ಚಾಮರಾಜನಗರ | ಅಯ್ಯನ್ ಕಾಳಿಯವರ 160ನೇ ಜನ್ಮ ದಿನಾಚರಣೆ

Date:

Advertisements

ದಲಿತ ಚಳುವಳಿಯ ನಾಯಕ ಅಯ್ಯನ್ ಕಾಳಿ ಅವರ 160ನೇ ಜನ್ಕ ದಿನಾಚರಣೆಯನ್ನು ಗುಂಡ್ಲುಪೇಟೆಯಲ್ಲಿ ದಲಿತ ಸಾಹಿತ್ಯ ಪರಿಷತ್ತು ಆಚರಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಷತ್‌ನ ತಾಲೂಕು ಅಧ್ಯಕ್ಷ ಯೋಗೇಶ ಕೆ, “1863 ಆಗಸ್ಟ್ 28 ರಂದು ಕೇರಳದ ತಿರುವನಂತಪುರಂ ಜಿಲ್ಲೆಯ ವೆಂಗನೂರು ಗ್ರಾಮದಲ್ಲಿ ಅಯ್ಯನ್ ಮತ್ತು ಮಾಲ ದಂಪತಿಗಳ 8 ಜನ ಮಕ್ಕಳಲ್ಲಿ ಮೊದಲನೆ ಮಗನಾಗಿ ಅಯ್ಯನ್ ಕಾಳಿ ಅವರು ಜನಿಸಿದರು. ಅವರು ಬಾಲ್ಯದಲ್ಲಿಯೇ ಜಾತಿ ತಾರತಮ್ಯದ ನೋವನ್ನು ಅನುಭವಿಸಿದ ಕಾರಣದಿಂದ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲ ಮಾಡಬೇಕೆಂದು ಪಣತೊಟ್ಟಿದ್ದರು. ಅದಕ್ಕಾಗಿ ಜಾತಿ ನಿರ್ಮೂಲನೆ ಚಳುವಳಿಯನ್ನು ಆರಂಭಿಸಿದ್ದರು” ಎಂದು ತಿಳಿಸಿದರು.

“ಭಾರತದ ದಲಿತ ಚಳುವಳಿಗೆ ಸುದೀರ್ಘ ಹೋರಾಟದ ಇತಿಹಾಸ ಇದೆ. ಇಂತಹ ಚಳುವಳಿಯಲ್ಲಿ ತೊಡಗಿಸಿಕೊಂಡ ಮೊದಲಿಗರಲ್ಲಿ ಮಹಾರಾಷ್ಟ್ರದ ಕೊರೇಗಾಂವ್ ವಿಜಯೋತ್ಸವದ ರುವಾರಿ ಶಿದನಾಕ ಹಾಗೂ ಕೇರಳದ ಅಯ್ಯನ್ ಕಾಳಿ ಪ್ರಮುಖರು. ಅಯ್ಯನ್ ಕಾಳಿ ರವರು ತಾವು ಅಕ್ಷರಾಭ್ಯಾಸ ಮಾಡದಿದ್ದರೂ ನನ್ನ ಸಮುದಾಯದ ಜನರು ವಿದ್ಯೆಯಿಂದ ವಂಚಿತವಾಗಬಾರದೆಂಬ ಸದುದ್ದೇಶದಿಂದ ಅಸ್ಪೃಶ್ಯರಿಗಾಗಿ ಶಾಲೆಗಳನ್ನು ತೆರೆಯಲು ಆಲೋಚಿಸಿದ್ದರು. 1904 ರಲ್ಲಿ ‘ಪುಲಯ’ ಎಂಬ ಶಾಲೆಯನ್ನು ತೆರೆದರು” ಎಂದು ವಿವರಿಸಿದರು.

Advertisements

ಕಾರ್ಯಕ್ರಮದಲ್ಲಿ ದಲಿತ ಪರ ಹೋರಾಟಗಾರ ಕಂದೇಗಾಲ ಶಿವಣ್ಣ ,ದಸಾಪ ಅಧ್ಯಕ್ಷರಾದ ಯೋಗೇಶ ಕೆ, ಖಜಾಂಚಿ ಕಾಳಸ್ವಾಮಿ,ಚಿಜಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲರಾದ ಮಹದೇವ್ ಚಿಜಲ, ದಸಾಪ ನಿರ್ದೇಶಕರಾದ ತೊಂಡವಾಡಿ ಶಿವಣ್ಣ ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ ವೈಪರೀತ್ಯ | ರಾಜ್ಯದ ಹಲವೆಡೆ ಭಾರೀ ಮಳೆ; ಬೆಳೆಹಾನಿಯಿಂದ ಕಂಗಾಲಾದ ರೈತರು

ರೈತ ದೇಶದ ಬೆನ್ನೆಲುಬು, ವ್ಯವಸಾಯ ಮುಖ್ಯ ಕಸುಬು ಎಂಬ ಸುಳ್ಳುಗಳ ಪಾಠಗಳನ್ನೇ...

ಚಾಮರಾಜನಗರ | ರಾತ್ರಿ ಸಂಚಾರ ನಿಷೇಧ ತೆರವಿಗೆ ಮುಂದಾದರೆ ಉಗ್ರ ಹೋರಾಟ : ವಕ್ತಾರ ರಾಜೂಗೌಡ

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯ...

ಚಾಮರಾಜನಗರ | ದಲಿತ ಸಮುದಾಯದ ರೈತರ ಜಮೀನಿನಲ್ಲಿ ರಸ್ತೆ ನಿರ್ಮಾಣ; ತಹಶೀಲ್ದಾರ್ ನಡೆಗೆ ಖಂಡನೆ

ಚಾಮರಾಜನಗರ ಜಿಲ್ಲೆ,ಗುಂಡ್ಲುಪೇಟೆ ತಾಲ್ಲೂಕು ಚಿಕ್ಕಾಟಿ ಗ್ರಾಮದ ದಲಿತ ಸಮುದಾಯದ ರೈತರ ಜಮೀನಿನಲ್ಲಿ...

Download Eedina App Android / iOS

X