ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಶಿವಲಿಂಗ ಹೇಡೆ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ.
ಡಾ.ಜಯಶ್ರೀ ದಂಡೆ ಅವರ ಮಾರ್ಗದರ್ಶನದಲ್ಲಿ ’12ನೇ ಶತಮಾನದ ಶರಣರು : ಬೀದರ ಜಿಲ್ಲೆಯ ಮೌಖಿಕ ಸಾಹಿತ್ಯ’ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿಗೆ ಮಾನ್ಯ ಮಾಡಿದೆ.
ಶಿಕ್ಷಕ ಶಿವಲಿಂಗ ಹೇಡೆ ಅವರು ಮೂಲತಃ ಔರಾದ್ ತಾಲ್ಲೂಕಿನ ಸಂತಪೂರ ಗ್ರಾಮದವರು. ವೃತ್ತಿಯಿಂದ ಕನ್ನಡ ಭಾಷಾ ಶಿಕ್ಷಕರಾಗಿರುವ ಹೇಡೆ ಅವರು ಸಾಹಿತ್ಯ ಓದು-ಬರಹ ಅವರ ಹವ್ಯಾಸ. ʼಬೃಂದಾವನʼ, ʼಬಹುಮುಖಿ ಸಾಹಿತ್ಯʼ ಅವರ ಪ್ರಕಟಿತ ಕೃತಿಗಳಾಗಿವೆ.
ಇದನ್ನೂ ಓದಿ : ಬೀದರ್ | ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯಹಸ್ತ ಕಾರ್ಯ ಶ್ಲಾಘನೀಯ : ಭವಾನಿಸಿಂಗ್ ಠಾಕೂರ್