ಸಂಸತ್ತಿನಲ್ಲಿ ಬಹುಮತ ಪಡೆದು ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ. ಭಾರತೀಯ ಮುಸ್ಲಿಮರ ಅಸ್ತಿತ್ವ, ಅಸ್ಮಿತೆ ಹಾಗೂ ಬದುಕಿನ ಮೇಲೆ ಫ್ಯಾಸಿಸ್ಟ್ ಸರ್ಕಾರ ನಡೆಸುತ್ತಿರುವ ಆಕ್ರಮಣದ ಮುಂದುವರಿಕೆಯಾಗಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಹೇಳಿದ್ದಾರೆ.
ʼಮುಸ್ಲಿಮರ ಆಸ್ತಿಗಳನ್ನು ಕಸಿದುಕೊಳ್ಳುವ ಜೊತೆಗೆ ಅಲ್ಪಸಂಖ್ಯಾತರ ವರ್ಗಗಳಾದ ಬೌದ್ಧ ಮತ್ತು ಕ್ರಿಶ್ಚಿಯನರ್ ಆಸ್ತಿಗಳನ್ನು ಕಬಳಿಸುವ ಹುನ್ನಾರ ಮುಂದುವರಿಯಲಿದೆ. ಎಂದಿನಂತೆ ಸೋಗಲಾಡಿ ಸೆಕ್ಯೂಲರ್ ಪಕ್ಷಗಳಾದ ಜೆಡಿಎಸ್ನಂತಹ ಪಕ್ಷಗಳು ಬಿಜೆಪಿಯ ಆಕ್ರಮಣಕ್ಕೆ ಕೈಜೋಡಿಸಿವೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಬಿಹಾರದ ಬೌದ್ಧಗಯಾದ ಮಹಾವಿಹಾರವನ್ನು ಹಿಂದೂಗಳ ವಶದಲ್ಲಿದೆ. ಇತ್ತೀಚೆಗೆ ಆರ್ಎಸ್ಎಸ್ ಮುಖವಾಣಿ ಪತ್ರಿಕೆಯು ಕ್ರಿಶ್ಚಿಯನರ್ ಚರ್ಚ್ಗಳ ಆಸ್ತಿ ಮೇಲೆ ವರದಿ ಪ್ರಕಟಿಸಿದೆ. ಇದು ಕೇವಲ ಅಲ್ಪಸಂಖ್ಯಾತರ ವಿರೋಧಿಯಲ್ಲ, ಸಂಪೂರ್ಣ ಸಂವಿಧಾನ ವಿರೋಧಿ ಕ್ರಮವಾಗಿದೆʼ ಎಂದರು.
ʼಭಾರತೀಯ ಮುಸ್ಲಿಮರ ಎಲ್ಲಾ ʼಉಮ್ಮೀದ್ʼ ಅನ್ನು ಕಸಿಯುವ ವಕ್ಫ್ ತಿದ್ದುಪಡಿ ಕಾಯ್ದೆ-2025 ಅನ್ನು ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಅಲ್ಪಸಂಖ್ಯಾತರ ಹೋರಾಟಕ್ಕೆ ಬೆಂಬಲಿಸುತ್ತೇವೆʼ ಎಂದು ತಿಳಿಸಿದ್ದಾರೆ.