ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರವಲಯದ ಬಾಳೋಬಾ ಮಾಳನಲ್ಲಿ ಪ್ರೀತಿಗೆ ಅಡ್ಡಿಯಾದ ತಾಯಿ ಮಗನನ್ನು ಬುಧವಾರ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಸ್ಥಳೀಯ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ತಾಲ್ಲೂಕಿನ ಕೋಣನಕೇರಿಯ ರವಿ ಖಾನಪ್ಪಗೋಳ ಎಂಬಾತ ಅಕ್ಕೋಳದ ಮಂಗಲ ನಾಯಿಕ ಅವರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಅದಕ್ಕೆ ಮಂಗಲ ವಿರೋಧ ವ್ಯಕ್ತಪಡಿಸಿದ್ದಕ್ಕೆ ಮಂಗಲ ಮತ್ತು ಅವರ ಪುತ್ರ ಪ್ರಜ್ವಲ್ ಅನ್ನು ಕೊಲೆ ಮಾಡಿದ್ದ. ರವಿ ಮತ್ತು ಆತನ ಗೆಳೆಯ ಲೋಕೇಶ ನಾಯಿಕನನ್ನು ಗುರುವಾರವೇ ಪೊಲೀಸರು ಬಂಧಿಸಿದ್ದರು ಸದ್ಯ ಮತ್ತಿಬ್ಬರೂ ಆರೋಪಿಗಳಾದ ಸಂತೋಷ ನಾಯಿಕ, ಮಹಾದೇವ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.