ಕೊಪ್ಪಳ | ಶಿಕ್ಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಸಾವು

Date:

Advertisements

ಶಾಲಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕಿನ ಹೊರವಲಯದಲ್ಲಿ ನಡೆದಿದೆ.

ನಿರುಪಾದಿ ದುರುಗಪ್ಪ (14) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಎನ್ನಲಾಗಿದೆ.

IMG 20241219 WA0008

ಎರಡು ದಿನದ ಹಿಂದೆ ಪ್ರವಾಸಕ್ಕೆಂದು ಶಾಲಾ ಮಕ್ಕಳು ಹಾಗೂ ಶಿಕ್ಷಕರು ಮಲೆನಾಡು ಭಾಗಕ್ಕೆ ತೆರಳಿದ್ದರು. ಭಟ್ಕಳ ನಗರ ದಾಟಿದ ನಂತರ ಗ್ರಾಮವೊಂದರಲ್ಲಿ ಮೂತ್ರ ವಿಸರ್ಜನೆಗೆ ಬಸ್ ನಿಲ್ಲಿಸಲಾಗಿತ್ತು. ಎಲ್ಲ ಮಕ್ಕಳು ಮೂತ್ರ ವಿಸರ್ಜನೆ ಮಾಡಿ ಬಸ್ ಹತ್ತಿದ್ದರು. ನಂತರ ನಿರುಪಾದಿ ಮೆಡಿಕಲ್ ಅಂಗಡಿಗೆ ತೆರಳಿ ಮಾತ್ರೆ ತಗೆದುಕೊಂಡು ಹಿಂದಿರುಗುವಾಗ ಬಾವಿಯಲ್ಲಿ ಬಿದ್ದಿದ್ದಾನೆ ಎಂದು ವಿದ್ಯಾರ್ಥಿಯ ಅಣ್ಣ ಮಾಹಿತಿ ನೀಡಿದರು.

Advertisements

ಶಿಕ್ಷಕರು ಆ ಗ್ರಾಮದಿಂದ ಸ್ವಲ್ಪ ದೂರದಲ್ಲೇ ಹೋದಾಗ ಮಕ್ಕಳನ್ನು ಎಣಿಸಿದ್ದಾರೆ. ಒಬ್ಬ ವಿದ್ಯಾರ್ಥಿ ಕಡಿಮೆ ಇರುವ ಕಾರಣಕ್ಕೆ ಹಿಂತಿರುಗಿ ಅದೇ ಗ್ರಾಮಕ್ಕೆ ವಾಪಸಾಗಿದ್ದಾರೆ. ಅಷ್ಟರಲ್ಲಿ ಆ ಗ್ರಾಮದ ಜನ ಬಾವಿಯಲ್ಲಿ ಬಿದ್ದ ವಿದ್ಯಾರ್ಥಿಯ ಶವ ಹೊರತೆಗೆದಿದ್ದರು.

ಶಾಲೆಯ ಒಟ್ಟು 105 ಮಂದಿ ಮಕ್ಕಳು, 13 ಮಂದಿ ಶಿಕ್ಷಕರು ಒಗ್ಗೂಡಿ ನಾಲ್ಕು ದಿನದ ಪ್ರವಾಸಕ್ಕೆ ತೆರಳಿದ್ದರು. ವಿದ್ಯಾರ್ಥಿ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಜನಾರ್ದನ ರೆಡ್ಡಿ ಹೆಸರಿರುವ ಬ್ಯಾಡ್ಜ್‌ ಧರಿಸಿಬಂದ ಮಹಿಳೆ; ಮತಗಟ್ಟೆಯಲ್ಲಿ ಗದ್ದಲ

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್‌ಪಿಪಿ ಮತ್ತು ಬಿಜೆಪಿ ಕಾರ್ಯಕರ್ತರ...

ಕೊಪ್ಪಳ | ಸಿದ್ದರಾಮಯ್ಯ ಸಿಎಂ ಆಗುವುದಾದರೆ ಕಾಂಗ್ರೆಸ್‌ಗೆ ಬೆಂಬಲ : ಜನಾರ್ದನ ರೆಡ್ಡಿ

13 ಕ್ಷೇತ್ರಗಳಲ್ಲಿ ಕೆಆರ್‌ಪಿಪಿ ಸ್ಪಷ್ಟವಾಗಿ ಗೆಲುವು ಸಾಧಿಸಲಿದೆ ಕೆಆರ್‌ಪಿಪಿ ಯಾವುದಾದರೂ ಒಂದು ಪಕ್ಷಕ್ಕೆ...

ನನ್ನನ್ನು ಸೋಲಿಸೋಕೆ ಇದು ಗುಜರಾತ್ ಅಲ್ಲ, ಕರ್ನಾಟಕ: ಬಿಜೆಪಿ ವಿರುದ್ಧ ಗುಡುಗಿದ ಶೆಟ್ಟರ್

ಕರ್ನಾಟಕದಲ್ಲಿ ಕಾಂಗ್ರೆಸ್ ಈ ಬಾರಿ 140 ಸ್ಥಾನ ಪಡೆಯುತ್ತದೆ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಅದು...

ಕೊಪ್ಪಳ | ವಿಕಲಚೇತನರು, ವೃದ್ಧರಿಂದ ಮತ ಪಡೆಯಲು ಮನೆ ಭೇಟಿ ವ್ಯವಸ್ಥೆ

ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರ ಸಭೆ ವಿಕಲಚೇತನರು, 80 ವರ್ಷ ಮೇಲ್ಪಟ್ಟವರಿಂದ ಮತದಾನ ವಿಕಲಚೇತನರು...

Download Eedina App Android / iOS

X