ಬೀದರ್‌ | ವಿವಿಧೆಡೆ ದಾದಾಸಾಹೇಬ್‌ ಕಾನ್ಸಿರಾಮ್‌ ಜನ್ಮದಿನ ಆಚರಣೆ

Date:

Advertisements

ಬೀದರ್ ನಗರದ ನಾಗಲೋಕಾ ಬೌದ್ದ ವಿಹಾರ ಗಾಂಧಿ ಗಂಜ್‌ನಲ್ಲಿ ಬಿಎಸ್‌ಪಿ ಪಕ್ಷದ ಸಂಸ್ಥಾಪಕ ದಾದಾಸಾಹೇಬ್‌ ಕಾನ್ಸಿರಾಮ್‌ ಅವರ 91ನೇ ಜನ್ಮದಿನ ಆಚರಿಸಲಾಯಿತು.

ಭೀಮ ಆರ್ಮಿ ಗೌರವಾಧ್ಯಕ್ಷ ಘಾಳೆಪ್ಪಾ ಲಾಧಾಕರ್ ಮಾತನಾಡಿ, ʼದೊಡ್ಡ ಗುರಿ ದೊಡ್ಡ ತ್ಯಾಗವನ್ನೇ ಬಯಸುತ್ತದೆ, ದೊಡ್ಡದನ್ನು ಸಾಧಿಸಲು ದೊಡ್ಡ ತ್ಯಾಗಕ್ಕೆ ಸಿದ್ದರಾಗಿʼ ಎಂದು ಕಾನ್ಸಿರಾಮ್‌ ಅವರ ಸಂದೇಶ ಪಾಲಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭೀಮ ಆರ್ಮಿ ಬೀದರ್ ಜಿಲ್ಲಾ ಅಧ್ಯಕ್ಷ ಅಂಬರೀಷ್ ಕುದುರೆ ಸೇರಿದಂತೆ ಪ್ರಮುಖರಾದ ಗೌತಮ ಬಗದಲಕರ್, ಹರ್ಷಿತ್ ದಾಂಡೆಕರ್, ಅಖಿಲೇಶ್ ಸಾಗರ್, ಮಹೇಶ್ ಬುಧೇರಾ, ರವಿ ಮೊರೆ, ಜೈಭೀಮ್ ಜ್ಯೋತಿ,‌ ತುಕಾರಾಂ ಫುಲೆಕರ್ ಮತ್ತಿತರರು ಪಾಲ್ಗೊಂಡಿದ್ದರು.

Advertisements

ಜನರ ಧ್ವನಿ ಸಂಘಟನೆಯಿಂದ ಕಾನ್ಸಿರಾಮ್ ಜಯಂತಿ ಆಚರಣೆ :

WhatsApp Image 2025 03 16 at 12.31.06 PM

ಜನರ ಧ್ವನಿ ಸಂಘಟನೆಯ ವತಿಯಿಂದ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ದಾದಾ ಸಾಹೇಬ್ ಕಾನ್ಸಿರಾಮ್ ಅವರ 91ನೇ ಜಯಂತಿಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಜನರ ಧ್ವನಿ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಕುಶ ಗೋಖಲೆ‌ ಹಾಗೂ ಸಂಘಟನೆಯ ಹಿರಿಯ ಮುಖಂಡರಾದ ತಿಪ್ಪಣ್ಣ ವಾಲಿ, ಜಿಲ್ಲಾಧ್ಯಕ್ಷ ರಾಜಕುಮಾರ್ ಸಿಂಧೆ, ಚಿಂಚೋಳಿ ತಾಲ್ಲೂಕಾಧ್ಯಕ್ಷ ಕೆ.ಮಹೇಶ‌‌, ಬಸವಕಲ್ಯಾಣ ತಾಲೂಕಾಧ್ಯಕ್ಷ ಮಾರುತಿ ಕಾಂಬಳೆ, ಮಾದಿಗ ದಂಡೋರ ಹೋರಾಟ ಸಮಿತಿ ಬೀದರ್ ದಕ್ಷಿಣ ಅಧ್ಯಕ್ಷ ವಿರಶೆಟ್ಟಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಔರಾದ್‌ನಲ್ಲಿ ಕಾನ್ಸಿರಾಮ್‌ ಜಯಂತಿ ಆಚರಣೆ :

WhatsApp Image 2025 03 16 at 12.50.27 PM 1

ಬಹುಜನ ಸಮಾಜ ಪಾರ್ಟಿಯ ಸಂಸ್ಥಾಪಕರಾದ ದಾದಾ ಸಾಹೇಬ್‌ ಕಾನ್ಸಿರಾಮ್‌ ಅವರ ಅನುಯಾಯಿಗಳು ಔರಾದ್‌ನಲ್ಲಿ ಶನಿವಾರ ಕಾನ್ಸಿರಾಮ್‌ ಅವರ ಜಯಂತಿ ಆಚರಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರರಾದ ರಾಹುಲ್‌ ಖಂದಾರೆ, ನಂದಾದೀಪ ಬೋರಾಳೆ, ಯಶವಂತ್‌ ಬೀಗಾಂವಕರ್‌, ರಮೇಶ ಬೀಗಾಂವಕರ್‌, ಪಂಡರಿ ಕಸ್ತೂರೆ, ರಾಮ ಗೋಡಬೋಲೆ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X