ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಶಹಪುರ್ ಘಟಕದ ಸಾರಿಗೆ ಬಸ್ ಮಹಿಳೆಯೋರ್ವರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ರಾಯಭಾಗ ತಾಲೂಕಿನ ಖೇಮದಾಪುರ ಗ್ರಾಮದ ನಾಗವ್ವ ಭೀಮಪ್ಪ ಬಾನಿ(65) ಎಂಬ ಮಹಿಳೆ ಘಟನೆಯಲ್ಲಿ ಸಾವನಪ್ಪಿರುವ ಮಹಿಳೆ ಎಂದು ಗುರುತಿಸಲಾಗಿದೆ.
ಅಥಣಿ ಸಾರಿಗೆ ಘಟಕದ ಬಸ್ ನಿಲ್ದಾಣದಲ್ಲಿನ ಅವೈಜ್ಞಾನಿಕ ಶೌಚಾಲಯದಿಂದ ಅನೇಕ ಪ್ರಯಾಣಿಕರಿಗೆ ಅಪಾಯದ ಸ್ಥಿತಿ ಇದ್ದು, ವೃದ್ಧ ಮಹಿಳೆ ಹೋಗುತ್ತಿದ್ದ ಸಂದರ್ಭದಲ್ಲಿ ಶಹಪುರ ಘಟಕದ ಸಾರಿಗೆ ಬಸ್ ವೇಗವಾಗಿ ಯಮ ರೂಪದಲ್ಲಿ ಬಂದು ಮಹಿಳೆಗೆ ಗುದ್ದಿದ ಪರಿಣಾಮ ಸ್ಥಳದಲ್ಲಿಯೆ ಮಹಿಳೆ ಸಾವನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ವಿಜಯನಗರ | ಶ್ರದ್ಧೆಯಿಂದ ಓದಿದರೆ ಜೀವನದಲ್ಲಿ ಸಾಧನೆ ಸಾಧ್ಯ: ಶಾಸಕ ಕೃಷ್ಣನಾಯ್ಕ್
ಅಥಣಿ ಸಾರಿಗೆ ಬಸ್ ನಿಲ್ದಾಣದಲ್ಲಿ ಸುರಕ್ಷತಾ ಕ್ರಮಗಳು ಇಲ್ಲದೆ ಇರುವುದು ಮತ್ತು ಸಾರಿಗೆ ಬಸ್ ಚಾಲಕ ನಿರ್ಲಕ್ಷ್ಯ ವಹಿಸಿ ವೇಗವಾಗಿ ಬಸ್ ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
