ಬಳ್ಳಾರಿ | ಹೆಣ್ಣಿಗೆ ನೈಸರ್ಗಿಕ ಕೊಡುಗೆ ತಾಯ್ತನ: ಡಾ. ಶೋಭಾರಾಣಿ

Date:

Advertisements

ತಾಯ್ತನ ಎಂಬುದು ಹೆಣ್ಣು ಮಕ್ಕಳಿಗೆ ನೈಸರ್ಗಿಕವಾಗಿ ಸಿಕ್ಕಿರುವ ಕೊಡುಗೆಯಾಗಿದೆ. ಹೆಣ್ಣಿನ ಜೀವನದಲ್ಲಿ ತಾಯಿಯಾಗುವುದು ಅತ್ಯಂತ ಪ್ರಮುಖ ಘಟ್ಟ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ ಜೆ ಶೋಭಾರಾಣಿ ಅಭಿಪ್ರಾಯಪಟ್ಟರು.

ಸುಬ್ಬರಾವ್ ಆಸ್ಪತ್ರೆಯಲ್ಲಿ ನಡೆದ ಬಂಜೆತನ ನಿವಾರಣಾ ಸಮಾರಂಭದಲ್ಲಿ ಮಾತನಾಡಿದ ಅವರು, “ಬಂಜೆತನ ವಿವಾಹಿತ ಮಹಿಳೆಯರಲ್ಲಿ ಕೀಳರಮೆಯನ್ನು ಉಂಟುಮಾಡುತ್ತದೆ. ಹೆಣ್ಣು ಮಕ್ಕಳು ದೈಹಿಕವಾಗಿ ಸಬಲರಾಗಿದ್ದರೂ ಆರೋಗ್ಯ ಮತ್ತು ಸಂತಾನ ವಿಷಯದಲ್ಲಿ ಅನಾರೋಗ್ಯವಾಗಿದ್ದರೆ ಅಂಥವರಲ್ಲಿ ಸಂತಾನ ಆಗುವುದು ಕಷ್ಟ. ಇದು ಕೇವಲ ಹೆಣ್ಣಿನ ದೌರ್ಬಲ್ಯವಲ್ಲ, ಅದು ಗಂಡಿನದೂ ಸಮಸ್ಯೆ ಇರಬಹುದು. ಆದ್ದರಿಂದ ದಂಪತಿಗಳು ಇಬ್ಬರು ಚಿಕಿತ್ಸೆಗೆ ಮತ್ತು ತಪಾಸಣೆಗೆ ಒಳಪಟ್ಟಲ್ಲಿ ಅಂಥವರಿಗೆ ಬಂಜೆತನ ನಿವಾರಿಸಿ ಮಕ್ಕಳ ಸಂತಾನವನ್ನು ಹೊಂದಲು ಅನುಕೂಲವಾಗುತ್ತದೆ” ಎಂದು ತಿಳಿಸಿದರು.

“ಕೆಲ ಮಹಿಳೆಯರು ಹೆಣ್ಣು ಮಗುವಾದಲ್ಲಿ ಕೀಳರಿಮೆಗೆ ಒಳಗಾಗುತ್ತಾರೆ ಅಥವಾ ಅವರ ಕೌಟುಂಬಿಕ ಸದಸ್ಯರಿಂದ ಹೀಯಾಳಿಕೆಗೆ ಒಳಪಟ್ಟು ಹೆಣ್ಣು ಮಗು ಹೆರುವುದೇ ಒಂದು ಅಪರಾಧ ಎಂಬಂತೆ ಭಾವಿಸಿರುತ್ತಾರೆ. ಇದು ಸಮಾಜದಲ್ಲಿ ಅತ್ಯಂತ ತಪ್ಪು ಕಲ್ಪನೆಯಾಗಿದೆ. ಹೆಣ್ಣಾಗಲಿ ಗಂಡಾಗಲಿ ಇಬ್ಬರಿಗೂ ಸಮಾನವಾದ ಪ್ರಾಶಸ್ತ್ಯವನ್ನು ನೀಡಬೇಕು” ಎಂದರು.

Advertisements

ಎಸ್ ಆರ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ ಲಕ್ಷ್ಮಿ ಪಾವನಿ ಮಾತನಾಡಿ, “ಇಷ್ಟು ವರ್ಷಗಳಲ್ಲಿ ಸುಮಾರು 10 ಸಾವಿರ ಮಹಿಳೆಯರಿಗೆ ತಪಾಸಣೆ ಮಾಡಿ ಅವರ ಬಂಜೆತನದ ದೌರ್ಬಲ್ಯವನ್ನು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿ, ಅವರು ಸಂತಾನ ಫಲವನ್ನು ಪಡೆಯುವಲ್ಲಿ ಯಶಸ್ವಿಯಾಗಿರುತ್ತೇವೆ. ನಮ್ಮ ಆಸ್ಪತ್ರೆಯಲ್ಲಿ ಪ್ರತಿ ಗುರುವಾರದಂದು ಬಂಜೆತನದ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು. ನಂತರದ ಚಿಕಿತ್ಸೆಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಹಿಳೆಯರಿಗೆ ಚಿಕಿತ್ಸೆಯನ್ನು ನೀಡಲಾಗುವುದು ಮತ್ತು ರೈತರಿಗೆ ರೈತ ಮಹಿಳೆಯರಿಗೆ ಅವರ ಪಹಣಿ ಪತ್ರಿಕೆ ದಾಖಲೆಯನ್ನು ತಂದಲ್ಲಿ ಚಿಕಿತ್ಸೆಯ ವೆಚ್ಚದಲ್ಲಿ ಇನ್ನಷ್ಟು ರಿಯಾಯಿತಿಯನ್ನು ನೀಡುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ: ಬಳ್ಳಾರಿ | ಮಹನೀಯರ ಜಯಂತಿ ಅದ್ದೂರಿ ಆಚರಣೆ: ಡಿಸಿ ಪ್ರಶಾಂತ್‌ ಮಿಶ್ರಾ

ಈ ವೇಳೆ ಆಸ್ಪತ್ರೆಯ ವೈದ್ಯೆ ಡಾ. ಅಂಜಲಿ, ಡಾ. ಸತೀಶ್ ಕುಮಾರ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X