ಬೀದರ್‌ | ಶಾಂತರಸ ಕನ್ನಡದ ಗಜಲ್ ಗಾರುಡಿಗ

Date:

Advertisements

ಉರ್ದುವಿನ ಕಾವ್ಯರಾಣಿ ಗಜಲ್ ಪ್ರಕಾರವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಶಾಂತರಸರು ಕನ್ನಡದ ಗಜಲ್ ಗಾರುಡಿಗರಾಗಿದ್ದಾರೆ ಎಂದು ರಾಂಪೂರ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ರೇವಣಸಿದ್ದಪ್ಪ ದೊರೆ ಹೇಳಿದರು.

ಬಸವಕಲ್ಯಾಣದ ನಿವೃತ್ತ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಂಡಿದ್ದ ಶಾಂತರಸರ ಜನ್ಮಶತಮಾನೋತ್ಸವ ಪ್ರಯುಕ್ತ ಶಾಂತರಸರ ಗಜಲ್, ಕತೆ, ಕಾದಂಬರಿ ಕುರಿತ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.

ʼಬೇರೆ ಭಾಷೆಯ ಕಾವ್ಯ ಪ್ರಕಾರವಾದ ಗಜಲ್ ಕನ್ನಡಕ್ಕೆ ಪರಿಚಯಿಸಿದ ಹೆಗ್ಗಳಿಕೆ ಶಾಂತರಸರದು. ಸ್ವಾತಂತ್ರ್ಯ ಚಳುವಳಿ, ಏಕೀಕರಣ, ವಿಮೋಚನಾ ಚಳವಳಿ ಸೇರಿ ಈ ನೆಲದ ಜನ ಸಮುದಾಯದ ಎದುರಿಸಿದ ಬಿಕ್ಕಟ್ಟುಗಳನ್ನು ಅವರ ಕತೆ, ಕಾದಂಬರಿಗಳಲ್ಲಿ ವಸ್ತುವಾಯಿತು. ಬದುಕಿನ ಉತ್ಕಟ ಪ್ರೇಮ, ನಶ್ವರತೆ, ಜೀವನದ ಚಲನೆ ಗಜಲ್ ಗಳ ವಸ್ತುವಾಯಿತುʼ ಎಂದರು.

Advertisements

ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಶಾಂತರಸರು ಭಾಲ್ಕಿ ಹಿರೇಮಠದಲ್ಲಿದ್ದು ವ್ಯಾಸಂಗ ಮಾಡಿದ್ದರು. ವಚನ ಸಾಹಿತ್ಯ ಹಾಗೂ ಚೆನ್ನಬಸವ ಪಟ್ಟದ್ದೇವರ ಪ್ರಭಾವ ಅವರ ಮೇಲೆ ಆಗಿತ್ತು. ಅವರು ಬರೆದ ʼಸಣ್ಣ ಗೌಡಸಾನಿʼ ನಾಟಕ ಊಳಿಗಮಾನ್ಯ ವ್ಯವಸ್ಥೆಯ ಕರಾಳ ಮುಖ ಪರಿಚಯಿಸುತ್ತದೆʼ ಎಂದರು.

ರಂಗಕರ್ಮಿ ಉಮೇಶ ಪಾಟೀಲ ಶಾಂತರಸರ ‘ಗೋದಾನ’ ಕತೆಯನ್ನು ನಾಟಕೀಯವಾಗಿ ವಾಚನ ಮಾಡಿದರು. ನಾಗೇಂದ್ರ ಬಿರಾದಾರ,ನಿತಿನ್ ನಿಲಕಂಠೆ ಗಜಲ್ ಗಾಯನ ಮಾಡಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ವನ್ಯಜೀವಿ ಪ್ರೀತಿಸುವ ʼಸ್ವಾಭಿಮಾನಿ ಗೆಳೆಯರುʼ

ನಿವೃತ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಸವಣಪ್ಪಾ ನೆಲೋಗಿ, ಭೀಮಾಶಂಕರ ಮಾಶಾಳಕರ, ಪ್ರೇಮಸಾಗರ ಪಾಟೀಲ, ಚಂದ್ರಕಾಂತ ಅಕ್ಕಣ್ಣ, ಸಂಜುಕುಮಾರ ನಡುಕರ, ರಾಜಶೇಖರ ಬಿರಾದಾರ, ಧರ್ಮಣ್ಣ ಚಿತ್ತಾ, ಅಂಬಾರಾಯ ಸೈದಾಪುರೆ, ಶಿವಪುತ್ರಪ್ಪ ಸಂಗನಬಸವ , ಶಿವಪುತ್ರ ಮಿರಾಜದಾರ, ಬಸವರಾಜ ಮಠಪತಿ, ಮಾಣಿಕಪ್ಪ ಸಂಗನಬಟ್ಟೆ, ನಾಗಪ್ಪ ನಿಣ್ಣೆ, ಮಲ್ಲಿಕಾರ್ಜುನ ಛೆತ್ರೆ , ನಿವರ್ತಿ ಜಾಧವ್ ಮತ್ತಿತರರಿದ್ದರು. ಶರಣಬಸವ ಬಿರಾದಾರ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಶಾಲಿವಾನ ಕಾಕನಾಳೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X