ಬಾಗಲಕೋಟೆ | ದಿ. ಗಡದನ್ನವರ ರೈತರ ಸ್ವಾಭಿಮಾನದ ಪ್ರತೀಕ: ಸಚಿವ ಆರ್‌ ಬಿ ತಿಮ್ಮಾಪೂರ

Date:

Advertisements

ರೈತರು ತೊಡುವ ಹಸಿರು ಶಾಲು ರಮೇಶ್ ಗಡನ್ನವರ ಅವರ ಹೋರಾಟ ಹಾಗೂ ರೈತರ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಅಬಕಾರಿ ಸಚಿವ ಆರ್‌ ಬಿ ತಿಮ್ಮಾಪೂರ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಎಪಿಎಂಸಿ ಎದುರಿಗಿರುವ ತಾಲೂಕು ಪಂಚಾಯತ್ ಜಾಗದಲ್ಲಿ‌ ಹಮ್ಮಿಕೊಂಡಿದ್ದ ದಿ. ರಮೇಶ್ ಗಡದನ್ನವರ ಅವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

“ದಿ. ರಮೇಶ್ ಗಡದನ್ನವರ ಹೋರಾಟ ಮುಂದಿನ ಪೀಳಿಗೆಗೆ ಮಾದರಿಯಾಗಿದೆ. ಅವರ ಪುತ್ಥಳಿ ನಿರ್ಮಿಸಲಿಕ್ಕೆ ಈ ಹಿಂದೆ ವಿಧಾನ ಪರಿಷತ್ ಸದಸ್ಯನಾಗಿ ಸಕ್ಕರೆ ಮಂತ್ರಿಯಾಗಿದ್ದಾಲೇ ರೈತ ನಾಯಕನ ಹೆಸರು ಅಜರಾಮರವಾಗಿ ಸೂರ್ಯ ಚಂದ್ರರಿರುವರೆಗೂ ಗಡದನ್ನವರ‌ ಹೋರಾಟದ ಜೀವನ ಎಲ್ಲರಿಗೂ ಪ್ರೇರಣೆಯಾಗಿರಲೆಂದು ತೀರ್ಮಾನಿಸಿದ್ದೆ. ಈ ಕಾರ್ಯಕ್ಕೆ ತಗುಲುವ ಎಲ್ಲ ಖರ್ಚು ವೆಚ್ಚಕ್ಕೆ ಸ್ವಂತ ಹಣ ನೀಡುವುದಾಗಿ ವಾಗ್ದಾನ ಮಾಡಿದ್ದೆ. ಇಂದು ಪುತ್ಥಳಿ ಪೂರ್ಣ ನಿರ್ಮಾಣ ಹಂತದಲ್ಲಿದೆ. ಅವರು ನಮ್ಮೊಂದಿಗಿಲ್ಲದಿದ್ದರೂ ರೈತರ ಹೋರಾಟಕ್ಕೆ ಚೇತನ, ಪ್ರೇರಕ ಶಕ್ತಿ. ರಾಜ್ಯದ ರೈತ ಚಳವಳಿಗೆ ರಮೇಶ ಗಡದನ್ನವರ ಅವರ ಕೊಡುಗೆಗಳು ಮಹತ್ವ ಸಾರುತ್ತಿವೆ” ಎಂದು ಅವರ ನಡೆ ನುಡಿಯ ಬಗ್ಗೆ ಸ್ವವಿವರವಾಗಿ ತಿಳಿಸಿದರು.

ಹಿರಿಯ ನ್ಯಾಯವಾದಿ, ಸಾಹಿತಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಕಾಶ ವಸ್ರ್ತದ ಮಾತನಾಡಿ, “ದಿ. ರಮೇಶ್ ಗಡದನ್ನವರ ಅವರು ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದಲ್ಲೂ ರೈತರ ಹೋರಾಟದ ನೇತಾರರಾಗಿದ್ದರು. ಅವರ ಹೋರಾಟದ ಮಾದರಿ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ. ಅವರ ಹೆಸರು ರೈತರ ಹೋರಾಟಗಳ ಶಕ್ತಿಗೆ‌ ಸಮಾನಾರ್ಥವಾಗಿದೆ. ವಿವಿಧ ಜಿಲ್ಲೆಗಳಿಂದ ರೈತ ಮುಖಂಡರು ಜಮಾಯಿಸಿ ಅವರ ತತ್ವಾದರ್ಶ, ಮಾರ್ಗದರ್ಶನ, ನೆನಪುಗಳನ್ನು ಕಂಡಿದ್ದಾರೆ. ನಾನು ಅವರ ಒಡನಾಡಿಯಾಗಿ ಅತ್ಯಂತ ನಿಕಟವರ್ತಿಯಾಗಿ ಕಂಡಿದ್ದೇನೆ” ಎಂದು ಸ್ಮರಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಿವಾದಾತ್ಮಕ ಹೇಳಿಕೆ ಹಿನ್ನೆಲೆ; ಸಂಘಪರಿವಾರದ ಮುಖಂಡ ಶರಣ್ ಪಂಪ್‌ವೆಲ್ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ

ಹಣಮಂತ ನಬಾಬ ಮಾತನಾಡಿ, “ರಮೇಶ್ ಗಡದ್ದನ್ನವರ ಅವರ ಪ್ರಭಾವವು ಅವರ‌ ಜೀವಿತಾವಧಿಯನ್ನು ಮೀರಿ ವಿಸ್ತರಿಸಿದೆ. ಇಂದು ನಡೆಯುತ್ತಿರುವ ರೈತರ ಹೋರಾಟದ ಹಿಂದಿನ ಶಕ್ತಿಯಾಗಿ ಅವರಿದ್ದಾರೆ. ಅವರ ಹೋರಾಟದ ಪರಂಪರೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾಗಿದೆ. ಅವರ ಕೊಡುಗೆಗಳನ್ನು ಸ್ಮರಿಸಲು, ಅವರ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ಅದರ ಎಲ್ಲ ವೆಚ್ಚಗಳನ್ನು ಸಚಿವ ಆರ್ ಬಿ ತಿಮ್ಮಾಪೂರ ಅವರು ವೈಯಕ್ತಿಕ ನಿಧಿಯಿಂದ ಭರಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಮೂರ್ತಿಯನ್ನು ನೋಡಲು ಸಚಿವರು ಖುದ್ದಾಗಿ ನಮ್ಮೊಂದಿಗೆ ಬಂದಿದ್ದರು. ಸಚಿವ ತಿಮ್ಮಾಪೂರ ಅವರು ರೈತರ ಮೇಲೆ ಕಾಳಜಿ ಮತ್ತು ಹೋರಾಟಗಾರರ ಮೇಲೆ ನಂಬಿಕೆ ವಿಶ್ವಾಸ ಇಟ್ಟುಕೊಂಡಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಮೈಬುಸಾಬ್ ಬಾಗವಾನ್, ಶಿರೋಳದ ಶಂಕರಾರೂಢ ಸ್ವಾಮೀಜಿ, ರತ್ನಕುಮಾರ್ ಅಡಾಲಟ್ಟಿ, ದುಂಡಪ್ಪ ಯರಗಟ್ಟಿ, ಮಹೇಶ್ ಪಾಟೀಲ್, ಕಲ್ಮೇಶ ಹನಗುಜಿ, ಸುಭಾಷ್ ಶಿರಬೂರ, ಚೆನ್ನಪ್ಪ ಪೂಜಾರಿ, ಈರಪ್ಪ ಹಂಚಿನಾಳ, ವೆಂಕಣ್ಣ  ಮಳಲಿ, ಎ ಜೆ ಪಾಟೀಲ ದುಂಡಪ್ಪ ಲಿಂಗರೆಡ್ಡಿ, ನಾಗೇಶ್ ಪೂಜಾರಿ ಸೇರಿದಂತೆ ರೈತ ಸಂಘದ ಪ್ರಮುಖರು ಇದ್ದರು.

ವರದಿ: ಗಣೇಶ ಮೈತ್ರಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X