ಆದಾಯ ಹೆಚ್ಚಳಕ್ಕೆ ಕಟ್ಟಡಗಳನ್ನು ಬಾಡಿಗೆಗೆ ನೀಡಲು ಯೋಜಿಸಿದ ರಸ್ತೆ ಸಾರಿಗೆ ನಿಗಮಗಳು

Date:

Advertisements
  • ಕೆಎಸ್‌ಆರ್‌ಟಿಸಿಯ 1,640 ಅಂಗಡಿ ಮತ್ತು ಕಟ್ಟಡಗಳ ಪೈಕಿ 360 ಖಾಲಿ ಇವೆ
  • ಅಂಗಡಿ ಮತ್ತು ಕಟ್ಟಡಗಳ ಬಾಡಿಗೆಯು ಸಾರಿಗೆ ನಿಗಮಗಳಿಗೆ ಆದಾಯದ ಪ್ರಮುಖ ಮೂಲ

ರಾಜ್ಯಾದ್ಯಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಗೂ ಟ್ರಾಫಿಕ್ ಟ್ರಾನ್ಸಿಟ್ ಮ್ಯಾನೇಜ್‌ಮೆಂಟ್ ಸೆಂಟರ್‌ಗಳ (ಟಿಟಿಎಂಸಿ) ವಾಣಿಜ್ಯ ಸಂಕೀರ್ಣಗಳು ಮತ್ತು ಕಟ್ಟಡಗಳಲ್ಲಿ ಅನೇಕ ಅಂಗಡಿಗಳು ಖಾಲಿ ಇದ್ದು, ಇವುಗಳನ್ನು ಬಾಡಿಗೆಗೆ ನೀಡಲು ನಿಗಮಗಳು ಯೋಜಿಸಿವೆ ಎಂದು ತಿಳಿದುಬಂದಿದೆ.

ಹಣದ ಕೊರತೆಯಿರುವ ಹಿನ್ನೆಲೆ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಸ್ ನಿಗಮಗಳು ಅಂಗಡಿಗಳು ಮತ್ತು ಕಟ್ಟಡಗಳನ್ನು ಬಾಡಿಗೆಗೆ ನೀಡಲು ಯೋಜನೆ ಪ್ರಾರಂಭಿಸಿವೆ.

ಕೆಎಸ್‌ಆರ್‌ಟಿಸಿಯ 1,640 ಅಂಗಡಿ ಮತ್ತು ಕಟ್ಟಡಗಳ ಪೈಕಿ 360 ಖಾಲಿ ಇವೆ. ಬಿಎಂಟಿಸಿಯ 363 ಕಟ್ಟಡ ಮತ್ತು ಅಂಗಡಿ ಇದ್ದು, ಅವುಗಳಲ್ಲಿ 105 ಖಾಲಿ ಇವೆ. ಕೆಕೆಆರ್‌ಟಿಸಿಯಲ್ಲಿ 988 ಅಂಗಡಿ ಮತ್ತು ಕಟ್ಟಡಗಳಿದ್ದು, ಈ ಪೈಕಿ 222 ಖಾಲಿ ಇವೆ. ಆದರೆ, ಎನ್‌ಡಬ್ಲೂಕೆಎಸ್‌ಆರ್‌ಟಿಸಿ ಅಡಿಯಲ್ಲಿ ಯಾವುದೇ ಅಂಗಡಿಗಳು ಮತ್ತು ಕಟ್ಟಡಗಳು ಖಾಲಿ ಇಲ್ಲ ಎಂದು ರಾಜ್ಯ ಸಾರಿಗೆ ಬಸ್ ನಿಗಮದ ಮೂಲಗಳು ತಿಳಿಸಿವೆ.

Advertisements

ಅಂಗಡಿಗಳು ಮತ್ತು ಕಟ್ಟಡಗಳ ಬಾಡಿಗೆಯು ಸಾರಿಗೆ ನಿಗಮಗಳಿಗೆ ಆದಾಯದ ಪ್ರಮುಖ ಮೂಲವಾಗಿದೆ. ಈ ಜಾಗಗಳನ್ನು ಬಾಡಿಗೆಗೆ ನೀಡಲು ಆನ್‌ಲೈನ್‌ನಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ನೇಹಿತನ ಪ್ರೀತಿಗೆ ಹತ್ಯೆಯಾದ ಮಾರ್ವೇಶ್

“2022-23ರಲ್ಲಿ ಅಂಗಡಿ, ಕಟ್ಟಡ ಹಾಗೂ ಕಾರ್ಗೋ ಬಾಡಿಗೆ ನೀಡುವ ಮೂಲಕ ಕೆಎಸ್‌ಆರ್‌ಟಿಸಿ ₹234 ಕೋಟಿ ಗಳಿಸಿದೆ. ಖಾಲಿ ಇರುವ ಅಂಗಡಿ, ಕಟ್ಟಡಗಳನ್ನು ಬಾಡಿಗೆಗೆ ನೀಡಿದರೆ ಆದಾಯ ಹೆಚ್ಚುತ್ತದೆ” ಎಂದು ಮೂಲಗಳು ತಿಳಿಸಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X