ನಷ್ಟದ ಬೆನ್ನಲ್ಲೇ 50 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌‌ ಮುಚ್ಚಲು ಸಜ್ಜಾದ ‘ಪಿವಿಆರ್ ಐನಾಕ್ಸ್’

Date:

Advertisements
  • ಮೊದಲ ತ್ರೈಮಾಸಿಕದಲ್ಲಿ 300 ಕೋಟಿ ರೂಪಾಯಿಗೂ ಅಧಿಕ ನಷ್ಟ
  • ಐನಾಕ್ಸ್‌ ಜೊತೆಗಿನ ಒಪ್ಪಂದದಿಂದ ಸಂಕಷ್ಟಕ್ಕೆ ಸಿಲುಕಿದ ಪಿವಿಆರ್‌

ದೇಶದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಆಪರೇಟರ್ ಎನ್ನಿಸಿಕೊಂಡಿರುವ ಪಿವಿಆರ್ ಸಂಸ್ಥೆ ಬಹುಕೋಟಿ ನಷ್ಟದಲ್ಲಿದ್ದು, ಭಾರತ ಮತ್ತು ಶ್ರೀಲಂಕಾದಲ್ಲಿರುವ ‘ಪಿವಿಆರ್ ಐನಾಕ್ಸ್’ ಸ್ಕ್ರೀನ್‌‌ಗಳ ಪೈಕಿ 50 ಸ್ಕ್ರೀನ್‌‌ಗಳನ್ನು ಮುಚ್ಚಲು ಸಂಸ್ಥೆಯ ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಅಂದರೆ, 2023ರ ಜನವರಿಯಿಂದ ಮಾರ್ಚ್ ಅಂತ್ಯದ ‌ವರೆಗೆ‌‌ ಸಂಸ್ಥೆ ಒಟ್ಟು 333 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ. ಹೀಗಾಗಿ ಮುಂದಿನ ಆರು ತಿಂಗಳ ಅವಧಿಯಲ್ಲಿ ನಷ್ಟದಲ್ಲಿರುವ 50 ಸ್ಕ್ರೀನ್‌‌ಗಳನ್ನು ಗುರುತಿಸಿ ಅಂತಹ ಸ್ಕ್ರೀನ್ ‌ಗಳಲ್ಲಿ ಚಿತ್ರ ಪ್ರದರ್ಶನ ನಿಲ್ಲಿಸಲಾಗುವುದು ಎಂದು ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚಿನ ವರೆಗೂ ಬೇರೆಯಾಗಿದ್ದ ಪಿವಿಆರ್ ಮತ್ತು ಐನಾಕ್ಸ್ ಸಂಸ್ಥೆಗಳು ಮಲ್ಟಿಪ್ಲೆಕ್ಸ್ ಆಪರೇಟಿಂಗ್ ಸಂಸ್ಥೆಗಳು ಕಳೆದ ಫೆಬ್ರುವರಿಯಲ್ಲಿ ವಿಲೀನಗೊಂಡಿದ್ದವು. ಈ ಪ್ರಕ್ರಿಯೆಯಿಂದ ‘ಪಿವಿಆರ್ ಐನಾಕ್ಸ್’ ಸಂಸ್ಥೆಯ ವಹಿವಾಟು ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿತ್ತು. ವಿಲೀನ ಪ್ರಕ್ರಿಯೆಗೂ ಮುನ್ನ ಅಂದರೆ, ಕಳೆದ ಡಿಸೆಂಬರ್‌‌ನಲ್ಲಿ ಪಿವಿಆರ್ ಸಂಸ್ಥೆ ‌16 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು ಎನ್ನಲಾಗಿದೆ. ಐನಾಕ್ಸ್ ಜೊತೆ ವಿಲೀನವಾದ ಬಳಿಕವೇ ಸಂಸ್ಥೆ ನಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ.

Advertisements

ಈ ಸುದ್ದಿ ಓದಿದ್ದೀರಾ? ಶಿಳ್ಳೆ, ಚಪ್ಪಾಳೆಗೆ ಸೀಮಿತವಾದ ಸುದೀಪ್‌ ವರ್ಚಸ್ಸು

ಐನಾಕ್ಸ್ ಜೊತೆಗಿನ ಒಪ್ಪಂದ ಪಿವಿಆರ್ ನಷ್ಟಕ್ಕೆ ಒಂದು ಕಾರಣವಾದರೆ, ಕೊರೊನಾ ಸಾಂಕ್ರಾಮಿಕದ ಬಳಿಕ ಜನ ಮಾಲ್ ಮತ್ತು ಮಲ್ಟಿಪ್ಲೆಕ್ಸ್‌‌ಗಳತ್ತ ಬರುವುದು ಕಡಿಮೆಯಾಗುತ್ತಿದೆ. ಜೊತೆಗೆ ಕೊರೊನಾ ಕಾಲಕ್ಕಿಂತ ಮೊದಲು ಹಿಂದಿ ಸಿನಿಮಾಗಳ ಬಗ್ಗೆ‌ ಜನರಲ್ಲಿದ್ದ ಕ್ರೇಜ್ ಇತ್ತೀಚೆಗೆ ಕಾಣಸಿಗುತ್ತಿಲ್ಲ. ಅವತಾರ್ 2 ಮತ್ತು ಪಠಾಣ್ ರೀತಿಯ ಸಿನಿಮಾಗಳನ್ನು ಬಿಟ್ಟರೆ ಪ್ರೇಕ್ಷಕರನ್ನು ಮಲ್ಟಿಪ್ಲೆಕ್ಸ್‌‌ಗಳತ್ತ ಸೆಳೆಯುವ ಸಿನಿಮಾಗಳು ತೆರೆಗೆ ಬಂದಿಲ್ಲದಿರುವುದು ಈ ಮಲ್ಟಿಪ್ಲೆಕ್ಸ್ ಆಪರೇಟಿಂಗ್ ಸಂಸ್ಥೆಗಳ ನಷ್ಟಕ್ಕೆ ಕಾರಣ ಎನ್ನಲಾಗುತ್ತಿದೆ.

ಭಾರತ ಮತ್ತು ಶ್ರೀಲಂಕಾ ಎರಡೂ ದೇಶಗಳ 115 ನಗರಗಳಲ್ಲಿ ʼಪಿವಿಆರ್‌ ಐನಾಕ್ಸ್‌ʼ ಸಂಸ್ಥೆಯ 361 ಸಿನಿಮಾ ಹಾಲ್‌ಗಳಿದ್ದು, ಅವುಗಳಲ್ಲಿ ಒಟ್ಟು 1670 ಸ್ಕ್ರೀನ್‌ಗಳಿವೆ. ಆ ಪೈಕಿ ಈಗ ನಷ್ಟ ಅನುಭವಿಸುತ್ತಿರುವ 50 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಗೊಳ್ಳಲಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X