ರಾಯಚೂರು | ಎಲ್ಲರನ್ನೂ ಕತ್ತಲಿನಿಂದ ಬೆಳಕಿನೆಡೆಗೆ ತರುವುದೇ ಪ್ರವಾದಿ ಆಶಯ: ಯೋಗೇಶ್ ಮಾಸ್ಟರ್

Date:

Advertisements

ಕತ್ತಲಿನಿಂದ ಬೆಳಕಿನೆಡೆಗೆ ಬರುವುದು ಪ್ರವಾದಿಯವರ ಕರೆಯಾಗಿತ್ತು. ನಾವೆಲ್ಲರೂ ದ್ವೇಷವನ್ನು ಅಳಿಸಿ, ಪ್ರೀತಿಯನ್ನು ಹಂಚಬೇಕು ಎಂದು ಹಿರಿಯ ಸಾಹಿತಿ ಯೋಗೇಶ್ ಮಾಸ್ಟರ್ ಹೇಳಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ʼಜಮಾತೆ ಇಸ್ಲಾಂ ಹಿಂದ್ʼ ಆಯೋಜಿಸಿದ್ದ ಸಮಾನತೆಯ ಸಮಾಜದ ಶಿಲ್ಪಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಅರೇಬಿಯಾ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆಗಳು ಅತೀಯಾಗಿ ನಡೆಯುತ್ತಿದ್ದವು. ಪ್ರವಾದಿ ಅವರು ಪ್ರೀತಿ, ಸಹನೆಯಿಂದ ಅವರೆಲ್ಲರನ್ನೂ ಸನ್ಮಾರ್ಗದ ಕಡೆಗೆ ಕರೆ ತಂದರು. ಪ್ರಾಣಿಗಳಿಗೂ ಕೂಡ ಗೊತ್ತು, ಆಹಾರವನ್ನು ಹಂಚಿಕೊಂಡು ತಿನ್ನಬೇಕು ಅಂತ. ಆದರೆ, ಮನುಷ್ಯನು ತಿನ್ನುವ ಆಹಾರವನ್ನು ಬಿಸಾಕಿ, ದ್ವೇಷ ಸಾಧಿಸುವ ಕಡೆಗೆ ಮುಖ ಮಾಡಿದ್ದಾನೆ ಎಂದು, ಬೇಸರ ವ್ಯಕ್ತಪಡಿಸಿದರು.

Advertisements

ನಂತರ ಮಾತನಾಡಿದ ಜಮಾತ್ ಇಸ್ಲಾಂ ಹಿಂದ್‌ನ ರಾಜ್ಯ ಮುಖಂಡ ಮಹಮದ್ ಕುಂಞಿ, ಪ್ರವಾದಿ ಅವರು ಹೇಳುತ್ತಾರೆ, ಕೊಲೆ ಮಾಡಿದವನು, ಕೊಲೆ ಆದವನು ಇಬ್ಬರು ಕೂಡ ನರಕಕ್ಕೆ ಎಂದು. ಕೊಲೆ ಮಾಡಬೇಕು ಎಂಬುದು ಇಬ್ಬರ ಮನಸ್ಥಿತಿ ಆಗಿರುತ್ತದೆ. ದೇವರ ಹೆಸರಲ್ಲಿ ಅಪಪ್ರಚಾರದಿಂದ ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಜಾತಿ ಜಾತಿಗಳ ಮಧ್ಯದಲ್ಲಿ ವಿಭಜನೆ ಮಾಡುತ್ತಿದ್ದಾರೆ. ಸುಳ್ಳು ವಿಜೃಂಭಿಸುತ್ತಿವೆ, ಸತ್ಯವನ್ನು ಮರೆಮಾಚುತ್ತಿದ್ದಾರೆ. ಇಂತಹ ಮನಸ್ಥಿತಿಯಿಂದ ಹೊರ ಬರಬೇಕಿದೆ.

ಈ ಜಗತ್ತಿನ ಮುಸಲ್ಮಾನರು, ಪ್ರವಾದಿ ಅವರು ತೋರಿಸಿದ ದಾರಿಯಲ್ಲಿ ನಡೆಯುತ್ತಿಲ್ಲ, ಅವರನ್ನು ಪೂಜಿಸುವುದಿಲ್ಲ, ಆರಾಧಿಸುವುದಿಲ್ಲ. ಅವರು ದೇವರು ಆಗಿಲ್ಲ, ಸಾಮಾನ್ಯ ಮನುಷ್ಯನಾಗಿ ಉಳಿದಿದ್ದರು. ಪ್ರಪಂಚದಲ್ಲಿ ಸುಮಾರು ಪ್ರವಾದಿಗಳು, ದಾರ್ಶನಿಕಗಳು ಬಂದರು. ಅವರೆಲ್ಲರೂ ಎಲ್ಲರನ್ನೂ ಜೋಡಿಸುವುದಕ್ಕೆ ಬಂದರೆ, ಹೊರೆತು ವಿಭಜಿಸುವುದಕ್ಕೆ ಅಲ್ಲ. ಸದ್ಯದ ಪರೀಸ್ಥಿತಿಯಲ್ಲಿ ನಾವು, ಧರ್ಮದ ಬಗ್ಗೆ ಮಾತನಾಡುವಾಗ ವಿಪರೀತ ಕೋಪ, ದ್ವೇಷದಿಂದ ಮಾತನಾಡುತ್ತೇವೆ. ಧರ್ಮದ ಬಗ್ಗೆ ಹೇಳುವಾಗ ಮುಗುಳ್ನಗೆಯಿಂದ ಮಾತಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ವಿರೂಪಾಕ್ಷಪ್ಪ, ಜಮಾತ್ ಸಿಂಧನೂರು ತಾಲ್ಲೂಕು ಸಂಚಾಲಕ  ಮಹಮದ್ ಹುಸೇನ್‌, ವಿಭಾಗೀಯ ಸಂಚಾಲಕ ದಿಲವರ್ ಅಂಬರ್ ಖಾನ್, ಬಾಬರ್ ಬೇಗ್, ಸೈಯ್ಶದಾ ಸಹಬತ್ ನಾಜ್ ಇನ್ನಿತರರು ಹಾಜರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X