ಬೆಂಗಳೂರು | ಡಾ. ಎಚ್‌ ಗಿರಿಜಮ್ಮ ಪ್ರಶಸ್ತಿ ಪ್ರಕಟ

Date:

Advertisements

2022ನೇ ಸಾಲಿನ ‘ಡಾ. ಎಚ್. ಗಿರಿಜಮ್ಮ ಪ್ರಶಸ್ತಿ’ಗೆ ಡಾ. ಕೆ.ಸುಶೀಲಾ ಅವರ ‘ವೈದ್ಯೆಯೊಬ್ಬರ ನೆನಪಿನಂಗಳದಿಂದ’ ಹಾಗೂ ಡಾ. ಪ್ರೇಮಲತಾ ಬಿ. ಅವರ ‘ಐದು ಬೆರಳುಗಳು’ ಕಥಾಸಂಕಲನ ಆಯ್ಕೆಯಾಗಿವೆ.

ಡಾ. ಗಿರಿಜಮ್ಮ ಪ್ರಶಸ್ತಿಗೆ 2022ರಲ್ಲಿ ಪ್ರಕಟವಾದ ವೈದ್ಯ ಸಾಹಿತ್ಯ ಮತ್ತು ವೈದ್ಯೇತರ ಸಾಹಿತ್ಯ ವಿಭಾಗದಿಂದ ಕೃತಿಗಳನ್ನು ವೈದ್ಯಲೇಖಕಿಯರಿಂದ ಆಹ್ವಾನಿಸಲಾಗಿತ್ತು.

ಈ ಪ್ರಯುಕ್ತ ರಾಜ್ಯಾದ್ಯಂತ ಸಾಕಷ್ಟು ಕೃತಿಗಳು ಬಂದಿದ್ದು ಅಂತಿಮವಾಗಿ ವೈದ್ಯ ಸಾಹಿತ್ಯದಿಂದ ಡಾ.ಕೆ.ಸುಶೀಲಾ ಅವರ ‘ವ್ಯದ್ಯೆಯೊಬ್ಬರ ನೆನಪಿನಂಗಳದಿಂದ’ ಹಾಗೂ ವೈದ್ಯೇತರ ಸಾಹಿತ್ಯ ವಿಭಾಗದಿಂದ ಡಾ. ಪ್ರೇಮಲತಾ ಬಿ ಅವರ ‘ಐದು ಬೆರಳುಗಳು’ ಕಥಾ ಸಂಕಲನ ಕೃತಿಗಳು ಆಯ್ಕೆಯಾಗಿವೆ. 25,000ರೂ. ನಗದು ಮತ್ತು ಸ್ಮರಣ ಫಲಕಗಳನ್ನು ಪ್ರಶಸ್ತಿಯು ಒಳಗೊಂಡಿರುತ್ತದೆ.

Advertisements

ಆಯ್ಕೆ ಸಮಿತಿಯಲ್ಲಿ ಹಿರಿಯ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಮತ್ತು ವೈದ್ಯರಾದ ಡಾ. ಆರ್.ಕೆ.ಸರೋಜ, ಡಾ. ನಾ.ಸೋಮೇಶ್ವರ ಹಾಗೂ ಹಿರಿಯ ಕವಯಿತ್ರಿ ಡಾ. ಎಚ್.ಎಲ್.ಪುಷ್ಪ ಇದ್ದು ತೀರ್ಪುಗಾರರಾಗಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 9, ಶನಿವಾರ ಸಂಜೆ 05:00ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಂದ್ರಶೇಖರ್ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X