ಆರ್ ಸಿಬಿ ಗೆಲುವಿನ ವೇಳೆ ದುರಂತ ಸಂಭವಿಸಿದ್ದು, ಆಡಳಿತ ಮತ್ತು ವಿರೋಧ ಪಕ್ಷದವರು ಪರಸ್ಪರ ಕೆಸರೆರಚಾಟವನ್ನು ನಿಲ್ಲಿಸಬೇಕು. ಸಿಎಂ ಸಿದ್ಧರಾಮಯ್ಯ ಕ್ಷಮೆಯಾಚಿಸಿದರೇ ದೊಡ್ಡ ಅಪರಾಧವಾಗುದಿಲ್ಲ. ಕ್ರಿಕೆಟ್ ಆಟಗಾರರು ಪರಿಹಾರ ರೂಪದಲ್ಲಿ 1 ಕೋಟಿ ರೂಪಾಯಿ ನೀಡಬೇಕೆಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೆಳಗಾವಿ ನಗರದಲ್ಲಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು ಆರ್ ಸಿಬಿ ಗೆಲುವಿನ ವೇಳೆ ವಿಜಯೋತ್ಸವದ ವೇಳೆ ದುರಂತ ನಡೆದಿದ್ದು, ದುರದೃಷ್ಟಕರ. ಈ ಸಂದರ್ಭದಲ್ಲಿ ಉಭಯ ಪಕ್ಷಗಳ ಕೆಸರೆರಚಾಟ ಸರಿಯಲ್ಲ. ಕುಂಭಮೇಳದ ಘಟನೆಗೆ ಇದನ್ನು ಹೋಲಿಸುವುದು ಸರಿಯಲ್ಲ. ಪರಸ್ಪರ ಒಬ್ಬರಿಗೊಬ್ಬರ ಮೇಲೆ ಆರೋಪ ಪ್ರತ್ಯಾರೋಪಗಳನ್ನ ಮಾಡುವುದು ಶೋಭೆ ತರುವುದಲ್ಲ. ಸಿಎಂ ಸಿದ್ದರಾಮಯ್ಯನವರು ವಿರೋಧ ಪಕ್ಷದವರು ಹೇಳಿರುವುದು ಮತ್ತು ಜನರು ಹೇಳಿರುವುದನ್ನು ಕೇಳಿ, ಕ್ಷಮೆಯಾಚಿಸಿದರೇ ದೊಡ್ಡ ಅಪರಾಧವಾಗುವುದಿಲ್ಲ.
ಉಭಯ ಪಕ್ಷದ ರಾಜಕಾರಣಿಗಳು ಈ ಸಂದರ್ಭದಲ್ಲಿ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದರು.
ಕ್ರಿಕೆಟಿಗರು ಘಟನೆ ನಡೆದಾಗ ತಡವಾಗಿ ಪ್ರತಿಕ್ರಿಯಿಸಿದ್ದು, ದುರದೃಷ್ಟಕರ. ನಿಮ್ಮ ಅಭಿಮಾನಿಗಳು ನಿಮಗಾಗಿ ಸಾವನ್ನಪ್ಪಿದ್ದಾರೆ. ಕ್ರಿಕೆಟ್ ಕಮೀಟಿಯವರು ಆಟಗಾರರು ಕೂಡ 1 ಕೋಟಿ ರೂಪಾಯಿ ಪರಿಹಾರ ನೀಡಿದರೇ ತಪ್ಪಲ್ಲ. ಕ್ರಿಕೆಟ್ ಹೆಸರಿನಲ್ಲಿ ಬೇಕಾದಷ್ಟು ಲೂಟಿ ಹೊಡೆದು ಅಭಿಮಾನಿಗಳಿಂದ ಬದುಕುತ್ತಿದ್ದು, ಇದಕ್ಕೆ ನ್ಯಾಯ ನೀಡಬೇಕು ಎಂದು ತಿಳಿಸಿದ್ದಾರೆ.