ಬಸವರಾಜ ಕಟ್ಟಿಮನಿ – ದುಡಿಯುವ ಜನರ ಪರ ಬರೆದ ಪ್ರಗತಿಶೀಲ ಸಾಹಿತಿ

Date:

Advertisements

ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರತಿಪಾದಕರಲ್ಲಿ ಅಗ್ರಸ್ಥಾನದಲ್ಲಿದ್ದ ಬಸವರಾಜ ಕಟ್ಟಿಮನಿ ಅವರು ದುಡಿಯುವ ಜನರ ಪರವಾಗಿ ಕತೆ, ಕಾದಂಬರಿಗಳನ್ನು ರಚಿಸಿ ಜನರ ಸಾಹಿತಿ ಎಂಬ ಖ್ಯಾತಿ ಗಳಿಸಿದ್ದರು, ಎಂದು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು.

ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ‘ಬಸವರಾಜ ಕಟ್ಟಿಮನಿ ಅವರ ಸಾಹಿತ್ಯದಲ್ಲಿ ಪ್ರಗತಿಶೀಲತೆ’ ಕುರಿತ ವಿಚಾರಸಂಕಿರಣ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಚ್‌.ಎಸ್‌. ಮೇಲಿನಮನಿ ಹೇಳಿದರು, “ಬೀದಿಯವರು, ಗಿರಣಿ ಕಾರ್ಮಿಕರು, ಕೂಲಿಕಾರರು, ಮಹಿಳೆಯರು ಮತ್ತು ಪರಿಶಿಷ್ಟ ವರ್ಗದವರ ಜೀವನವನ್ನು ಸಾಹಿತ್ಯದ ಕೇಂದ್ರವನ್ನಾಗಿ ಮಾಡಿಕೊಂಡವರು ಕಟ್ಟಿಮನಿ. ಅವರು ಬರೆದಂತೆಯೇ ಬದುಕಿದ ಬದ್ಧತೆಯ ಸಾಹಿತಿ,” ಎಂದು ಸ್ಮರಿಸಿದರು.

ಪ್ರಾಧ್ಯಾಪಕಿ ಸರಸ್ವತಿ ಭಗವತಿ ಅವರು ವಿಚಾರ ಪ್ರಬಂಧ ಮಂಡಿಸಿದರು.

ಕಾರ್ಯಕ್ರಮದಲ್ಲಿ ಸೋಮನಾಥ ಚಿಕ್ಕನರಗುಂದ, ಪಿ.ಜಿ. ಕೇಂಪಣ್ಣವರ, ಆಶಾ ಯಮಕನಮರಡಿ, ಮಹೇಶ್ ಗುರನಗೌಡರ, ಶಶಿಕಾಂತ ತಾರದಾಳೆ, ಅಡಿವೆಪ್ಪ ಇಟಗಿ, ಸಂತೋಷ ಚವ್ಹಾಣ, ರೋಹಿಣಿ ಹಣಬರಟ್ಟಿ, ಸ್ವಾತಿ ಮಾಳಿಗೆ, ವರ್ಷಾ ಮುರಗೋಡ, ಜಾನ್ವಿ ಬೆಳ್ಳೆ ಮತ್ತು ಸೃಷ್ಟಿ ಕೊರೆನ್ನವರ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಸದಸ್ಯೆ ಕೆ.ಆರ್‌. ಸಿದ್ದಗಂಗಮ್ಮ ಆಶಯ ನುಡಿಗಳನ್ನಾಡಿದರು. ಎಚ್‌.ಎಂ‌. ಚನ್ನಪ್ಪಗೋಳ ಸ್ವಾಗತಿಸಿದರು. ಪಾಂಡುರಂಗ ಗಾಣಿಗೇರ ವಂದಿಸಿದರು. ನಾಗವೇಣಿ ದೂದ್ಯಾಗೋಳ ಮತ್ತು ತ್ರಿವೇಣಿ ಪೂಜೇರ ನಿರೂಪಣೆ ನೆರವೇರಿಸಿದರು.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ : ರಮೇಶ ಕತ್ತಿ ಪೆನೆಲ್ ಮುನ್ನಡೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 15 ನಿರ್ದೇಶಕರ...

ಬೆಳಗಾವಿ : ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ 68.37% ಮತದಾನ : ರಾತ್ರಿಯೇ ಫಲಿತಾಂಶ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಭಾರೀ...

ಬೆಳಗಾವಿ : ಚುನಾವಣೆಯಲ್ಲಿ ಜಾರಕಿಹೊಳಿ ಹಾಗೂ ಕತ್ತಿ ಬೆಂಬಲಿಗರ ನಡುವೆ ಗಲಾಟೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಗೆ...

ಬೆಳಗಾವಿ : ನಾಳೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಕಣ...

Download Eedina App Android / iOS

X