ಬೆಳಗಾವಿ : ಮೌಢ್ಯತೆಯ ಪ್ರಭಾವದಿಂದ ಸಾಮೂಹಿಕ ದೇಹತ್ಯಾಗಕ್ಕೆ ಸಿದ್ಧವಾಗಿದ್ದ ಕುಟುಂಬ

Date:

Advertisements

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಅನಂತಪುರ ಗ್ರಾಮದ ತುಕಾರಾಮ ಇರಕರ್ ಕುಟುಂಬ ನಾಲ್ವರು ಸದಸ್ಯರು ಹರಿಯಾಣದ ವಿವಾದಿತ ಸಂತ ಬಾಬಾ ರಾಮಪಾಲ್ ಪ್ರವಚನದ ಪ್ರಭಾವಕ್ಕೆ ಒಳಗಾಗಿ ದೇಹತ್ಯಾಗಕ್ಕೆ ಮುಂದಾಗಿದ್ದ ಘಟನೆ ಮೌಢ್ಯ ಎಷ್ಟು ಭಯಾನಕ ಪರಿಣಾಮ ಉಂಟುಮಾಡಬಲ್ಲದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.

ಧರ್ಮ, ಭಕ್ತಿ ಮಾನವನ ಆತ್ಮಶಕ್ತಿ ಬೆಳೆಸುವ ಶಕ್ತಿಯಾಗಬೇಕು. ಆದರೆ ಕೆಲವರು ಇದನ್ನು ದುರುಪಯೋಗ ಪಡಿಸಿಕೊಂಡು ಮೌಢ್ಯ, ಅಂಧಶ್ರದ್ಧೆ ಮತ್ತು ಪ್ರಾಣತ್ಯಾಗದ ಭ್ರಮೆಗಳನ್ನು ಬಿತ್ತುವಾಗ, ಬಲಿಯಾಗುವವರು ಸಾಮಾನ್ಯ ಕುಟುಂಬಗಳೇ. “ಬಾಬಾ ನಮ್ಮನ್ನು ಕರೆದೊಯ್ಯುತ್ತಾರೆ, ಮೋಕ್ಷ ಕೊಡಿಸುತ್ತಾರೆ” ಎಂಬ ಭ್ರಮೆಯಿಂದಲೇ ಇರಕರ್ ಕುಟುಂಬ ಸಾಮೂಹಿಕ ದೇಹತ್ಯಾಗಕ್ಕೆ ಸಿದ್ಧವಾಗಿತ್ತು.

ಘಟನೆ ಬೆಳಕಿಗೆ ಬಂದ ನಂತರ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಹಾಗೂ ಕವಲಗುಡ್ಡದ ಅಮರೇಶ್ವರ ಮಹಾರಾಜರು ತುಕಾರಾಮ ಇರಕರ್ ಕುಟುಂಬ ಭೇಟಿ ಮಾಡಿ ಬುದ್ದಿವಾದ ಹೇಳಿದ್ದಾರೆ.

Advertisements

ಬಾಬಾ ರಾಮಪಾಲ್ ಮಹಾರಾಷ್ಟ್ರ ಪೋಲಿಸರ ವಶದಲ್ಲಿದ್ದು ಮೌಡ್ಯಕ್ಕೆ ಬಲಿಯಾಗದೆ ಉತ್ತಮ ಜೀವನ ಸಾಗಿಸುವಂತೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ ಇದರಿಂದ ಕುಟುಂಬ ಸಾವಿನ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ತಿಳಿದು ಬಂದಿದೆ

ಅಧಿಕಾರಿಗಳ ತ್ವರಿತ ಜಾಗೃತಿ, ಸ್ಥಳೀಯ ಧಾರ್ಮಿಕ ಮುಖಂಡರ ಬುದ್ಧಿವಾದದಿಂದ ಈ ಕುಟುಂಬ ದೇಹತ್ಯಾಗದಿಂದ ಹಿಂದೆ ಸರಿದಿರುವುದು ಸಮಾಧಾನದ ಸಂಗತಿ. ಆದರೆ ಮೌಢ್ಯವನ್ನು ತಡೆಗಟ್ಟದೆ ಇದ್ದರೆ ನಾಳೆ ಇನ್ನೂ ಅನೇಕ ಕುಟುಂಬಗಳು ಹಾನಿಗೊಳಗಾಗುವ ಭೀತಿ ಇದೆ.

ಮೌಢ್ಯ ನಿರ್ಮೂಲನೆಗೆ ಸರ್ಕಾರ, ಸಂಘಟನೆಗಳು, ಮಾಧ್ಯಮಗಳು ಹೆಚ್ಚಿನ ಹೊಣೆ ಹೊತ್ತು ಕಾರ್ಯ ನಿರ್ವಹಿಸಬೇಕು.

ಅನಂತಪುರ ಗ್ರಾಮದ ಈ ಘಟನೆ ಅಂಧಶ್ರದ್ಧೆ ಹಾಗೂ ಮೌಢ್ಯದ ಅಪಾಯವನ್ನು ಎಚ್ಚರಿಸುವ ಗಂಭೀರ ಪಾಠವಾಗಿದೆ. ತುಕಾರಾಮ ಇರಕರ್ ಕುಟುಂಬ ಅಧಿಕಾರಿಗಳ ಜಾಗೃತಿ ಮತ್ತು ಸಮಾಜಮುಖಿ ವ್ಯಕ್ತಿಗಳ ಬುದ್ಧಿವಾದದಿಂದ ದೇಹತ್ಯಾಗದ ನಿರ್ಧಾರದಿಂದ ಹಿಂದೆ ಸರಿದರೂ, ಇದೇ ಘಟನೆ ಮತ್ತೆ ಮರುಕಳಿಸದಂತೆ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗುವುದು ಅಗತ್ಯ.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಜಿಲ್ಲೆಯಲ್ಲಿ ಮೋಡ ಕವಿದ ಹವಾಮಾನ – ಅಲ್ಪ ಮಳೆಯ ಸಾಧ್ಯತೆ

ಬೆಳಗಾವಿ ಜಿಲ್ಲೆಯಲ್ಲಿ ತಾಪಮಾನ 20 ರಿಂದ 25 ಡಿಗ್ರಿ ಸೆಲ್ಸಿಯಸ್ ದಾಖಲಾಗುವ...

ಬೆಳಗಾವಿ : ಲಕ್ಷ್ಮಣ ಸವದಿಯಿಂದ ನನ್ನ ಮೇಲೆ ಕೆಸ್ ನಾನು ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವೆ : ಮಹೇಶ ಕುಮಠಳ್ಳಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ನಿರ್ದೇಶಕ ಹುದ್ದೆಗೆ ಸಂಬಂಧಿಸಿದ ಪ್ರಕರಣ ರದ್ದಾದರೆ...

ಮಹಾರಾಷ್ಟ್ರದಲ್ಲಿ ಮಳೆ – ಬೆಳಗಾವಿ ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ

ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಇರುವ...

ಬೆಳಗಾವಿ : ವೇದಗಂಗಾ–ಘಟಪ್ರಭಾ ನದಿಗಳ ಅಬ್ಬರನಿಪ್ಪಾಣಿ – ಗೋಕಾಕ್ ಪ್ರದೇಶದಲ್ಲಿ ಪ್ರವಾಹದಿಂದ ಹಾನಿ

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವೇದಗಂಗಾ ನದಿ ಉಕ್ಕಿ...

Download Eedina App Android / iOS

X