ಹೆಚ್ಚುತ್ತಲೇ ಇದೆ ಮಲೆನಾಡಿನ ಕೃಷಿ ಬಿಕ್ಕಟ್ಟು ಹಾಗೂ ಕಾರ್ಮಿಕರ ಬವಣೆ

Date:

Advertisements

ಹಿಂದೆ ಮಲೆನಾಡೆಂದರೆ ಸಮೃದ್ಧತೆಗೆ ಹೆಸರಾಗಿತ್ತು. ಆದರೆ, ಇಂದು ಆತಂಕಗಳ ಬೀಡಾಗಿದೆ. ಇದಕ್ಕೆ ಕಾರಣಗಳು ಹಲವಾರಿವೆ. ಅವುಗಳಲ್ಲಿ ಮುಖ್ಯವಾಗಿ ಆರ್ಥಿಕತೆಗೆ ಬೆನ್ನೆಲುಬಾಗಿದ್ದ ಕೃಷಿ ಇಂದು ತೀವ್ರ ಸ್ವರೂಪದ ಬಿಕ್ಕಟ್ಟಿಗೆ ಜಾರಿಕೊಳ್ಳುತ್ತಿರುವುದು ತುಂಬಾ ಆತಂಕ ಹುಟ್ಟಿಸುತ್ತದೆ. ಕೃಷಿಯನ್ನು ಅವಲಂಬಿಸಿರುವಂತಹ ಕಾರ್ಮಿಕರ ಸ್ಥಿತಿ ತೀರಾ ಸೋಚನೀಯವಾಗುತ್ತಿದೆ. ರೈತರ ಮನಸುಗಳಲ್ಲಿ ಮಲೆನಾಡಿನ ಕೃಷಿಗೆ ಇನ್ನು ಮುಂದೆ ಭವಿಷ್ಯ ಇಲ್ಲವೇನೋ ಎಂಬ ಆತಂಕ ಮನೆ ಮಾಡಿದೆ.

ಮಲೆನಾಡಿನ ಕಾರ್ಮಿಕರ ಬವಣೆಗೂ ಮಲೆನಾಡಿನ ಕೃಷಿ ಬಿಕ್ಕಟ್ಟಿಗೂ ಅವಿನಾಭಾವ ಸಂಬಂಧವಿದೆ. ಮಲೆನಾಡಿನ ಕೃಷಿ ಬಿಕ್ಕಟ್ಟಿನಲ್ಲಿದೆ ಎಂದರೆ, ಕಾರ್ಮಿಕರ ಸ್ಥಿತಿ ಕೂಡ ಹದಗೆಟ್ಟಿದೆ ಅಂತ ಅರ್ಥ. ಇತ್ತೀಚಿನ ದಿನಗಳಲ್ಲಿ ಈ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುತ್ತಿದೆ. ಇದರ ಪರಿಣಾಮ ರೈತರ ಮಕ್ಕಳು, ಕೂಲಿ ಕಾರ್ಮಿಕರು ಉದ್ಯೋಗ ಹರಸಿ ಪೇಟೆ-ಪಟ್ಟಣಗಳಿಗೆ ವಲಸೆ ಹೋಗುವ ದುಸ್ಥಿತಿ ಬಂದಿದೆ. ಗ್ರಾಮೀಣ ಜನರ ಈ ಬಿಕ್ಕಟ್ಟಿಗೆ ಸರ್ಕಾರಗಳೇ ನೇರ ಹೊಣೆ. ಸರ್ಕಾರಗಳು ತೆಗೆದುಕೊಂಡ ರೈತ ವಿರೋಧಿ, ಜನ ವಿರೋಧಿ ನೀತಿಗಳು ಹಾಗೂ ನವಉದಾರವಾದಿ ನೀತಿಗಳ ಪರಿಣಾಮ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಈ ನೀತಿಗಳಿಂದ ಕೃಷಿ ಕ್ಷೇತ್ರ ಕಾರ್ಪೊರೇಟ್ ಕುಳಗಳ ಕಪಿಮುಷ್ಠಿಯಲ್ಲಿ ಬಂದಿಯಾಗಿದೆ.

ಒಂದು ಕಡೆ ವಿದೇಶಿ ಕಂಪನಿಗಳ ಕೈಯಲ್ಲಿರುವ ಕೀಟನಾಶಕ, ರಾಸಾಯನಿಕ ಗೊಬ್ಬರಗಳ ಬೆಲೆ ವಿಪರೀತ ಹೆಚ್ಚಾಗಿದೆ. ಇನ್ನೊಂದು ಕಡೆ ಉತ್ಪನ್ನಗಳ ದರಗಳು ಸ್ಥಿರವಾಗಿಲ್ಲದೆ ಕುಸಿತ ಕಂಡಿದೆ. ಇದರ ನಡುವೆ ಮತ್ತೊಂದು ವಿಪರ್ಯಾಸವೆಂದರೆ, ರೈತರ ಕೃಷಿ ಭೂಮಿಯನ್ನು ಅವರ ಕೈಯಿಂದ ಕಸಿದುಕೊಂಡು ಬಂಡವಾಳಿಗರ ಕೈಗೆ ನೀಡುವ ಹುನ್ನಾರ ಕೂಡ ತೆರೆ ಮರೆಯಲ್ಲಿ ನಡೆಯುತ್ತಿದೆ. ಇದೆಲ್ಲದರ ನಡುವೆ ಹವಾಮಾನ ವೈಪರಿತ್ಯ ಕೂಡ ಮಲೆನಾಡನ್ನು ದೊಡ್ಡ ಮಟ್ಟದಲ್ಲಿ ಬಾಧಿಸುತ್ತಿದೆ. ಅಷ್ಟೇ ಅಲ್ಲದೆ, ಸಣ್ಣ ಹಾಗೂ ಮಧ್ಯಮ ರೈತರಿಗೆ ಕಾರ್ಮಿಕರ ಸಮಸ್ಯೆ ಕೂಡ ಗಂಭೀರವಾಗಿ ಕಾಡುತ್ತಿದೆ. ಈ ಹಿಂದೆ ಕಾಡುತ್ತಿದ್ದ ಹಳದಿ ರೋಗ, ಕೊಳೆ ರೋಗದ ಜೊತೆಗೆ ಎಲೆ ಚುಕ್ಕಿ ರೋಗ ರೈತರಿಗೆ ಕೃಷಿ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಇದೆಲ್ಲದರಿಂದ ಮಲೆನಾಡಿನ ರೈತ ಹೈರಾಣಾಗಿ ತುಂಬಾ ಝರ್ಜರಿತನಾಗುತಿದ್ದಾನೆ.

Advertisements

ಇದೆಲ್ಲದಕ್ಕೆ ಒಂದು ಶಾಶ್ವತ ಪರಿಹಾರ ಹುಡುಕಿ ರೈತರ ರಕ್ಷಣೆ ಮಾಡಬೇಕಾದ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ. ಅಷ್ಟೇ ಅಲ್ಲದೆ ಮಲೆನಾಡಿನ ಜನರ ಬದುಕನ್ನು ಮೂರಾಬಟ್ಟೆ ಮಾಡುವ ದಿಸೆಯಲ್ಲಿ ಸೆಕ್ಷನ್-4, ಸೆಕ್ಷನ್-17ರಂತಹ ಜನ ವಿರೋಧಿ ಅರಣ್ಯ ಕಾಯ್ದೆಗಳನ್ನು ಜನರ ಮೇಲೆ ಏರುತಿದ್ದಾರೆಂದು ಕರ್ನಾಟಕ ಜನಶಕ್ತಿಯ ಕೆ.ಎಲ್ ಅಶೋಕ್ ಆರೋಪಿಸಿದ್ದಾರೆ.

ಮಲೆನಾಡಿನ ಕೃಷಿ ಬಿಕ್ಕಟ್ಟಿನ ನೇರ ಪರಿಣಾಮ ಇಲ್ಲಿನ ಕಾರ್ಮಿಕರ ಮೇಲೆ ಬೀಳುತ್ತಿದೆ. ಇಲ್ಲಿನ ಕಾರ್ಮಿಕರ ಪರಿಸ್ಥಿತಿ ಹೇಗಿದೆ ಎಂದರೆ, ಯಾವುದು ನಿಶ್ಚಿತವಾಗಿಲ್ಲ. ಸರಿಯಾದ ಕೂಲಿ ನಿರ್ಧಾರ ಇಲ್ಲ. ಸಮಯ ಖಾಯಂ ಕೆಲಸ ಇತ್ಯಾದಿ ಯಾವುದು ಆಗ್ತಾ ಇಲ್ಲ. ಕೆಲಸಕ್ಕೆ ಯಾವುದೇ ಭದ್ರತೆ ಇರುವುದಿಲ್ಲ. ತೋಟದ ಮಾಲೀಕರು ನಿರ್ವಹಣೆ ಕಷ್ಟ ಅಂತ ಹೇಳಿಕೊಂಡು ಬೇರೆ ಬೇರೆ ರಾಜ್ಯದ ಕೆಲಸಗಾರರನ್ನು ತೋಟಗಳಿಗೆ ಕರೆಸಿಕೊಳ್ಳುತ್ತಿದ್ದಾರೆಂದು ಮಲೆನಾಡಿನ ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ.

WhatsApp Image 2023 10 30 at 9.07.07 AM

ಈದಿನ.ಕಾಮ್ ಜೊತೆ ಮಾತನಾಡಿದ ಕೃಷಿ ಕಾರ್ಮಿಕ ಮಂಜುನಾಥ್, “ಕೂಲಿ ಕೆಲಸ ಮಾಡುವ ಜನರು ಬಹಳ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಆ ವೇತನ ಕಾರ್ಮಿಕರ ಜೀವನ ನಿರ್ವಹಣೆಗೆ ಸಾಲದಾಗುತ್ತಿದೆ. ಇಲ್ಲಿನ ಕೃಷಿ ಕಾರ್ಮಿಕರು ಕಷ್ಟಪಟ್ಟು ದುಡಿದು ಸಂಘ-ಸಂಸ್ಥೆಗಳಲ್ಲಿ ಸಾಲ ಮಾಡಿ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರಗಳು ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಕಾಗುತ್ತಿಲ್ಲ. ಮಕ್ಕಳಿಗೆ ಮತ್ತಮ ಶಿಕ್ಷಣ ಕೊಡಿಸುವುದೂ ಸವಾಲಾಗಿದೆ” ಎಂದು ಹೇಳಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಮಳೆಯೂ ಕೈಕೊಡುತ್ತಿದ್ದು, ಕೃಷಿ ಕೆಲಸಗಳು ಸಿಗುತ್ತಿಲ್ಲ. ಇದೆಲ್ಲದಕ್ಕೂ ಸರಿಯಾದ ಪರಿಹಾರ ಹುಡುಕಬೇಕಾಗಿದೆ. ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಹುಡುಕುವುದರೊಂದಿಗೆ ಕಾರ್ಮಿಕರ ಮಕ್ಕಳಿಗೆ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗಬೇಕು. ಸರ್ಕಾರಗಳು ಭೂರಹಿತರಿಗೆ ಭೂಮಿ ನೀಡಬೇಕು. ಭೂಮಿ ವಸತಿ ಸೇರಿದಂತೆ ಅಭಿವೃದ್ಧಿ ಪರ ಜನಸ್ನೇಹಿ ಕೆಲಸಗಳಿಗೆ ಆದ್ಯತೆ ನೀಡಬೇಕಿದೆ” ಎಂದು ಅವರು ಒತ್ತಾಯಿಸಿದ್ದಾರೆ.

“ಮಲೆನಾಡಿನ ಕೃಷಿ ಬಿಕ್ಕಟ್ಟು ಮತ್ತು ಕಾರ್ಮಿಕರ ಬವಣೆಯನ್ನು ಮನಗಂಡು ಇದರಿಂದ ಹೊರಬರುವ ಪ್ರಯತ್ನವಾಗಿ ಎಲ್ಲ ಜಾತಿ ಧರ್ಮ ಸಮುದಾಯದವರು ಪಕ್ಷ ಬೇದ ಮರೆತು ಇದಕ್ಕೊಂದು ಸರಿಯಾದ ಶಾಶ್ವತವೆನಿಸುವ ಒಂದು ಗುಣಾತ್ಮಕವಾದ ಪರಿಹಾರಗಳನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ನಡೆಯಬೇಕು” ಎಂದು ಪರಿಸರ ಹೋರಾಟಗಾರ ಕಲ್ಕುಲಿ ವಿಠಲ್ ಹೆಗ್ಡೆ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X