ನಿತ್ಯದ ಆದಾಯದಲ್ಲಿ ಶೇ.50ಕ್ಕಿಂತ ಹೆಚ್ಚಿನ ತೆರಿಗೆ ಸರ್ಕಾರಕ್ಕೆ ಪಾವತಿಸಬೇಕು : ವ್ಯಕ್ತಿಯೊಬ್ಬರ ಅಳಲು, ಟ್ವೀಟ್‌ ವೈರಲ್

Date:

Advertisements

ಬೆಂಗಳೂರಿನ ವ್ಯಕ್ತಿಯೊಬ್ಬರು ತಾವು ನಿತ್ಯ ದುಡಿಯುವ ಆದಾಯದಲ್ಲಿ ಶೇ.50ಕ್ಕಿಂತ ಹೆಚ್ಚಿನ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ವೈರಲ್‌ ಆಗಿದ್ದು, ಹಲವರು ಕಮೆಂಟ್‌ ಮಾಡುತ್ತಿದ್ದಾರೆ.

ಫ್ಲಿಪ್‌ಕಾರ್ಟ್‌ನ ವರ್ಗ ವ್ಯವಸ್ಥಾಪಕ ಸಂಚಿತ್ ಗೋಯಲ್ ಎಂಬುವವರು ಜುಲೈ 15ರಂದು ಟ್ವೀಟ್‌ ಮಾಡಿದ್ದು, “ಇಂದು ನಾನು ₹5000 ಸಂಪಾದಿಸಿದ್ದೇನೆ. ಸರ್ಕಾರಕ್ಕೆ 30% ತೆರಿಗೆ ನೀಡಬೇಕು. ನಾನು ಉಳಿದ ಹಣದಿಂದ ಕೆಲವು ಕೆಫೀನ್ ಹೊಂದಿರುವ ಪಾನೀಯ ಖರೀದಿಸಲು ಯೋಚಿಸಿದೆ ಮತ್ತು ತೆರಿಗೆಯಾಗಿ 28% ನೀಡಬೇಕಾಯಿತು. ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಿ ನನ್ನ ಆದಾಯದ ಶೇ. 50ಕ್ಕಿಂತ ಹೆಚ್ಚು ಹಣವನ್ನು ಸರ್ಕಾರಕ್ಕೆ ತೆರಿಗೆಯಾಗಿ ಪಾವತಿಸಬೇಕು ಎಂಬುದನ್ನು ನಾನು ಅರಿತುಕೊಂಡೆ” ಎಂದು ಬರೆದುಕೊಂಡಿದ್ದಾರೆ.

ಅವರ ಟ್ವೀಟ್‌ಗೆ 595.4K ವೀಕ್ಷಣೆಗಳು, 8940 ಲೈಕ್‌ಗಳು ಮತ್ತು 2,164 ಜನ ರೀಟ್ವೀಟ್‌ ಮಾಡಿದ್ದಾರೆ. ಹಲವು ಜನ ಟ್ವೀಟ್‌ಗೆ ಕಾಮೆಂಟ್‌ ಮಾಡಿದ್ದಾರೆ.

Advertisements

“ಕೃಷಿಯಿಂದ ಹಣ ಸಂಪಾದಿಸಿ ಮತ್ತು ತೆಂಗಿನಕಾಯಿ ನೀರನ್ನು ಕುಡಿಯಿರಿ. 0% ತೆರಿಗೆ” ಎಂದು ಹರಿಪ್ರಸಾದ್ ಸಲಹೆ ನೀಡಿದ್ದಾರೆ.

“ತೆರಿಗೆ ಆದಾಯದ ಹೆಚ್ಚಿನ ಭಾಗವು ಮೂಲಸೌಕರ್ಯಗಳನ್ನು ನಿರ್ಮಿಸುವುದಕ್ಕಿಂತ ಹೆಚ್ಚಾಗಿ ಸರ್ಕಾರಿ ನೌಕರರ ಸಂಬಳ, ಪಿಂಚಣಿ ಮತ್ತು ಅನಗತ್ಯ ಉಚಿತಗಳ ಕಡೆಗೆ ಹೋಗುತ್ತಿದೆ ಎಂದು ತಿಳಿದಾಗ ರಕ್ತ ಕುದಿಯುತ್ತದೆ” ಎಂದು ಸತೀಶ್ ರೆಡ್ಡಿ ಎಂಬುವವರು ಬರೆದುಕೊಂಡಿದ್ದಾರೆ.

“ಒಬ್ಬ ವ್ಯಕ್ತಿಗೆ ₹10 ಲಕ್ಷ ಪಿಎಗಿಂತ ಹೆಚ್ಚಿನ ಆದಾಯದ ಮೇಲೆ 30% ತೆರಿಗೆ ಮತ್ತು ಅದರ ಅನುಪಾತದಿಂದ ಉಳಿಸಲು ವಿಧಾನಗಳಿವೆ. ಭಾರತದಲ್ಲಿ ತೆರಿಗೆಯ ಹೊರೆಯು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಕಡಿಮೆಯಾಗಿದೆ” ಎಂದು ಶಶಾಂಕ ತಿವಾರಿ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಚಿತ್ ಗೋಯಲ್, “ನಾವು ದೇಶಗಳನ್ನು ಹೋಲಿಸುತ್ತಿದ್ದರೆ, ಬಹಳಷ್ಟು ದೇಶಗಳು ವಿಧಿಸುವ ತೆರಿಗೆಗಳಿಗೂ ಆ ರೀತಿಯ ಸೌಲಭ್ಯಗಳನ್ನು ನೀಡುತ್ತವೆ. ಯುಎಇಯಂತಹ ದೇಶಗಳು ಯಾವುದೇ ತೆರಿಗೆಗಳಿಲ್ಲದೆ ಉತ್ತಮ ಸೌಲಭ್ಯಗಳನ್ನು ನೀಡುತ್ತವೆ. ನಾನು ತೆರಿಗೆ ಪಾವತಿಸಲು ಸಿದ್ಧ. ಆದರೆ ನನಗೆ ಉತ್ತಮ ಗಾಳಿ, ಆಹಾರ ಮತ್ತು ನೀರು ಬೇಕು” ಎಂದು ಹೇಳಿದ್ದಾರೆ.

“ಇದು ಇಂದಿನ ಮಧ್ಯಮ ವರ್ಗದವರ ನೋವು. ನೀವು ಕಾರನ್ನು ಖರೀದಿಸಿದರೆ 28% ಜಿಎಸ್‌ಟಿ ಮಾತ್ರವಲ್ಲದೆ 22% ಸೆಸ್ ಕೂಡ ಇರುತ್ತದೆ. ಜೊತೆಗೆ 10% ರಸ್ತೆ ತೆರಿಗೆ. ಸರಿಸುಮಾರು 150% ಇಂಧನ ತೆರಿಗೆ ಮತ್ತು 2.5% ಪ್ರತಿ ಕಿಮೀ ಟೋಲ್ ತೆರಿಗೆ” ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

“ರಸ್ತೆ ಬದಿಯಲ್ಲಿ ಕಿರಾಣಿ ಅಂಗಡಿಯನ್ನು ಪ್ರಾರಂಭಿಸಿ, ಜ್ಯೋತಿಷಿಯಾಗು ಅಥವಾ ಡೇ ಕೇರ್ ಪ್ರಾರಂಭಿಸಿ. ಎಲ್ಲ ತೆರಿಗೆ ಮುಕ್ತ ಆದಾಯವಿರಲಿದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ | ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಕ್ರಮ

“ಇದು ನಿಜವಾಗಿಯೂ ನೋವಿನ ಸಂಗತಿಯಾಗಿದೆ, ನಾವು 30% ತೆರಿಗೆಯನ್ನು ಪಾವತಿಸುತ್ತೇವೆ ಮತ್ತು ನಾವು ಏನು ಪಡೆಯುತ್ತೇವೆ. ನೀವು ಖರೀದಿಸುವ ಪ್ರತಿಯೊಂದಕ್ಕೂ ತೆರಿಗೆ ಪಾವತಿಸಬೇಕು. ನೀವು ನಿಮ್ಮ ಕೆಲಸವನ್ನು ಕಳೆದುಕೊಂಡರೆ, ಸರ್ಕಾರದ ಜವಾಬ್ದಾರಿ ಇಲ್ಲ. ನೀವು ಖರೀದಿಸುವ ಪ್ರತಿಯೊಂದಕ್ಕೂ ಜಿಎಸ್‌ಟಿ ಇದೆ. ಸರ್ಕಾರವು ಉತ್ತಮ ಆರೋಗ್ಯ ಸೇವೆಯನ್ನು ನೀಡಲು ಸಾಧ್ಯವಿಲ್ಲ. ಮೆಡಿಕ್ಲೈಮ್ ಪಡೆಯಿರಿ. ಹೆದ್ದಾರಿಯಲ್ಲಿ ಸಂಚಾರ ಮಾಡಲು ಟೋಲ್ ಪಾವತಿಸಬೇಕು” ಎಂದು ಯುವರಾಜಸಿಂಹ ಜಡೇಜಾ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X