗಳನ್ನು ಕತ್ತರಿಸಿದ ಬಿಎಂಆರ್‌ಸಿಎಲ್‌
  • ಆಕ್ಷನ್ ಏಡ್ ಸಂಸ್ಥೆಯಿಂದ ಮರಗಳ ಸಮೀಕ್ಷೆ; ಅಧ್ಯಯನಕ್ಕಾಗಿ ಮೂರು ಕೆರೆಗಳ ಆಯ್ಕೆ

ಮೆಟ್ರೋಗಾಗಿ ಮರಗಳನ್ನು ಕತ್ತರಿಸಿದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು ಮರಗಳ ನಾಶಕ್ಕೆ ಪರಿಹಾರವಾಗಿ ಬೇರೆಡೆ ಮರ, ಗಿಡ ಹಾಗೂ ಸಸಿಗಳನ್ನು ಪೋಷಿಸುತ್ತಿರುವ ಬಗ್ಗೆ ‘ಆಕ್ಷನ್ ಏಡ್ ಸಂಸ್ಥೆ’ ಸಮೀಕ್ಷೆ ನಡೆಸಿದೆ. ಮರದ ಸಂಖ್ಯೆಗಳ ಲೆಕ್ಕಕ್ಕಾಗಿ ನಿಗಮವು ಮರಗಳ ಸುತ್ತ ಬೈಂಡಿಂಗ್ ವೈರ್ ಮೂಲಕ ಬಿಗಿದು ಬೋರ್ಡ್ ಹಾಕಿದೆ. ಇದು ಒಳ್ಳೆಯ ಕ್ರಮವಲ್ಲ ಎಂದು ಕೆರೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಮೆಟ್ರೋ ಮಾರ್ಗಗಳಿಗಾಗಿ ಬಿಎಂಆರ್‌ಸಿಎಲ್‌ನಿಂದ ಹಲವಾರು ಮರಗಳನ್ನು ಕತ್ತರಿಸಲಾಗಿತ್ತು ಹಾಗೂ ಸ್ಥಳಾಂತರಿಸಲಾಗಿತ್ತು. ಅವುಗಳಿಗೆ ಬದಲಿಯಾಗಿ, ನಿಗಮವು ನೆಟ್ಟ ಸಸಿಗಳ ಮೇಲೆ ಆಕ್ಷನ್ ಏಡ್ ಸಂಸ್ಥೆಯೂ ಅಧ್ಯಯನ ನಡೆಸಿದೆ. ವೀರಸಾಗರ ಕೆರೆಯಲ್ಲಿ 120 ಸಸಿಗಳು, ಸಾರಕ್ಕಿ ಕೆರೆಯಲ್ಲಿ 621 ಸಸಿಗಳು, ಗೊಟ್ಟಿಗೆರೆ ಕೆರೆಯಲ್ಲಿ 160 ಸಸಿಗಳನ್ನು ನೆಡಲಾಗಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಅಧ್ಯಯನಕ್ಕಾಗಿ ಮೂರು ಕೆರೆಗಳನ್ನು ಅನುಕೂಲತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಏಡ್ ಸಂಸ್ಥೆ ಹೇಳಿದೆ.

ಅರಣ್ಯೀಕರಣದ ಅಡಿಯಲ್ಲಿ ನಿಗಮವು ನಗರದ ಮೂರು ಕೆರೆಗಳ ಬಳಿ ಮರಗಳನ್ನು ಪೊಷಿಸುವ ಹೊಣೆ ಹೊತ್ತಿದೆ. ಆದರೆ, ಈಗಾಗಲೇ ನೆಟ್ಟಿರುವ ಮರ ಹಾಗೂ ಗಿಡಗಳ ಪೈಕಿ ಸುಮಾರು 25% ಸಸಿಗಳು ಸತ್ತಿವೆ. ಇನ್ನು ಕೆಲವು ಸಾಯುವ ಅಂಚಿನಲ್ಲಿವೆ ಎಂದು ಆಕ್ಷನ್ ಏಡ್ ಸಂಸ್ಥೆ ಹೇಳಿದೆ.

Advertisements

ಮೂರು ಕೆರೆಗಳ ಬಳಿ ನೆಡಲಾಗಿದ್ದ ಒಟ್ಟು 901 ಗಿಡಗಳ ಪೈಕಿ, 211 ಸಸಿಗಳು ಕಂದು ಬಣ್ಣಕ್ಕೆ ತಿರುಗಿವೆ. ಕೆಲವು ಗಿಡಗಳು ಎಲೆಗಳಿಲ್ಲದೆ ಬೋಳು ಬೋಳಾಗಿವೆ. ಇನ್ನು ಕೆಲವು ಗಿಡಗಳು ಸತ್ತಿವೆ ಎಂದು ತಿಳಿಸಿದೆ.

ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಆಕ್ಷನ್ ಏಡ್ ಅಸೋಸಿಯೇಷನ್‌ನ ರಾಘವೇಂದ್ರ ಬಿ ಪಚ್ಚಾಪುರ, “ನಿಗಮದಿಂದ ನೆಡಲಾದ ಸಸಿಗಳ ಆರೋಗ್ಯದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅಧ್ಯಯನವನ್ನು ನಡೆಸಿದ್ದೇವೆ. ಅಧ್ಯಯನ ಮಾಡಿದ ಒಟ್ಟು ಸಸಿಗಳಲ್ಲಿ 16.5% ನೀರಿನ ಒತ್ತಡದಿಂದ ಕೂಡಿದೆ. ಸುಮಾರು 4% ಮರಗಳು ಸತ್ತಂತೆ ತೋರುತ್ತಿವೆ. ಈ ಸಮೀಕ್ಷೆಯೂ ಸಸಿಗಳಿಗೆ ಮಾರಕವಾಗಬಹುದಾದ ಸಮಸ್ಯೆಯನ್ನು ತೋರಿಸಿದೆ” ಎಂದು ಹೇಳಿದರು.

“ತಜ್ಞರು ಮತ್ತು ಕಾಲೇಜು ವಿದ್ಯಾರ್ಥಿಗಳು ಜಂಟಿಯಾಗಿ ಸಮೀಕ್ಷೆಯನ್ನು ನಡೆಸಲಾಗಿದೆ. ಬಹುತೇಕ ಸಸಿಗಳಿಗೆ ಯಾವುದೇ ರಕ್ಷಣೆಯನ್ನೂ ನೀಡಿಲ್ಲ. ಇದರಿಂದ ಅವು ದುರ್ಬಲವಾಗಿವೆ. ವೀರಸಾಗರ, ಸಾರಕ್ಕಿ ಮತ್ತು ಗೊಟ್ಟಿಗೆರೆ ಕೆರೆಗಳಲ್ಲಿ ಮರಗಳಿಗೆ ಯಾವುದೇ ರಕ್ಷಣೆ ನೀಡಿಲ್ಲ” ಎಂದರು.

“ವೀರಸಂದ್ರ ಕೆರೆಯಲ್ಲಿ 113 ಸಸಿಗಳಿಗೆ ಮರದ ಸಂಖ್ಯೆಗಳ ಫಲಕವನ್ನು ಕಂಡುಹಿಡಿಯಲು ಬೈಂಡಿಂಗ್ ತಂತಿಯಿಂದ ಬೋರ್ಡ್‌ಗಳನ್ನು ಕಟ್ಟಿದ್ದಾರೆ. ಬೋರ್ಡ್‌ಗಳನ್ನು ಕಟ್ಟಲು ಬೈಂಡಿಂಗ್ ವೈರ್ ಬಳಸುವುದು ಅಪಾಯಕಾರಿ. ಮರಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | 80 ವರ್ಷ ಮೇಲ್ಪಟ್ಟವರಿಗಾಗಿ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ : ತುಷಾರ್ ಗಿರಿನಾಥ್

“ಕೆರೆಗಳಿಗೆ ಸೂಕ್ತವಾಗಿ ಬೇಲಿ ಹಾಕಲಾಗಿದೆಯೇ? ಎಲ್ಲ ಸಸಿಗಳಿಗೆ ಟ್ರೀ ಗಾರ್ಡ್‌ಗಳನ್ನು ಅಳವಡಿಸಲಾಗಿದೆಯೇ? ಸಸಿಗಳನ್ನು ಕಟ್ಟುವ ತಂತಿಯಿಂದ ಮುಕ್ತಗೊಳಿಸಲಾಗಿದೆ ಎಂಬ ಬಗ್ಗೆ ನಿಗಮ ಖಚಿತಪಡಿಸಿಕೊಳ್ಳಬೇಕು. ಎಲ್ಲ ಗುತ್ತಿಗೆದಾರರಿಗೆ ಆರೋಗ್ಯಕರ ರೀತಿಯಲ್ಲಿ ಮರಗಳಿಗೆ ನೇತಾಡುವ ಬೋರ್ಡ್‌ಗಳನ್ನು ಬಳಸಲು ನಿಗಮವು ಮಾರ್ಗಸೂಚಿಯನ್ನು ನೀಡಬೇಕು” ಎಂದು ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X