ಬೆಳಗಾವಿ | 30 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ

Date:

Advertisements

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದ ಅಪ್ಪಯ್ಯ ಸ್ವಾಮಿ ಮತ್ತು ಚಂದ್ರಯ್ಯ ಸ್ವಾಮಿಜಿ ರಥೋತ್ಸವದ ಗದ್ದಲದ ಮಧ್ಯೆ, ಶಿವಾನಂದ ಸಿದ್ದಪ್ಪ ಬಿಳ್ಳೂರ ಅವರಿಗೆ ದಾರಿಯಲ್ಲಿ 30 ಗ್ರಾಂ ಚಿನ್ನದ ಸರ ಕಾಣಿಸಿತು. ಚಿನ್ನವನ್ನು ಕಂಡ ತಕ್ಷಣ, ಅದನ್ನು ತಮ್ಮ ಬಳಿ ಸುರಕ್ಷಿತವಾಗಿ ಇರಿಸಿಕೊಂಡ ಅವರು, ಯಾವುದೇ ಲಾಭದ ಆಸೆಗೆ ಒಳಗಾಗದೆ, ಸಾರ್ವಜನಿಕವಾಗಿ ಘೋಷಣೆ ಮಾಡಿದರು. ರಥೋತ್ಸವದ ಮುಖ್ಯ ವೇದಿಕೆಯಲ್ಲಿ ಧ್ವನಿವರ್ಧಕದ ಮೂಲಕ, “ನಮಗೆ ಚಿನ್ನದ ಸರ ಸಿಕ್ಕಿದೆ, ಯಾರಾದರೂ ಕಳೆದುಕೊಂಡಿದ್ದರೆ, ಸೂಕ್ತ ಸಾಕ್ಷಿಯೊಂದಿಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ತೆಗೆದುಕೊಂಡು ಹೋಗಬಹುದು” ಎಂದು ತಿಳಿಸಿದರು. ಈ ಪ್ರಕಟಣೆಯು ಗ್ರಾಮಸ್ಥರಲ್ಲಿ ಶಿವಾನಂದರ ಪ್ರಾಮಾಣಿಕತೆಯ ಬಗ್ಗೆ ಮೆಚ್ಚುಗೆಯನ್ನು ತಂದಿತು

ಬೆಂಗಳೂರಿನ ನಿವಾಸಿಯಾದ ಶ್ವೇತಾ ಸಿಂಗ್ ಎಂಬುವರು ಈ ರಥೋತ್ಸವದಲ್ಲಿ ಭಾಗವಹಿಸಿದ್ದ ವೇಳೆ, ಆಕಸ್ಮಿಕವಾಗಿ 30 ಗ್ರಾಂ ತೂಕದ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಚಿನ್ನದ ದರ ದಿನದಿಂದ ದಿನಕ್ಕೆ ಏರುತ್ತಿರುವ ಈ ಕಾಲದಲ್ಲಿ, ಅಂತಹ ಮೌಲ್ಯಯುತ ಆಭರಣವನ್ನು ಕಳೆದುಕೊಂಡ ಶ್ವೇತಾ ಸಿಂಗ್ ದಂಪತಿಗೆ ಆ ದಿನ ಆಘಾತಕಾರಿಯಾಗಿತ್ತು. ಆದರೆ, ಈ ಘಟನೆಯು ಶಿವಾನಂದ ಸಿದ್ದಪ್ಪ ಬಿಳ್ಳೂರ ಎಂಬ ಯುವಕನಿಂದಾಗಿ ಸಂತಸದ ಕ್ಷಣವಾಗಿ ಮಾರ್ಪಟ್ಟಿತು.

ಚಿನ್ನದ ಸರವನ್ನು ಮರಳಿ ಪಡೆದ ವಿಕ್ರಂ ಸಿಂಗ್ ದಂಪತಿಗಳು ಶಿವಾನಂದರ ಪ್ರಾಮಾಣಿಕತೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಗ್ರಾಮದ ಹಿರಿಯರಿಗೆ ಮತ್ತು ಶಿವಾನಂದರಿಗೆ ಧನ್ಯವಾದ ಸೂಚಿಸಿ, “ಇಂತಹ ಒಳ್ಳೆಯ ಮನಸ್ಸಿನ ಜನರಿಂದಾಗಿ ಸಮಾಜದಲ್ಲಿ ಇನ್ನೂ ನಂಬಿಕೆ ಉಳಿದಿದೆ” ಎಂದು ತಿಳಿಸಿದರು.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೈಕ್ ಮತ್ತು ಬಸ್ ನಡುವೆ ಅಪಘಾತ ಗರ್ಭಿಣಿ ಸಾವು

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಠ ರಸ್ತೆಯಲ್ಲಿ ಬಸ್ ಮತ್ತು ಬೈಕ್...

ಬೆಳಗಾವಿ : ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ

ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಾಳೆ ಬುಧವಾರ...

ಬೆಳಗಾವಿ : ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳಗಾವಿಯ ಬಿಮ್ಸ್ ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X