ಬಾಗಲಕೋಟೆ | ಅತಿಕ್ರಮವಾಗಿ ನಿರ್ಮಿಸಿರುವ ಗ್ರಾನೈಟ್ ಫ್ಯಾಕ್ಟರಿ ತೆರವಿಗೆ ಕರವೇ ಆಗ್ರಹ

Date:

Advertisements

‌ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಇಳಕಲ್‌ ತಾಲೂಕಿನಲ್ಲಿ ಅತಿಕ್ರಮವಾಗಿ ನಿರ್ಮಾಣ ಮಾಡಿರುವ ಗ್ರಾನೈಟ್‌ ಫ್ಯಾಕ್ಟರಿ ಹಾಗೂ ಮಾರಾಟ ಮಳಿಗೆಗೆಳನ್ನು ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತು.

ಬಾಗಲಕೋಟೆಯ ಇಳಕಲ್ ತಾಲೂಕು ಪೈಕಿ ರಿ ಸನಂ.75 ರಲ್ಲಿ ಇಳಕಲ್‌ನಿಂದ ಹೊಲಗೇರಿಗೆ ಹೋಗುವ ರಸ್ತೆ ಹಾಗೂ ಇದರ ಉತ್ತರಕ್ಕೆ ಹೊಂದಿಕೊಂಡಿರುವ ಸರ್ಕಾರಿ ಹಳ್ಳವನ್ನು ಒತ್ತುವರಿ ಮಾಡಿ ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯವರು ಕಟ್ಟಡ ಕಾಂಪೌಂಡ್ ಕಟ್ಟಿ ಅತಿಕ್ರಮ ಮಾಡಿದ ಕುರಿತು ಸಮರ್ಪಕ ದಾಖಲೆಗಳೊಂದಿಗೆ ಕರವೇ ತಾಲೂಕು ಘಟಕದ ವತಿಯಿಂದ ಇಳಕಲ್ ತಹಶೀಲ್ದಾರರಿಗೆ ದೂರು ಸಲ್ಲಿಸಲಾಗಿತ್ತು. ಆದರೆ ತಹಶೀಲ್ದಾರರು ನಿರ್ಲಕ್ಷ್ಯ ತೋರಿದ ಕಾರಣ 2024ರ ಅಕ್ಟೋಬರ್‌ 14ರಂದು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಆರಂಭಿಸಲಾಗಿತ್ತು.

ಈ ಅತಿಕ್ರಮಣವನ್ನು ತೆರವುಗೊಳಿಸುವ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳವುದಾಗಿ ಬಾಗಲಕೋಟೆ ವಿಭಾಗೀಯ ಅಧಿಕಾರಿಗಳು ಭರವಸೆ ನೀಡಿದ ನಂತರ ಧರಣಿ ಸತ್ಯಾಗ್ರಹವನ್ನು ಅ.20ರಂದು ಕೈಬಿಡಲಾಗಿತ್ತು.

Advertisements

ತಾಲೂಕು ಭೂಮಾಪಕರು ನೀಡಿದ ವರದಿ ಹಾಗೂ ಗುರುತಿಸಿದ ಅತಿಕ್ರಮಣದ ಹದ್ದಿನಲ್ಲಿ ಕಟ್ಟಿರುವ ಕಟ್ಟಡಗಳನ್ನು ತೆರವುಗೊಳಿಸಲು ಇಳಕಲ್ ನಗರಸಭೆ ಸಿಬ್ಬಂದಿಗಳು ಕಳೆದ ಜನವರಿ 2 ರಂದು ಕಾಂಪೌಂಡಿನಲ್ಲಿ ಆಕಳುಗಳಿವೆ ಎಂದು ಕಾರಣ ನೀಡಿ ಅವುಗಳ ಸ್ಥಳಾಂತರಕ್ಕೆ 7 ದಿನಗಳ ಕಾಲಾವಧಿ ಕೇಳಿ ಖುದ್ದು ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯ ಮಾಲೀಕರು ಪೌರಾಯುಕ್ತರಲ್ಲಿ ವಿನಂತಿಸಿಕೊಂಡಿದ್ದರು.

ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯವರಿಂದ ಸರಕಾರಿ ಹಳ್ಳ ಒತ್ತುವರಿಯಾಗಿರುವುದು ಲಗತ್ತಿಸಿರುವ ದಾಖಲೆಗಳು ಮತ್ತು ಈ ಪತ್ರದ ಮುಖೇನ ಸ್ಪಷ್ಟವಾಗಿ ಸಾಬೀತಾಗಿದ್ದು, ಖುದ್ದು ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯ ಮಾಲೀಕರೇ ಒಪ್ಪಿಕೊಂಡು ಕೇಳಿದ್ದ ಕಾಲಾವಕಾಶ ಮುಗಿದು ಹೋಗಿದ್ದರೂ ಸರ್ಕಾರಿ ಹಳ್ಳ ಒತ್ತುವರಿಯನ್ನು ತೆರವುಗೊಳಿಸದೇ ಇರುವುದು ಅಧಿಕಾರಿಗಳು ಹಾಗೂ ಅತಿಕ್ರಮಣದಾರರ ನಡುವೆ ಆಂತರಿಕ ಹೊಂದಾಣಿಕೆ ಆಗಿರಬಹುದು ಎನ್ನುವ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಕಾರಣ ಸದರಿ ಅತಿಕ್ರಮಣವನ್ನು 10 ದಿನಗಳಲ್ಲಿ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದು ಕರವೇ ಒತ್ತಾಯಿಸಿತು.

ಈ ಸುದ್ದಿ ಓದಿದ್ದೀರಾ?: ಬಾಗಲಕೋಟೆ | ರೈತರ ಅನುಕೂಲಕ್ಕಾಗಿ ಕೆರೆಗಳ ಅಭಿವೃದ್ಧಿಗೆ ಕ್ರಮ: ಶಾಸಕ ವಿಜಯಾನಂದ ಕಾಶಪ್ಪನವರ

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಅಂಬಿಗೇರ, ತಾಲೂಕು ಅಧ್ಯಕ್ಷ ಗಣೇಶ ನಾಯಕ, ವಿದ್ಯಾರ್ಥಿ ಘಟಕದ ಮಶಾಕ್ ಸಂತಿ ಶಿರೂರ ಹಾಗೂ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X