ಕೋವಿಡ್‌ ಸಮಯದಲ್ಲಿ ಭ್ರಷ್ಟಾಚಾರದ ಜೊತೆ ಸಾವಿರಾರು ಮಂದಿ ಜೀವ ತೆಗೆದ ಬಿಜೆಪಿ ಸರ್ಕಾರ: ಸಚಿವ ಪ್ರಿಯಾಂಕ್‌ ಖರ್ಗೆ

Date:

Advertisements

ಕೋವಿಡ್‌ ಸಾಂಕ್ರಾಮಿಕ ರೋಗದ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಕೋಟ್ಯಂತರ ಲೂಟಿ ಹೊಡೆದಿರುವ ಜೊತೆ ಸಾವಿರಾರು ಮಂದಿಯ ಸಾವಿಗೂ ಕಾರಣವಾಗಿದೆ ಎಂಬುದನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅವರು ವಿವರಿಸಿದ್ದಾರೆ.

ಎಕ್ಸ್‌ ಖಾತೆಯಲ್ಲಿ ಪ್ರಧಾನಿ ಮೋದಿಗೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಾಸ್ತವವನ್ನು ಬಿಚ್ಚಿಟ್ಟಿರುವ ಪ್ರಿಯಾಂಕ್‌ ಖರ್ಗೆ ಅವರು, ಚೀನಿ ಕಂಪನಿಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಯಾವ ರೀತಿ, ಯಾವಾಗ ಲಾಭ ಮಾಡಿಕೊಟ್ಟು ಜನರ ತೆರಿಗೆ ಹಣವನ್ನು ದೋಚಿ, ಸಾವಿರಾರು ಮಂದಿಯ ಪ್ರಾಣವನ್ನು ಬಲಿ ತೆಗೆದುಕೊಂಡಿದೆ ಎಂಬುದನ್ನು ತಿಳಿಸಿದ್ದಾರೆ.

ಚೀನಾದ ಬಿಗ್ ಫಾರ್ಮಾಸ್ಯುಟಿಕಲ್ ಮತ್ತು ಡಿಹೆಚ್‌ಬಿ ಗ್ಲೋಬಲ್ ಹಾಂಗ್ ಕಾಂಗ್ ಕಂಪನಿಗಳಿಗೆ ಆ ಕಂಪನಿಗಳೆ ಉಲ್ಲೇಖಿಸಿದ ಪ್ರತಿ ಕಿಟ್‌ಗೆ 2,117.53 ರೂ. ದರವನ್ನು ನೀಡಬೇಕೆಂದು ಇಮೇಲ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಕಳುಹಿಸಿದೆ. 17.3.2020 ರಲ್ಲಿ 416.48 ಕೋಟಿಗೆ ಔಷಧಗಳು, ರಾಸಾಯನಿಕ ವಸ್ತುಗಳು, ವೈದ್ಯಕೀಯ ಉಪಕರಣಗಳು ಮತ್ತು ಉಪಭೋಗ್ಯ ವಸ್ತುಗಳ ಖರೀದಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಳುಹಿಸಿದ ವರದಿಗೆ ಬಿಜೆಪಿ ಸರ್ಕಾರ ತಕ್ಷಣ ಅನುಮೋದನೆ ನೀಡುತ್ತದೆ.

Advertisements

ಸರ್ಕಾರದ ಆದೇಶವನ್ನು ಆಧರಿಸಿ 18.3.2020 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಗತ್ಯ ಮೌಲ್ಯಮಾಪನ ಸಮಿತಿಯು ಪ್ರತಿ ಕಿಟ್‌ಗೆ 2,117.53 ರೂ. ದರದಲ್ಲಿ 1,20,000 ಪಿಪಿಇ ಕಿಟ್‌ಗಳ ಖರೀದಿಗೆ ಅನುಮೋದನೆ ನೀಡಿದೆ. ಈ ಸಂದರ್ಭದಲ್ಲಿ ಅಲ್ಪಾವಧಿ ಟೆಂಡರ್ ಕರೆಯಲು ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದರೂ ಆರೋಗ್ಯ ತುರ್ತು ಪರಿಸ್ಥಿತಿಯ ನೆಪ ಹೇಳಿ ಖರೀದಿಯ ಕಡತವನ್ನು ನೇರವಾಗಿ ಅಂದಿನ ಸಿಎಂ ಬಿ ಎಸ್‌ ಯಡಿಯೂರಪ್ಪ ಅವರ ಅನುಮೋದನೆಗೆ ಸಲ್ಲಿಸಬೇಕೆಂದು ಸರ್ಕಾರ ನಿರ್ಧರಿಸುತ್ತದೆ.

ಮಾಜಿ ಸಿಎಂ ಬಿಎಸ್‌ವೈ ಮತ್ತು ಅಂದಿನ ಆರೋಗ್ಯ ಸಚಿವರಾದ ಶ್ರೀರಾಮಲು ಅವರು 02.4.2020 ರಂದು ಡಿಎಚ್‌ಬಿ ಗ್ಲೋಬಲ್ ಹಾಂಗ್ ಕಾಂಗ್‌ನಿಂದ ಪ್ರತಿ ಕಿಟ್‌ಗೆ 2,117 ರೂ. ಬೆಲೆಯಂತೆ 1,00,000 ಪಿಪಿಇ ಕಿಟ್‌ಗಳನ್ನು ನೇರವಾಗಿ ಖರೀದಿಸಲು ಆದೇಶಿಸಿದ್ದಾರೆ. ಇದರ ಒಟ್ಟು ಮೌಲ್ಯ ಅಂದಾಜು. 21.18 ರೂ. ಕೋಟಿ ಎಂದು ಪ್ರಿಯಾಂಕ್‌ ಖರ್ಗೆ ಉಲ್ಲೇಖಿಸಿದ್ದಾರೆ.

ಪುನಃ 10.4.2020 ರಂದು ಡಿಹೆಚ್‌ಬಿ ಗ್ಲೋಬಲ್‌ ಕಂಪನಿಗೆ 1,00,000 ಕಿಟ್‌ಗಳಿಗೆ ಪ್ರತಿ ಕಿಟ್‌ಗೆ 2,104.53 ರೂ.ನಂತೆ ನೇರವಾಗಿ ಖರೀದಿಸಲು ಆದೇಶಿಸಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು 21 ಕೋಟಿ ರೂ. ಆಗಿರುತ್ತದೆ. ಮತ್ತೊಮ್ಮೆ 10.4.2020 ರಂದು ಬಿಗ್ ಫಾರ್ಮಾಸ್ಯುಟಿಕಲ್ಸ್‌ ಕಂಪನಿಗೆ 1,00,000 ಪಿಪಿಇ ಕಿಟ್‌ಗಳಿಗೆ ಪ್ರತಿ ಕಿಟ್‌ಗೆ 2,049.84 ರೂ. ದರದಂತೆ ನೇರವಾಗಿ ಖರೀದಿಸಲು ಆದೇಶಿಸಲಾಯಿತು. ಇದರ ಒಟ್ಟು ಮೌಲ್ಯ ಸುಮಾರು 20.5 ಕೋಟಿ ರೂ. ಎಂದು ಸಚಿವರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋವಿಡ್‌ ದುರಂತದಲ್ಲೂ ʼಹೆಣದ ಮೇಲೆ ಹಣʼ ಎತ್ತಿದವರ ಅಮಾನವೀಯತೆ

ಇವೆಲ್ಲವೂಗಳಿಂದ ಒಟ್ಟಾರೆ ಸರ್ಕಾರವು 62.5 ಕೋಟಿ ರೂ. ವೆಚ್ಚದಲ್ಲಿ ಡಿಹೆಚ್‌ಬಿ ಗ್ಲೋಬಲ್ ಕಂಪನಿಯಿಂದ 2 ಲಕ್ಷ ಮತ್ತು ಬಿಗ್ ಫಾರ್ಮಾಸ್ಯುಟಿಕಲ್ ಕಂಪನಿಯಿಂದ ಒಂದು ಲಕ್ಷ ಸೇರಿ ಒಟ್ಟು 3 ಲಕ್ಷ ಪಿಪಿಇ ಕಿಟ್‌ಗಳನ್ನು ನೇರವಾಗಿ ಖರೀದಿಸಲು ಆರ್ಡರ್‌ ಮಾಡುತ್ತದೆ.

ಪಿಪಿಇ ಕಿಟ್‌ಗಳನ್ನು ತರಿಸಿಕೊಳ್ಳಲು ಸರ್ಕಾರವು ವಿಧಿಸಿರುವ ಷರತ್ತುಗಳೆಂದರೆ ಆದೇಶಿಸಿದ 7 ದಿನಗಳಲ್ಲಿ ವಿತರಣೆಯಾಗಬೇಕು. ಹಾಂಕಾಂಗ್‌ನಿಂದ ಬೆಂಗಳೂರಿಗೆ ಬರುವ ಸಾರಿಗೆ ಮತ್ತು ವಿತರಣೆಯನ್ನು ಒಳಗೊಂಡಿರಬೇಕು. ಹಾಗೆಯೇ ಎಲ್ಲ ಪಾವತಿಗಳನ್ನು ಡೆಲಿವರಿಯಲ್ಲಿ ಮಾಡಬೇಕು ಎಂದು ತಿಳಿಸಲಾಗಿತ್ತು.

ಸರಕು ಸಾಗಣೆಗೆ 21 ಕೋಟಿ ರೂ.

ಬಿಜೆಪಿ ಸರ್ಕಾರವು 02.4.2020 ರಂದು ಚೀನಿ ಸಂಸ್ಥೆಗಳಿಗೆ ಆದೇಶದ ಅನುಮತಿ ನೀಡಲಾಗುತ್ತದೆ. ಆದರೆ 06.4.2020 ರಂದು, ಡಿಹೆಚ್‌ಬಿ ಗ್ಲೋಬಲ್‌ಗೆ 11.99 ಕೋಟಿ ರೂ. ಮತ್ತು ಬಿಗ್ ಫಾರ್ಮಾಸ್ಯುಟಿಕಲ್ಸ್ ಕಂಪನಿಗೆ 9.35 ಕೋಟಿ ರೂ. ಸಾರಿಗೆ ಶುಲ್ಕವನ್ನು ಸರ್ಕಾರವು ಭರಿಸಬೇಕಾಗುತ್ತದೆ ಎಂದು ತಿದ್ದುಪಡಿ ಆದೇಶ ಹೊರಡಿಸಲಾಗಿದೆ. ಅಂದರೆ ಬಿಜೆಪಿ ಸರ್ಕಾರ 62 ಕೋಟಿ ರೂ. ಮೌಲ್ಯದ ವಸ್ತುಗಳ ಸರಕು ಸಾಗಣೆಗೆ 21.35 ಕೋಟಿ ರೂ. ಖರ್ಚು ಮಾಡಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಅಲ್ಲದೆ, ವಿತರಣೆಯ ನಂತರ ಹಣವನ್ನು ಪಾವತಿಸಲಾಗುವುದು ಎಂದು ಸರ್ಕಾರವು ಪೂರ್ವಾಪೇಕ್ಷಿತಗಳನ್ನು ವಿಧಿಸಿದ್ದರೂ ಚೀನಾದ ಸಂಸ್ಥೆಗಳಿಗೆ ಶೇ. 100 ರಷ್ಟು ಮುಂಗಡ ಪಾವತಿಯನ್ನು ನೀಡಲು ಸಿಎಂ ಅನುಮೋದಿಸಿದ್ದಾರೆ. ಅತ್ಯಂತ ನೋವಿನ ಸಂಗತಿ ಏನೆಂದರೆ ಈ ಭ್ರಷ್ಟಾಚಾರದ ವ್ಯವಹಾರವೂ ನಮ್ಮಲ್ಲೇ ಸ್ಥಳೀಯವಾಗಿ ಲಭ್ಯವಿದ್ದಾಗ ಚೀನಾದ ಕಂಪನಿಗಳಿಗೆ ಏಕೆ ಆದೇಶಿಸಲಾಯಿತು ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್‌ಎಂಎಸ್‌ಸಿಎಲ್) ಸಲ್ಲಿಸಿದ ದಾಖಲೆಗಳ ಪ್ರಕಾರ, ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆ ಪ್ರತಿ ಕಿಟ್‌ಗೆ 333 ರೂ. ರಿಂದ 1,445 ರೂ. ಬೆಲೆಯೊಂದಿಗೆ 18,07,528 ಕಿಟ್‌ಗಳನ್ನು ಖರೀದಿಸಿದೆ. ಸಾಂಕ್ರಾಮಿಕದ ಸಮಯದಲ್ಲಿ ಬಿಎಸ್‌ವೈ ಸರ್ಕಾರವು ಸ್ಥಳೀಯ ಮಾರಾಟಗಾರರನ್ನು ಸುಲಿಗೆ ಮಾಡಿದೆ. ಕೆಎಸ್‌ಎಂಎಸ್‌ಸಿಎಲ್ 14.3.2020 ರಂದು ಪ್ಲಾಸ್ಟಿ ಸರ್ಜ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನಿಂದ ಪ್ರತಿ ಕಿಟ್‌ಗೆ 333.40 ರೂ. ನಂತೆ 1,50,000 ಕಿಟ್‌ಗಳನ್ನು ಖರೀದಿಸಿತು. ಆದರೆ 27.3.2020 ರಂದು ಹೊರಡಿಸಿದ ತಿದ್ದುಪಡಿ ಆದೇಶದಲ್ಲಿ ಪ್ರತಿ ಕಿಟ್‌ನ ಬೆಲೆ 725 ರೂ. ಎಂದು ಅನುಮೋದಿಸಿ ಇದಕ್ಕೆ ಯಾವುದೇ ಸಕಾರಣವಿಲ್ಲ ಎಂದು ತಿಳಿಸಲಾಗಿದೆ.

ಹಾಗೆಯೇ ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆ 24.3.2020 ರಂದು, ಇಂಡಸ್ ಬಯೋ ಸೊಲ್ಯೂಷನ್ಸ್‌ನಿಂದ ಪ್ರತಿ ಕಿಟ್‌ಗೆ 656.25 ರೂ. ನಂತೆ 2,000 ಕಿಟ್‌ಗಳನ್ನು ಖರೀದಿಸುತ್ತದೆ. ಅದೇ ರೀತಿ 23.4.2020 ರಂದು ಸರ್ಕಾರವು ಇತರ 8 ಸ್ಥಳೀಯ ಪೂರೈಕೆದಾರರಿಂದ ಪ್ರತಿ ಕಿಟ್‌ಗೆ 1,444.80 ನಂತೆ ಕಿಟ್‌ಗಳನ್ನು ಖರೀದಿಸಲಾಗಿದೆ ಎಂದು ದಾಖಲೆಗಳು ತೋರಿಸುತ್ತವೆ.

ಗುಣಮಟ್ಟದ ಪಿಪಿಇ ಕಿಟ್‌ಗಳು 333 ರೂ.ಗಳಿಗೆ ಮಾತುಕತೆಯಂತೆ ಲಭ್ಯವಿದ್ದಾಗ, ಅವುಗಳ ಬೆಲೆ 1,444 ರೂ. ಗೆ ಹೇಗೆ ಹೆಚ್ಚಿಸಲ್ಪಟ್ಟವು? ಸ್ಥಳೀಯ ಪೂರೈಕೆದಾರರು ಲಭ್ಯವಿರುವಾಗ, ಬಿಜೆಪಿ ಸರ್ಕಾರವು 7 ರಿಂದ 8 ಪಟ್ಟು ಬೆಲೆಗೆ ಖರೀದಿಸಲು ಚೀನಾದ ಸಂಸ್ಥೆಗಳ ಬಳಿ ಏಕೆ ಹೋಯಿತು? ಯಾರ ಲಾಭಕ್ಕಾಗಿ ಸರ್ಕಾರ ಈ ಸಂಸ್ಥೆಗಳಿಗೆ ಒತ್ತಾಯಿಸಿತು? ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.  

ಇನ್ನೂ ಪ್ರಮುಖ ವಿಚಾರವೆಂದರೆ ಡಿಹೆಚ್‌ಬಿ ಗ್ಲೋಬಲ್ ಸಂಸ್ಥೆ ಈಗ ನಿಷ್ಕ್ರಿಯ ಕಂಪನಿಯಾಗಿದೆ. ಇದನ್ನು 2019 ರಲ್ಲಿ ಸ್ಥಾಪಿಸಲಾಯಿತು. ಒಂದು ವರ್ಷದೊಳಗೆ ಅವರು ಈ ಒಪ್ಪಂದವನ್ನು ಪಡೆದುಕೊಂಡು ಮುಚ್ಚುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.

ಸಾವಿರಾರು ಮಂದಿಯ ಸಾವಿಗೆ ಕಾರಣವಾದ ಬಿಜೆಪಿ ಸರ್ಕಾರ

ಸಾಂಕ್ರಾಮಿಕ ಸಮಯದಲ್ಲಿಯೂ ಬಿಜೆಪಿಯ ಭ್ರಷ್ಟಚಾರಕ್ಕಾಗಿ ವೈದ್ಯಕೀಯ ಉಪಕರಣಗಳನ್ನು ಖರೀದಿಸಿದೆ. ಇವುಗಳ ಬಳಕೆಯಿಂದಾಗಿ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದಾರೆ. ಲಾಭಕೋರತನದ ಈ ಅಮಾನವೀಯ ಕೃತ್ಯವೇ ಕೋವಿಡ್‌ಗೆ ಬಲಿಯಾದವರ ನೈಜ ಸಂಖ್ಯೆಯ ಬಗ್ಗೆ ಬಿಜೆಪಿ ಸರ್ಕಾರ ಸುಳ್ಳು ಹೇಳಲು ಕಾರಣವಾಗಿದೆ.

ಅರ್ಥಶಾಸ್ತ್ರ ಮತ್ತು ಅಂಕಿಅಂಶಗಳ ನಿರ್ದೇಶನಾಲಯವು 2020ರ ಜನವರಿಯಿಂದ ಜುಲೈ ವರೆಗೆ 2,69,029 ಮತ್ತು 2021ರ ಜನವರಿಯಿಂದ ಜುಲೈ ವರೆಗೆ 4,26,943 ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ ಎಂದು ಅಂಕಿಅಂಶಗಳಲ್ಲಿ ತೋರಿಸಿದೆ. ಕರ್ನಾಟಕದಲ್ಲಿ 1,57,914 ಹೆಚ್ಚು ಸಾವುಗಳಾಗಿದೆ ಎಂದು ತಿಳಿಸಲಾಗಿದೆ. ಆದರೆ , ಬಿಜೆಪಿ ಸರ್ಕಾರವು ಕೋವಿಡ್ ಸಾವುಗಳು ಕೇವಲ 37,206 ಎಂದು ವರದಿ ಮಾಡಿದೆ.

ಸಮಿತಿಯ ಪ್ರಕಾರ ಬಿಎಸ್‌ವೈ ಮತ್ತು ತಂಡವು ಸುಮಾರು 1,20,708 ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಪ್ರಿಯಾಂಕ್‌ ಖರ್ಗೆ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಇದು ಕೇವಲ ಭ್ರಷ್ಟಾಚಾರದ ಪ್ರಕರಣವಲ್ಲ. ಆದರೆ ಲಾಭಕ್ಕಾಗಿ ಸಾಮೂಹಿಕ ಕೊಲೆಗಳ ಪ್ರಕರಣವಾಗಿದೆ. ಬಿಜೆಪಿ ಸರ್ಕಾರವು ಸಾಂಕ್ರಾಮಿಕ ರೋಗಕ್ಕಾಗಿ 18,000 ಕೋಟಿ ಖರ್ಚು ಮಾಡಿದೆ ಮತ್ತು ಖರೀದಿಗಾಗಿಯೇ 80 ಕೋಟಿ ರೂ. ವೆಚ್ಚ ಮಾಡಿದೆ. ಇದು ಅವರ ಭ್ರಷ್ಟಾಚಾರದ ಮಂಜುಗಡ್ಡೆಯ ತುದಿ ಮಾತ್ರ. ಇನ್ನಷ್ಟು ಅಸ್ಥಿಪಂಜರಗಳು ಉರುಳುತ್ತವೆ. ಕಾಂಗ್ರೆಸ್ ಸರ್ಕಾರವು ಬಿಜೆಪಿಯ ದುರಾಸೆ ಮತ್ತು ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಕೋವಿಡ್ ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸುತ್ತದೆ ಎಂದು ಪ್ರಿಯಾಂಕ್‌ ಖರ್ಗೆ ಭರವಸೆ ನೀಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

Download Eedina App Android / iOS

X