- ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು
ಬೆಂಗಳೂರಿನ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ಅಳಿಯನೊಬ್ಬ ಸ್ವಂತ ಅತ್ತೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ತನ್ನ ಹೆಂಡತಿಯನ್ನು ಮನೆಗೆ ಕಳುಹಿಸದಿದ್ದಕ್ಕೆ ಅತ್ತೆ ಜತೆಗೆ ಗಲಾಟೆಗೆ ಇಳಿದಿದ್ದ ಅಳಿಯ ಗಲಾಟೆ ನಡುವೆ ಚಾಕುವಿನಿಂದ ಇರಿದಿದ್ದಾನೆ. ಬುಧವಾರ ಈ ಘಟನೆ ನಡೆದಿದ್ದು, ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೀತಾ ಅಳಿಯನಿಂದ ಹಲ್ಲೆಗೊಳಗಾದ ಮಹಿಳೆ. ಮನೋಜ್ ಬಂಧಿತ ವ್ಯಕ್ತಿ. ಆರೋಪಿಯೂ ಕಳೆದ ಮೂರು ವರ್ಷಗಳ ಹಿಂದೆ ವರ್ಷಿತಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ತದನಂತರ ಗಂಡ ಕೆಲಸ ಮಾಡುತ್ತಿಲ್ಲ ಎಂದು ವರ್ಷಿತಾ ತವರು ಮನೆ ಸೇರಿದ್ದಳು. ಹಾಗಾಗಿ, ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಮನೋಜ್ ಅತ್ತೆ ಮನೆಗೆ ಬಂದಿದ್ದನು.
ಈ ವೇಳೆ ಅತ್ತೆ ಮತ್ತು ಅಳಿಯನ ಮಧ್ಯೆ ಗಲಾಟೆ ನಡೆದಿದೆ. ಜಗಳದ ನಡುವೆಯೇ ಅತ್ತೆಗೆ ಅಳಿಯ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿದ್ಯಾರ್ಥಿನಿ ಸಾವು | ಬಸ್ ಚಾಲಕರಿಗೆ ನಿರ್ದೇಶನ ನೀಡಿದ ಕೆಎಸ್ಆರ್ಟಿಸಿ
ಬೆಂಗಳೂರು | ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತ ಸಾವು
ಬೆಂಗಳೂರಿನಲ್ಲಿ ಜೂನ್ 13ರಂದು ಭಾರೀ ಮಳೆಯಾಗಿದೆ. ನಗರದ ಕಾಡುಗೋಡಿ ಸಮೀಪದ ಚನ್ನಸಂದ್ರದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಓರ್ವ ರೈತ ಮತ್ತು ಹಸು ಮೃತಪಟ್ಟ ಘಟನೆ ನಡೆದಿದೆ.
ಚನ್ನಸಂದ್ರ ನಿವಾಸಿ ಕೃಷ್ಣಪ್ಪ (55) ಮೃತ ರೈತ. ರಾತ್ರಿ ಸುರಿದ ಮಳೆಗೆ ವಿದ್ಯುತ್ ವೈರ್ ಕಟ್ ಆಗಿ ಬಿದಿತ್ತು. ಜೂನ್ 14ರಂದು ಬೆಳಗ್ಗೆ ಮೇವಿಗೆಂದು ಕೃಷ್ಣಪ್ಪ ತನ್ನ ಹಸುವನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ, ವಿದ್ಯುತ್ ತಗುಲಿ ರೈತ ಮತ್ತು ಹಸು ಮೃತಪಟ್ಟಿದೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.