ಬಳ್ಳಾರಿ | ಹಂಪಿ ಉತ್ಸವದಲ್ಲಿ ಹೊಸಬರಿಗೆ ಅವಕಾಶ ನೀಡುವಂತೆ ವಿ ಬಿ ಮಲ್ಲಪ್ಪ ಒತ್ತಾಯ

Date:

Advertisements

ಫೆಬ್ರವರಿಯ ಕೊನೆಯ ವಾರದಲ್ಲಿ ಜರುಗುವ ಹಂಪಿ ಉತ್ಸವ-2025ದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಸಾಮಾಜಿಕ ಹೋರಾಟಗಾರ ವಿ ಬಿ ಮಲ್ಲಪ್ಪ ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, “ವಿಜಯನಗರ ಜಿಲ್ಲೆಯ ಹಂಪಿ ಉತ್ಸವ ನಡೆಯುತ್ತಿರುವುದು ಈಗಾಗಲೇ ಬಹುತೇಕ ಎಲ್ಲರಿಗೂ ತಿಳಿದಿದೆ. ಅದಕ್ಕಾಗಿ ವಿಜಯನಗರ ಜಿಲ್ಲಾಡಳಿತ ಮತ್ತು ಅಲ್ಲಿನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಿದ್ಧತೆಗಳೂ ಕೂಡ ಭರದಿಂದ ಸಾಗಿವೆ. ಇದು ಸಂತಸದ ವಿಷಯ. ಆದರೆ, ಹಂಪಿ ಉತ್ಸವದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು” ಎಂದರು.

“ಹಂಪಿ ಉತ್ಸವ ಜನೋತ್ಸವವಾಗಬೇಕೆಂದು ಅದರ ರೂವಾರಿಗಳಾಗಿದ್ದ ಎಂ ಪಿ ಪ್ರಕಾಶ ಅವರ ಕನಸು ಮತ್ತು ಬಯಕೆಯಾಗಿತ್ತು. ಆ ಹಿನ್ನೆಲೆಯಲ್ಲಿ ಸ್ಥಳೀಯ ಕಲಾವಿದರಿಗೆ, ಸಾಹಿತಿಗಳಿಗೆ ಸಿಗಬೇಕಾಗಿದೆ. ವಿಚಿತ್ರವೆಂದರೆ ಹೆಚ್ಚಿನ ಆದ್ಯತೆ ಯಾವಾವುದೋ ಕಾರಣಗಳಿಂದಾಗಿ ಉತ್ಸವದಲ್ಲಿ ಭಾಗವಹಿಸಿದವರಿಗೆ ಪದೇ ಪದೆ ಅವಕಾಶ ಸಿಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

Advertisements

“ಅವಕಾಶ ಸಿಗದ ಇತರೆ ಕಲಾವಿದರು ಅವಕಾಶ ವಂಚಿತರಾಗುವಂತಾಗಿದೆ. ಇನ್ನೊಂದೆಡೆ ಕೆಲ ಲಾಭಿಕೋರ ಮನಸುಗಳು ಹಂಪಿ ಉತ್ಸವದ ನಿರಂತರ ಫಲಾನುಭವಿಗಳಾಗಿ ದಾಖಲೆ ಸ್ಥಾಪಿಸತೊಡಗಿದ್ದಾರೆ. ಈ ಪೈಕಿ ಸಂವೇದನಾರಹಿತ ಶಿಕ್ಷಕರೊಬ್ಬ ಒಂದು ದಶಕದ ಕಾಲ ಸತತವಾಗಿ ಕಾಯಂ ನಿರೂಪಕರಾಗಿ, ದಿನಕ್ಕೆ ಹತ್ತು ಸಾವಿರಗಳಂತೆ ಮೂರು ದಿನಗಳವರೆಗೆ ಗೌರವ ಧನ ಪಡೆದುಕೊಳ್ಳುತ್ತ ಎಲ್ಲ ಲಾಭ ಪಡೆದುಕೊಳ್ಳುತ್ತಿವುದು ಸರ್ವೇಸಾಮಾನ್ಯವಾಗಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮೂಲದ ಪರಮೇಶ್ವರ ಸೊಪ್ಪಿಮಠ ಎಂಬ ಶಿಕ್ಷರಿಗೆ ಇದು ಹೇಗೆ ಸಾಧ್ಯವಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ವಿಜಯನಗರ | ನಾಟಕ ಜನಸಾಮಾನ್ಯರ ಕಲೆ: ಕುಲಪತಿ ಪರಮಶಿವಮೂರ್ತಿ

“ಪರಮೇಶ್ವರ ಸೊಪ್ಪಿಮಠರಿಗಿಂತಲೂ ಅತ್ಯುತ್ತಮವಾಗಿ ಮಾತನಾಡುವ, ಕಾರ್ಯಕ್ರಮ ನಿರೂಪಿಸುವವರಿಗೆ ಕೊರತೆಯಿಲ್ಲ. ಆದರೂ ಸದಾ ನಿರೂಪಕನಾಗಿ ಅದರ ಲಾಭಪಡೆಯುತ್ತಿರುವುದರ ಬಗ್ಗೆ ನಮ್ಮ ಆಕ್ಷೇಪಗಳಿವೆ. ಈ ದಂಪತಿಯಿಬ್ಬರೂ ಶಿಕ್ಷಕರಾಗಿದ್ದು, ಸಬಲರಾಗಿದ್ದಾರೆ. ಆದರೆ ಆರ್ಥಿಕವಾಗಿ ಕಷ್ಟದಲ್ಲಿರುವ ಅರ್ಹರಿಗೆ ಅವಕಾಶ ಕಲ್ಪಿಸಿಕೊಡಬೇಕಾಗಿದೆ” ಎಂದು ಒತ್ತಾಯಿಸಿದರು.

“ಈ ಬಗ್ಗೆ ವಿಜಯನಗರ ಜಿಲ್ಲಾಡಳಿತ ಮತ್ತು ಹಂಪಿ ಉತ್ಸವದ ಉಸ್ತುವಾರಿಗಳು ಗಮನಹರಿಸಬೇಕು. ಇಂತಹ, ಲಾಭಿಗಳನ್ನು ತಡೆಯಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಗುವಂತಾಗಗಬೇಕು” ಎಂದು ಕಾರ್ಯಕ್ರಮ ಆಯೋಜಕರಲ್ಲಿ ಒತ್ತಾಯಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X