ಸ್ವಕ್ಷೇತ್ರದಲ್ಲಿ ಕೈ ಮುಗಿದು ಮತಭಿಕ್ಷೆ ಕೇಳಿದ ಎಚ್ಡಿಕೆ, ಡಿಕೆಶಿ, ಬೊಮ್ಮಾಯಿ: ಬಹಿರಂಗ ಪ್ರಚಾರಕ್ಕೆ ತೆರೆ

Date:

Advertisements
  • ಬಹಿರಂಗ ಚುನಾವಣಾ ಪ್ರಚಾರಕ್ಕೆ ಅಧಿಕೃತ ತೆರೆ
  • ಕೊನೆ ಕ್ಷಣದ ಮತಯಾಚನೆ ನಡೆಸಿದ ನಾಯಕರು

ರಾಜ್ಯ ರಾಜಕೀಯದ ಹೊಸ ಪರ್ವ ಆರಂಭಕ್ಕಾಗಿನ ಗುದ್ದುಗೆ ಗುದ್ದಾಟದ ಕೊನೆ ಅಂಕಕ್ಕೆ ಭಾವುಕ ತೆರೆ ಬಿದ್ದಿದೆ. ಚುನಾವಣಾ ಆಯೋಗ ನಿಗದಿ ಪಡಿಸಿದಂತೆ ಮೇ 8ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

ಈ ಕ್ಷಣ ಆರಂಭವಾಗುವುದಕ್ಕೂ ಮೊದಲು ಹಾಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಹಾಗೂ ಭವಿಷ್ಯದ ಸಿಎಂ ಎಂದೇ ಬಿಂಬಿತರಾದ ಡಿಕೆ ಶಿವಕುಮಾರ್ ತಮ್ಮ ತಮ್ಮ ಸ್ವಕೇತ್ರಗಳಲ್ಲಿ ಮತಯಾಚನೆ ಮಾಡಿದರು.

ಮೂವರೂ ನಾಯಕರು ಬಹಿರಂಗ ಚುನಾವಣಾ ಪ್ರಚಾರದ ಕೊನೆ ಭಾಷಣಗಳನ್ನು ಭಾವುಕವಾಗಿಯೇ ಮಾಡುವ ಮೂಲಕ ಜನರ ಮನಗೆಲ್ಲಲು ಪ್ರಯತ್ನಿಸಿದರು.

Advertisements

ತವರು ಕ್ಷೇತ್ರ ಕನಕಪುರದ ಮೇಲೆ ವಿಪರೀತ ವ್ಯಾಮೋಹ ಹೊಂದಿರುವ ಡಿ ಕೆ ಶಿವಕುಮಾರ್ ಇದೇ ಮೊದಲ ಬಾರಿ ಕೊನೆಯ ಒಂದೇ ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.

ಜನರ ಬಳಿ ಕೈ ಮುಗಿದು ಮತ ಕೇಳಿದ ಅವರು ನಮ್ಮ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿ ಅಧಿಕಾರಕ್ಕೆ ಕೂರಿಸಿ, ನೀವು ನಮಗೆ ಹೊರಿಸಿರುವ ಜವಾಬ್ದಾರಿಯನ್ನು ಸಾಂಗವಾಗಿ ನೆರವೇರಿಸಿಕೊಡುತ್ತೇವೆ ಎಂದು ಕೇಳಿಕೊಂಡರು.

ಇನ್ನು ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿದ ಎಚ್ ಡಿ ಕುಮಾರಸ್ವಾಮಿ, ಉಸಿರಿರೋವರೆಗೂ ನಾನು ಚನ್ನಪಟ್ಟಣದ ಮಗ, ನಂತರ ನನ್ನ ದೇಹವೂ ಇಲ್ಲೇ ಮಣ್ಣಾಗಲಿದೆ ಎಂದು ಭಾವನಾತ್ಮಕವಾಗಿ ಜನರ ಮನ ಗೆಲ್ಲಲು ಮುಂದಾದರು.

ನಮ್ಮ ಕುಟುಂಬವನ್ನು ಕೈ ಹಿಡಿದು ನಡೆಸಿದ್ದು ರಾಮನಗರ ಚನ್ನಪಟ್ಟಣ ಕ್ಷೇತ್ರಗಳು, ನಾನು ಸಿಎಂ ಆದರೆ ಇವೆರಡನ್ನೂ ಅವಳಿ ನಗರಗಳನ್ನಾಗಿ ಮಾಡಿ ಮಾದರಿ ಕ್ಷೇತ್ರ ಮಾಡುವೆ. ನನ್ನನ್ನು ಮುಖ್ಯಮಂತ್ರಿಯನ್ನಾಗಿಸುವುದೂ ಬಿಡುವುದು ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.

ಇವರ ನಡುವೆ ಭಿನ್ನತೆ ಮೆರೆದ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಕೊನೆ ಪ್ರಚಾರ ಕಾರ್ಯವನ್ನು ನಂಜನಗೂಡು ಅಭ್ಯರ್ಥಿ ದರ್ಶನ್‌ ಧ್ರುವನಾರಾಣ್‌ ಪರ ನಡೆಸಿದರು. ಯುವ ನಾಯಕನ ಅಗತ್ಯತೆಯನ್ನು ಕ್ಷೇತ್ರದ ಜನರಿಗೆ ಮನದಟ್ಟು ಮಾಡಿ ಆಶೀರ್ವದಿಸುವಂತೆ ಕೋರಿಕೊಂಡರು.ಬಹಿರಂಗ ಪ್ರಚಾರ

ಈ ಸುದ್ದಿ ಓದಿದ್ದೀರಾ? : ಪಕ್ಷಾಂತರಿಗಳಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ತಿರಸ್ಕರಿಸಬೇಕು

ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಮತಯಾಚನೆ ಮಾಡಿ ಕ್ಷೇತ್ರದ ಜನರಲ್ಲಿ ಮನವಿ ಮಾಡಿ, ಪಕ್ಷ ಹಾಗೂ ತಮ್ಮನ್ನು ಆಶೀರ್ವದಿಸಿ ಮತ್ತೊಂದು ಅವಧಿಗೆ ಅಧಿಕಾರ ನಡೆಸಲು ಅನುವು ಮಾಡಿಕೊಡುವಂತೆ ಕೋರಿಕೊಂಡರು.

ಹೀಗೆ ಮೂವರೂ ನಾಯಕರು ತಮ್ಮ ತಮ್ಮ ಜವಾಬ್ಧಾರಿ ಜೊತೆ ಪಕ್ಷ ಗೆಲ್ಲಿಸುವ ಹೊಣೆ ಹೊತ್ತು, ಮತದಾರ ಪ್ರಭುವಿನೆದುರು ನಡು ಬಗ್ಗಿಸಿ ಮತಯಾಚನೆ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X