ಜಿಲ್ಲೆಯಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ದಿನಸಿ ಅಂಗಡಿ ಕಿರಾಣಿ ಮತ್ತು ಪಾನ್ ಶಾಪ್ ಡಾಬಾಗಳಲ್ಲಿ ವಿಪರೀತವಾಗಿ ಮಧ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.
ಎಲ್ಲೆಂದರಲ್ಲಿ ಮದ್ಯ ಸಿಗುತ್ತಿರುವ ಕಾರಣ ಜಿಲ್ಲೆಯ ಬಹುತೇಕ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳು ಮದ್ಯ ವ್ಯಸನಿಗಳಾಗುತ್ತಿರುವುದು ಖೇದಕರ ಸಂಗತಿ. ಅನುಮತಿ ಪಡೆದಿರುವ ಮತ್ತು ಪಡೆಯದಿರುವ ಬಹುತೇಕ ಮದ್ಯದ ಅಂಗಡಿಗಳು ಬೆಳಗ್ಗೆ 6 ಗಂಟೆಗೆ ಆರಂಭವಾಗುತ್ತವೆ. ಇದು ಶಾಲಾ ಮಕ್ಕಳ ಮೇಲೆ ತೀವ್ರತರಹದ ಪರಿಣಾಮವನ್ನು ಬೀರುತ್ತಿದೆ.
ಬೆಳಗ್ಗೆ ಮಕ್ಕಳು ಶಾಲೆ ಟ್ಯೂಷನ್ ಸೇರಿದಂತೆ ವಿವಿಧ ರೀತಿಯ ಕಲಿಕಾ ಅಭ್ಯಾಸಗಳಿಗಾಗಿ ಹೊರಡುತ್ತಿರುವಾಗ ಮಧ್ಯದ ಅಂಗಡಿಗಳು ತೆರೆದಿರುವುದು ಮಧ್ಯ ಕುಡಿದು ಗಾಳಿಯಲ್ಲಿ ತೋರಾಡುತ್ತಿರುವ ದೃಶ್ಯಗಳು, ಜಗಳಾಡುವ ದೃಶ್ಯಗಳು ಮಕ್ಕಳ ಮನಸ್ಸಿನ ಮೇಲೆ ವಿಪರೀತವಾಗಿ ಪರಿಣಾಮವನ್ನು ಬೀರುತ್ತಿವೆ. ಇದು ಅವರ ಕಲಿಕಾ ಮೌಲ್ಯಗಳ ಮೇಲೆ ವ್ಯತರಿಕ್ತವಾದ ಪರಿಣಾಮವನ್ನು ಬೀರುತ್ತಿದೆ. ಆದ್ದರಿಂದಾಗಿ ಅನುಮತಿ ಪಡೆದಿರುವ ಮತ್ತು ಅನುಮತಿ ಪಡೆಯದೇ ಇರುವ ಜಿಲ್ಲೆಯ ಎಲ್ಲಾ ಮದ್ಯದ ಅಂಗಡಿಗಳಿಂದ ಅಬಕಾರಿ ಇಲಾಖೆಯು ಪ್ರತಿ ತಿಂಗಳು ಹಪ್ತಾ ವಸೂಲಿ ಮಾಡುತ್ತಿರುವ ವಿಷಯ ಹೊಸ ಸಂಗತಿಯಾಗಿ ಏನು ಉಳದಿಲ್ಲ. ಅಬಕಾರಿ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕು ಮತ್ತು ಲಂಚ ಬಾಕ ಪ್ರವೃತ್ತಿಯಿಂದ ಇದು ನಿರಂತರವಾಗಿ ನಡೆಯುತ್ತಿದೆ.
ಪ್ರತಿ ಅಂಗಡಿಗಳಿಂದ ತಿಂಗಳಿಗೆ 25 ರಿಂದ 30 ಸಾವಿರ ರೂಪಾಯಿ ಹಪ್ತಾ ವಸೂಲಿ ಮಾಡುತ್ತಾರೆ ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ತೀವ್ರ ತರಹದ ಚರ್ಚೆಯಲ್ಲಿರುವ ಸಂಗತಿಯಾಗಿದೆ. ಆದ್ದರಿಂದಾಗಿ, ಅಬಕಾರಿ ಇಲಾಖೆಯ ಅಧಿಕಾರಿಗಳ ಹಪ್ತಾ ವಸೂಲಿ ದಂಧೆಯನ್ನು ಮೋಟಕುಗೊಳಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಮಳಿಗೆಗಳು ಮತ್ತು ಡಾಬಾಗಳನ್ನು ಬಂದು ಮಾಡಿ. ಜಿಲ್ಲೆಯ ಮಕ್ಕಳ ಭವಿಷ್ಯದ ಶೈಕ್ಷಣಿಕ ಬದುಕಿನ ಉಳಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಬರೆದು ಮನವಿ ಮಾಡಿದ್ದಾರೆ.
ಈ ವೇಳೆ ರಾಜ್ಯ ಸಂಘಟನೆ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ರಾಕೇಶ್ ಇಂಗಳಗಿ, ಹಮೀದ್ ಇನಾಮ್ದಾರ್, ಪ್ರವೀಣ್ ಕನಸೆ, ವಿಕ್ರಮ್ ವಾಗ್ಮೊರೆ ಹಾಗೂ ಶ್ರೀಶೈಲ ಮಠ ಮೈಬೂಬ್ ತಾಂಬೋಳಿ, ರಾಘವೇಂದ್ರ ಚಲವಾದಿ, ಸಾದಿಕ್ ಪಟವೆಗಾರ ಉಪಸ್ಥಿತರಿದ್ದರು.