ಬೀದರ್‌ | ʼಸಂವಿಧಾನ ಯುವಯಾನʼ ಬೈಕ್‌ ಜಾಥಾಕ್ಕೆ ಸ್ವಾಗತ

Date:

Advertisements

ʼದೇಶಪ್ರೇಮಿ ಯುವಾಂದೋಲನʼ ಸಂಘಟನೆಯಿಂದ ರಾಜ್ಯಾದ್ಯಂತ ಏಪ್ರಿಲ್ 14 ರಿಂದ 26ರವೆಗೆ ಹಮ್ಮಿಕೊಂಡಿರುವ ʼಸಂವಿಧಾನ ಯುವಯಾನʼ ಬೈಕ್‌ ಜಾಥಾ ಮಂಗಳವಾರ ಬೀದರ್ ನಗರ ತಲುಪಿತು. ನಗರದ ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದಲ್ಲಿ ಸ್ವಾಗತಿಸಲಾಯಿತು.

ಬೀದರ್ ಬಸವ ಮಂಟಪದ ಮಾತೆ ಸತ್ಯದೇವಿ ಮಾತಾಜಿ ಅವರು ಮಾತನಾಡಿ, ʼಯುವಕರು ದೇಶ ಕಟ್ಟುವ ಹಾಗು ಜನರಲ್ಲಿ ಜಾಗೃತಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದುʼ ಎಂದು ಶುಭ ಹಾರೈಸಿದರು.

ಮುಖಂಡ ಶಿವಯ್ಯ ಸ್ವಾಮಿ ಅವರು ಮಾತನಾಡಿ, ʼಸಂವಿಧಾನದ ಆಶಯದಂತೆ ನಾವೆಲ್ಲರೂ ನಮ್ಮ ಹಕ್ಕು ಪಡೆಯಬೇಕು, ಕರ್ತವ್ಯ ನಿರ್ವಹಿಸಬೇಕು. ಎಲ್ಲರಿಗೂ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡಬೇಕು. ಸರ್ಕಾರ ಗುತ್ತಿಗೆ ಎಂಬ ಆಧುನಿಕ ಜೀತ ಪದ್ಧತಿಯನ್ನು ರದ್ದುಗೊಳಿಸಿ ಸುಭದ್ರ ಉದ್ಯೋಗ ಕೊಡುವ ಕೆಲಸ ಸರ್ಕಾರ ಮಾಡಬೇಕುʼ ಎಂದು ನುಡಿದರು.

Advertisements

ಪ್ರಮುಖರಾದ ಓಂಪ್ರಕಾಶ ರೊಟ್ಟೆ, ಶ್ರೀಕಾಂತ ಸ್ವಾಮಿ, ನಿಜಾಮುದ್ದೀನ್, ರಮೇಶ್ ಮಠಪತಿ , ಜಗದಿಶ್ವರ ಬಿರಾದಾರ, ಮಹೇಶ್ ಗೋರನಾಳಕರ್, ಗುರುದಾಸ್ ಅಮದಲಪಾಡ್ ಅವರು ಜಾಥಾ ಉದ್ದೇಶಿಸಿ ಮಾತನಾಡಿದರು.

ಕಲಬುರಗಿ ಜಿಲ್ಲೆಯ ವಾಡಿಯಿಂದ ಏ.14ರಂದು ಆರಂಭಗೊಂಡಿರುವ ಬೈಕ್ ಯಾತ್ರೆ ಏ.26ರಂದು ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ಸಮಾವೇಶದಂದು ಮುಕ್ತಾಯಗೊಳ್ಳಲಿದೆ.

ಧರ್ಮಕ್ಕಿಂತ ದೇಶ ಮುಖ್ಯ : ಬಸವಲಿಂಗ ಪಟ್ಟದ್ದೇವರು

ಏಪ್ರಿಲ್ 26 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಂವಿಧಾನ ಸಂರಕ್ಷಣಾ ಸಮಾವೇಶ ಪ್ರಚಾರದ ಸಂವಿಧಾನ ಯುವಯಾನ ತಂಡ ಭಾಲ್ಕಿ ತಲುಪಿತು. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಜಾಥಾಕ್ಕೆ ಸ್ವಾಗತಿಸಿದರು.

WhatsApp Image 2025 04 16 at 8.08.46 AM
ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ʼಸಂವಿಧಾನ ಯುವಯಾನʼ ಜಾತಾವನ್ನು ಸ್ವಾಗತಿಸಿದರು.

ಧರ್ಮಕ್ಕಿಂತ ದೇಶ ಮುಖ್ಯ, ನಮ್ಮ ದೇಶದ ಸಂಸ್ಕೃತಿ, ಧರ್ಮ ಎಲ್ಲವು ಉಳಿಯಬೇಕಾದರೆ ಸಂವಿಧಾನ ರಕ್ಷಣೆ ಆಗಬೇಕು. ಈ ಬೈಕ್ ಜಾಥಾ ಸಮಾವೇಶ ಬಹಳ ಮುಖ್ಯ, ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕುʼ ಡಾ. ಬಸವಲಿಂಗ ಪಟ್ಟದ್ದೇವರು ಕರೆ ನೀಡಿದರು.

ಹಿರೇಮಠದ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಭಾರತೀಯ ಸಂವಿಧಾನದ ಆಶಯಗಳು ವಚನಗಳಲ್ಲಿ ಕಾಣುತ್ತೇವೆ, ಹಾಗೆಯೇ ಶರಣರ ವಚನಗಳ ಮೌಲ್ಯಗಳು ಸಂವಿಧಾನದಲ್ಲಿ ಕಾಣುತ್ತವೆ. ಸಂವಿಧಾನ ರಕ್ಷಣೆ ಮಾಡುವ ಈ ಬೈಕ್‌ ಜಾಥಾ ಅಭಿಯಾನ ಮತ್ತು ಸಮಾವೇಶ ಯಶಸ್ವಿಯಾಗಲಿʼ ಎಂದು ಶುಭ ಹಾರೈಸಿದರು.

ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮುಖಂಡರಾದ ಶಶಿಧರ್‌ ಕೋಸಂಬೆ ಸೇರಿದಂತೆ ಮತ್ತಿತರರು ಜಾಥಾಕ್ಕೆ ಶುಭ ಕೋರಿ ಬೀಳ್ಕೊಟ್ಟರು.

ಸಂವಿಧಾನ ಯುವಯಾನ ತಂಡದ ಪ್ರಮುಖರಾದ ಸರೋವರ ಬೆಂಕಿಕೆರೆ, ಹೇಮಂತ್‌ ಸಕಲೇಶಪುರ, ರಾಜೇಂದ್ರ ರಾಜವಾಳ, ದುರ್ಗೇಶ ಬರಗೂರ್‌, ಮರಿಸ್ವಾಮಿ,ಟೋಪಣ್ಣ ಕೋಮಟೆ, ಯಮುನಾ, ರವಿ ನವಲಹಳ್ಳಿ, ಶರಣು, ಗೀತಾ ಹೊಸಮನಿ, ಕೌಶಲ್ಯ, ರವಿ ಯಮನೂರ್‌, ಶಾಂತಾ, ಉಮೇಶ, ಚನ್ನಕೇಶವ್‌ ಅವರು ಜಾಥಾ ಕೈಗೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X