ಆತ್ಮ ನಿಯಂತ್ರಣದ ಮೂಲಕ ಮನಸ್ಸನ್ನು ಗೆಲ್ಲಬಹುದು. ಮನಸ್ಸನ್ನು ಜಯಿಸುವ ಕೆಲಸ ಉಪವಾಸದಿಂದಾಗುತ್ತದೆ. ಉಪವಾಸ ವ್ರತ ಮನುಷ್ಯನಿಗೆ ಸಕಲ ಕೆಡುಕುಗಳಿಂದ ದೂರ ಉಳಿಯಲು ಪ್ರೇರಣೆ ನೀಡುತ್ತದೆ ಎಂದು ಜ.ಇ ಹಿಂದ್ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.
ಚಿಕ್ಕಮಗಳೂರಿನ ಜಮಾಅತೆ ಇಸ್ಲಾಮೀ ಹಿಂದ್ನಿಂದ ಸ್ಥಳೀಯ ಹೆರಿಟೇಜ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ ಸಿ ಪ್ರಕಾಶ್ ಅತಿಥಿ ಭಾಷಣ ಮಾಡಿದ್ದು, “ಸೌಹಾರ್ದ ಸಮಾರಂಭಗಳು ಪ್ರಸಕ್ತ ಸಮಾಜದ ಅಗತ್ಯವಾಗಿದೆ. ಧರ್ಮಗಳ ನಿಜವಾದ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನಡೆಸುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಭ್ಯರ್ಥಿ ಬದಲಾವಣೆಗೆ ಆಗ್ರಹ; ಬಿಜೆಪಿ ಮುಖಂಡರ ಸಭೆ ಕರೆದ ರವೀಂದ್ರನಾಥ್

ಜ ಇ ಹಿಂದ್ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ರಿಝ್ವಾನ್ ಖಾಲಿದ್ ಪ್ರಾಸ್ತಾವಿಕ ಭಾಷಣ ಮಾಡಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.
