ಬೀದರ್‌ | ಸರಳ ಸಾಮೂಹಿಕ ವಿವಾಹ : ದಾಂಪತ್ಯಕ್ಕೆ ಕಾಲಿಟ್ಟ 138 ಜೋಡಿಗಳು

Date:

Advertisements

ಬೀದರ್‌ ತಾಲೂಕಿನ ಆಣದೂರ ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ 138 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬುದ್ಧ ಬೆಳಕು ಟ್ರಸ್ಟ್, ಸಂವಿಧಾನ ಜಾಗೃತಿ ವೇದಿಕೆ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಯುವ ಸಂಘದ ಸಂಯುಕ್ತಾಶ್ರಯದಲ್ಲಿ 75ನೇ ಸಂವಿಧಾನ ಅಮೃತ ಮಹೋತ್ಸವ, ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಸರಳ ಸಾಮೂಹಿಕ ವಿವಾಹ ಮತ್ತು ಜಿಲ್ಲಾ ಮಟ್ಟದ ಜಾನಪದ ಸಂಭ್ರಮ ಆಯೋಜನೆ ಮಾಡಲಾಗಿತ್ತು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಂವಿಧಾನ ಪೀಠಿಕೆ ಓದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಇತ್ತೀಚೆಗೆ ಆಡಂಬರದ ಮದುವೆಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿಷ್ಠೆಗಾಗಿ ಒಬ್ಬರಿಗಿಂತ ಮತ್ತೊಬ್ಬರು ಅದ್ಧೂರಿಯಾಗಿ ಮದುವೆ ಆಯೋಜಿಸಲು ದುಂದು ವೆಚ್ಚ ಮಾಡುವ ಪ್ರವೃತಿ ಬೆಳೆಯುತ್ತಿದೆ. ಆದರೆ ಇಂದಿನ ಸರಳ ಸಾಮೂಹಿಕ ವಿವಾಹ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆʼ ಎಂದರು.

Advertisements

ʼಸಮಾಜದಲ್ಲಿ ಪ್ರೀತಿ, ಭಾತೃತ್ವ , ಸಾಮರಸ್ಯ ಹಾಗೂ ಸಮಾನತೆ ಬಿತ್ತಿದ ಶ್ರೇಯಸ್ಸು ಮಹಾತ್ಮ ಗೌತಮ ಬುದ್ಧನಿಗೆ ಸಲ್ಲಬೇಕು. ಬುದ್ಧನ ಮಾರ್ಗ, ಬಸವಣ್ಣನವರ ಸನ್ಮಾರ್ಗ, ಬಾಬಾ ಸಾಹೇಬ್ ಅಂಬೇಡ್ಕರವರ ರಾಜ ಮಾರ್ಗ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜೀವನ ಮಾರ್ಗ ನಮಗೆ ಆದರ್ಶವಾಗಬೇಕು. ದಾಂಪತ್ಯಕ್ಕೆ ಕಾಲಿಟ್ಟ ಎಲ್ಲ ಜೋಡಿಗಳು ಪರಸ್ಪರ ಅರ್ಥೈಸಿಕೊಂಡು ಕೂಡಿ ಬಾಳಿದರೆ ಬದುಕು ಸುಖಮಯವಾಗುತ್ತದೆʼ ಎಂದು ನುಡಿದರು.

ಸಮಾರಂಭದ ಸಾನಿಧ್ಯ ವಹಿಸಿದ ಭಂತೆ ಧಮ್ಮಾನಂದ ಮಹಾಥೆರೋ ಅವರು ಮದುವೆ ವಿಧಿ, ವಿಧಾನಗಳು ನಡೆಸಿಕೊಟ್ಟರು. ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

WhatsApp Image 2024 08 05 at 8.38.57 AM

ಇದೆ ಸಂದರ್ಭದಲ್ಲಿನಡೆದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಾದ ಶಂಕರ ಚೊಂಡಿ, ದೇವಿದಾಸ ಚಿಮಕೋಡೆ ಹಾಗೂ ಸಂಗಡಿಗರು ಜಾನಪದ ಗೀತೆ ಹಾಡಿ ಸಭಿಕರನ್ನು ರಂಜಿಸಿದರು.

ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ, ಯುವ ಉದ್ಯಮಿ ದೀಪಕ ದಿಲ್ಲೆ, ನಗರ ಸಭೆ ನಾಮನಿರ್ದೇಶನ ಸದಸ್ಯ ಸೂರ್ಯಕಾಂತ ಸಾಧೂರೆ ಅವರಿಗೆ ಸನ್ಮಾನಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕಾರಣದಲ್ಲಿ ಭ್ರಷ್ಟಾಚಾರ ಎಂಬುದು ಗಂಭೀರ ವಿಷಯವೇ?

ಜ್ಞಾನ ಉದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಕಾಶಿನಾಥ ಚೆಲ್ವಾ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ, ಕೊಳಾರ ಗ್ರಾಮ ಪಂಚಾಯತ ಸದಸ್ಯ ವಿಜಯಕುಮಾರ ಭಾವಿಕಟ್ಟಿ, ಸಂತೋಷ ಬಕ್ಕಚೋಡಿ, ಬೌದ್ಧ ಆಚಾರ್ಯ ಶಂಭುಲಿಂಗ ಬಾನೆ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಬುದ್ಧ ಬೆಳಕು ಟ್ರಸ್ಟ್ ಕಾರ್ಯದರ್ಶಿ ಕಲ್ಪನಾ ಗೋರನಾಳಕರ್ ಹಾಗೂ ಶರಣು ಫುಲೆ, ರಮೇಶ ಮಾಲೆ, ನೀಲಕಂಠ ಕಾಂಬಳೆ, ಗೌತಮ ಮುತ್ತಂಗಿಕರ್, ಕೃಷ್ಣ ಭೂತಾಳೆ, ಮಹಾಲಿಂಗ ಸಕ್ಪಾಲ್, ಅವಿನಾಶ್ ರಂಜೋಳ, ಅರುಣಕುಮಾರ, ಪೀಟರ್ ಇಸ್ಲಾಂಪೂರ ಉಪಸ್ಥಿತರಿದ್ದರು. ಅಮರ ಅಲ್ಲಾಪೂರ ಸ್ವಾಗತಿಸಿದರು. ಸಂವಿಧಾನ ಜಾಗೃತಿ ವೇದಿಕೆ ಸದಸ್ಯ ಪ್ರಕಾಶ ರಾವಣ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X