ವ್ಯಾಪಾರಸ್ಥರ ಬಿಜೆಪಿ, ದೀನದಲಿತರ ಕಾಂಗ್ರೆಸ್‌; ಯಾವುದು ಬೇಕು ನಿರ್ಧರಿಸಿ ಎಂದ ಮಹದೇವಪ್ಪ

Date:

Advertisements
  • ದೀನದಲಿತರ ಪರ ಇರುವ ಏಕೈಕ ಧ್ವನಿ ಕಾಂಗ್ರೆಸ್ ಪಕ್ಷ
  • ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ

ಬಿಜೆಪಿ ವ್ಯಾಪಾರಸ್ಥರ ಪಕ್ಷ, ಕಾಂಗ್ರೆಸ್ ದೀನದಲಿತರ ಪರ ಇರುವ ಪಕ್ಷ. ಈ ಬಾರಿ ಜನ ಯೋಚಿಸಿ ಮತ ನೀಡಿ ನಿಮ್ಮ ಆಯ್ಕೆ ಪ್ರದರ್ಶಿಸಿ ಎಂದು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಹೇಳಿದರು.

ತಮ್ಮ ಸ್ವಕ್ಷೇತ್ರ ಟಿ ನರಸೀಪುರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಕ್ಷದ ಸ್ಟಾರ್ ಕ್ಯಾಂಪೇನರ್ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಹದೇವಪ್ಪ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಬಿಜೆಪಿ ಎಂದಿಗೂ ಬಡವರ, ದೀನದಲಿತರ ಪರ ಕೆಲಸ ಮಾಡುವುದಿಲ್ಲ ಅವರದ್ದೇನಿದ್ದರೂ ಅಂಬಾನಿ, ಅದಾನಿಗಳಿಗಳಿಗಿರುವ ಪಕ್ಷ. ಅವರ ಉದ್ದಾರವೇ ಬಿಜೆಪಿಯ ಸಾಧನೆ ಎಂದು ಕಿಡಿಕಾರಿದರು.

Advertisements

ಬಿಜೆಪಿಯವರು ಯಾವತ್ತಿಗೂ ದೇಶ ಉಳಿಸುವ ಯೋಜನೆ ಹಾಗೂ ಯೋಚನೆಯನ್ನು ಮಾಡುವವರಲ್ಲ. ಇವರದ್ದೇನಿದ್ದರೂ ಮಾರುವ ಯೋಜನೆಗಳಷ್ಟೇ ಎಂದು ಮಹದೇವಪ್ಪ ಲೇವಡಿ ಮಾಡಿದರು.

ಭಾರತೀಯ ಜನತಾಪಕ್ಷ ಹಾಗೂ ಮೋದಿ ಆಡಳಿತದಲ್ಲಿ ಸಂವಿಧಾನ ಸಂಕಷ್ಟಕ್ಕೀಡಾಗಿದೆ. ಇವರು ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ.

ಸಮಾನತೆ, ಸ್ವಾತಂತ್ರ್ಯದ ಉದ್ದೇಶವನ್ನು ಇವರು ಹಾಳು ಮಾಡುತ್ತಾರೆ. ಇವರಿಗೆ ಮತ್ತೆ ಆಡಳಿತ ನೀಡಿದರೆ ದೇಶವನ್ನು ಅವನತಿ ಕಡೆಗೆ ಒಯ್ಯುತ್ತಾರೆ ಎಂದು ಮಾಜಿ ಸಚಿವರು ಹೇಳಿದರು.

ಬಿಜೆಪಿ ಆರ್‌ಎಸ್‌ಎಸ್‌ ಆಣತಿಯಂತೆ ಕೆಲಸ ಮಾಡುವ ಜನವಿರೋಧಿ ಪಕ್ಷ. ಜನ ಇಲ್ಲಿ ಬದುಕುವುದು ಅಸಾಧ್ಯ ಎನ್ನುವ ವಾತಾವರಣವನ್ನು ದೇಶ ಕಂಡಿದೆ.

ಇವರೇ ಅಧಿಕಾರದಲ್ಲಿದ್ದರೆ ನಿಮ್ಮ ಅಭಿವೃದ್ದಿ ಅಸಾಧ್ಯ. ಕಾಂಗ್ರೆಸ್ ದೇಶದ ಜನರ ಪಕ್ಷ. ಇದರೊಂದಿಗಿದ್ದರೆ ಜನ ಸದಾ ಸುರಕ್ಷಿತ, ದೇಶದ ಜೊತೆ ಸಂವಿಧಾನವೂ ಭದ್ರ ಎಂದು ಮಹದೇವಪ್ಪ ಹೇಳಿದರು.

ಹಿಂದೆ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 165 ಭರವಸೆಗಳನ್ನೂ ಈಡೇರಿಸಿದೆ. ಇದು ನಮ್ಮ ಕಾಂಗ್ರೆಸ್ ಸರ್ಕಾರ. ಬಿಜೆಪಿಯವರು ಹೇಳಿದ್ದಷ್ಟೇ ಹೊರತು ಮಾಡಿದ್ದೇನೂ ಇಲ್ಲ ಎಂದರು.

ಈ ಸುದ್ದಿ ಓದಿದ್ದೀರಾ?:ಹಳೆ ಮೈಸೂರಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಹರಸಾಹಸ : ಪ್ರಚಾರದ ಕಣಕ್ಕೆ ಎಚ್‌ಡಿಡಿ, ಎಚ್‌ಡಿಕೆ

ಸಮಯ ಸಾಧಕ ರಾಜಕೀಯನ್ನಷ್ಟೇ ಮಾಡುವ ಭಾಜಪದವರು ರಾಜ್ಯವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಮಹಿಳೆಯರು, ದಲಿತರು,ದುಡಿಯುವ ವರ್ಗವನ್ನು ಇವರು ಪ್ರಪಾತಕ್ಕೆ ತಳ್ಳಿದ್ದಾರೆ.

ಜನಪರ ಸೂಕ್ಷ್ಮತೆ, ಕಾಳಜಿ ಇಲ್ಲದ ಈ ಸರ್ಕಾರ ಎಮ್ಮೆಯ ದಪ್ಪ ಚರ್ಮದಂತೆ. ʼಇಂತಹ ಸರ್ಕಾರ ಇದ್ದರೆಷ್ಟು ಹೋದರೆಷ್ಟು ಎಂದು ಮಹದೇವಪ್ಪ ಗುಡುಗಿದರು.

ನೀವೆಲ್ಲ ಮತ್ತೊಮ್ಮೆ ಯೋಚನೆ ಮಾಡಿ, ಸ್ಥಿರ ಹಾಗೂ ಸುಭದ್ರ ಸರ್ಕಾರ ನೀಡಲು ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ, ನನಗೂ ಹಾಗೂ ನಮ್ಮ ಜಿಲ್ಲೆಯ ಎಲ್ಲರನ್ನೂ ಆಶೀರ್ವದಿಸಿ ಎಂದು ಕ್ಷೇತ್ರದ ಮತದಾರರು ಹಾಗೂ ಕಾಂಗ್ರೆಸ್ ಅಭಿಮಾನಿಗಳಲ್ಲಿ ವಿನಂತಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X