ಬಾಗಲಕೋಟೆ | ಘಟಪ್ರಭಾ ನದಿ ನೀರಿನ ಹರಿವು ಇಳಿದಿದ್ದರೂ ಮುಂದುವರೆದ ಪ್ರವಾಹ ಸ್ಥಿತಿ

Date:

Advertisements

ಘಟಪ್ರಭಾ ನದಿ ನೀರಿನ ಹರಿವು ಇಳಿಕೆ ಕಂಡಿದ್ದರೂ ತೀರದ ಕೆಲ ಗ್ರಾಮ ಹಾಗೂ ಬಾಗಲಕೋಟೆ ತಾಲೂಕಿನ ಕೆಲ ಊರುಗಳಲ್ಲಿ ಪ್ರವಾಹ ಪರಸ್ಥಿತಿ ಮುಂದುವರಿದಿದೆ. ಕೃಷ್ಣೆಯ ಹಿನ್ನೀರಿನ ಒತ್ತಡವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಕೃಷ್ಣಾ ನದಿಗೆ 2.60 ಲಕ್ಷಕ್ಕಿಂತ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಬೀಳಗಿ ತಾಲೂಕಿನ ಅನಗವಾಡಿ, ಕಾತರಾಕಿ ಬಳಿ ಕೃಷ್ಣೆಯ ಹಿನ್ನೀರು ಒತ್ತುತ್ತಿರುವುದರಿಂದ ಘಟಪ್ರಭಾ ನದಿ ನೀರು ವೇಗವಾಗಿ ಮುಂದೆ ಸಾಗದೆ ಪ್ರವಾಹ ಸ್ಥಿತಿ ಯಥಾಸ್ಥಿತಿ ಮುಂದುವರಿಯಲು ಕಾರಣವಾಗುತ್ತಿದೆ.

ಯುಕೆಪಿ 3ನೇ ಹಂತದ ಯೋಜನೆಯಲ್ಲಿ ಮುಳುಗಡೆಗೆ ಗುರುತಿಸಿರುವ ಬೀಳಗಿ ತಾಲೂಕಿನ ಎಸ್ ಕೆ ಕೊಪ್ಪ, ಚಿಕ್ಕಾಲಗುಂಡಿ, ಮುಧೋಳ ತಾಲೂಕಿನ ಆಲಗುಂಡಿ ಬಿ ಕೆ, ಜನ್ನೂರು, ಮಾಚಕನೂರ, ಬುದ್ನಿ ಬಿ ಕೆ, ಚಿಕ್ಕೂರ,ಬದ್ನೋರ, ಭಂಟನೂರ, ಹೆಬ್ಬಾಳ, ಕೆ ಡಿ ಬುದ್ನಿ, ಚಿಚಖಂಡಿ, ರೋಗಿ, ಜಂಬಗಿ, ಗುಲಗಾಲ ಜಂಬಗಿ, ಮಳಲಿ ಗ್ರಾಮಗಳ ಬಳಿ ಕೃಷ್ಣಾ ಹಿನ್ನೀರು ಒತ್ತುತ್ತಿದೆ. ಇದರಿಂದ ಈ ಗ್ರಾಮಗಳಿಗೆ ನೀರು ಸುತ್ತುವರಿದಿದೆ. ಹೊಲಗಳಿಗೆ ಹೋಗುವ ಸಣ್ಣಪುಟ್ಟ ಕಾಲು ದಾರಿಗಳು ಬಂದ್ ಆಗಿವೆ. ಬೆಳಗಾವಿ ಜಿಲ್ಲೆಯಿಂದ ಘಟಪ್ರಭಾ ನದಿಗೆ 16,500 ಕ್ಯೂಸೆಕ್ ನೀರು ಹರಿದು ಬರುತ್ತದೆ. ತೀರದ ಮಿರ್ಜಿ ಬಳಿ ನೀರು ಇಳಿಮುಖವಾಗುತ್ತಾ ಸಾಗಿದೆ. 12 ಬ್ರಿಡ್ಜ್ ಕಂ ಬ್ಯಾರೇಜು ಹಾಗೂ ಕ್ಯಾದವಾಡ ಸೇತುವೆ ಜಲಾವೃತವಾಗಿರುವುದರಿಂದ ಸಂಚಾರ ಸ್ಥಗಿತವಾಗಿದೆ.

Advertisements

ಇದನ್ನೂ ಓದಿ: ಬಾಗಲಕೋಟೆ | ಹಲವು ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ

ಚೆನ್ನಾಳದಿಂದ ಆಲಗುಂಡಿ ಬಿ ಕೆ ವರಿಗಿನ ನದಿ ತೀರದ ಗ್ರಾಮಗಳ ಜಮೀನು, ತೋಟದ ವಸತಿ, ಮನೆಗಳು ಜಲಾವೃತವಾಗಿವೆ. ಮಿರ್ಜಿ, ನಂದಗಂವಾ, ನಾಗರಹಾಳ ಬಳಿ ಸ್ವಲ್ಪ ಮಟ್ಟಿಗೆ ನೀರು ಇಳಿಮುಖವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಘಟಪ್ರಭಾ ನದಿಯಲ್ಲಿ ನೀರು ಇಳಿದಿದ್ದರೂ ಇದಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳು ಜಾಲವೃತವಾಗಿ ಮುಂದುವರೆದಿದೆ. ಇದೆ ರೀತಿ ನೀರು ಇಳಿಮುಖವಾದರೂ ಸೇತುವೆ ಮೇಲಿನ ಸಂಚಾರಕ್ಕೆ ಎರಡಮೂರು ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಬೆಣ್ಣೆಹಳ್ಳ ಸೇತುವೆ ದುರಸ್ತಿಗೆ ಮುಂದಾಗಲು ಸಚಿವ ಸಂತೋಷ್ ಲಾಡ್ ಸೂಚನೆ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಹತ್ತಿರದ ದೊಡ್ಡಹಳ್ಳ ಹಾಗೂ ಬೆಣ್ಣೆಹಳ್ಳ...

ಧರ್ಮಸ್ಥಳ ಪ್ರಕರಣ | ನನ್ನ ಬಂಧನ ರಾಜಕೀಯ ಪಿತೂರಿಯ ಭಾಗ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಧಾರವಾಡ | ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುವುದು ಎಲ್ಲರ ಕರ್ತವ್ಯ: ಕೆ. ನಾಗಣ್ಣಗೌಡ

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ....

ಹುಬ್ಬಳ್ಳಿ | ಕುರುಬ ಸಮಾಜದ ಕುಲಶಾಸ್ತ್ರ ಅಧ್ಯಯನವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಒತ್ತಾಯ

ರಾಜ್ಯ ಸರ್ಕಾರ ಪಶುಪಾಲಕರ ಹಾಗೂ ಕುರಿಗಾರರ ದೌರ್ಜನ್ಯ ಕಾಯ್ದೆ ಜಾರಿಗೆ ತಂದಿರುವ...

Download Eedina App Android / iOS

X