ಚಿಕ್ಕಮಗಳೂರು l ಉರುಸ್ ಹಬ್ಬದಲ್ಲಿ ಅವ್ಯವಸ್ಥೆ; ಆಡಳಿತಾಧಿಕಾರಿಗಳ ನಿರ್ಲಕ್ಷ್ಯವೆಂದ ಜನರು

Date:

Advertisements

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಾಬಾ ಬುಡನ್ ಗಿರಿಯಲ್ಲಿ ಸುಮಾರು ವರ್ಷಗಳಿಂದ ಉರುಸ್ ಹಬ್ಬದ ಆಚರಣೆಯನ್ನು ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಈ ಹಬ್ಬಕ್ಕೆ ಹಿಂದೂ ಹಾಗೂ ಎಲ್ಲಾ ಸಮುದಾಯದವರು ಭಾಗವಹಿಸುವುದು ವಾಡಿಕೆಯಿದೆ.

Screenshot 2025 03 16 20 09 40 37 965bbf4d18d205f782c6b8409c5773a4
ಬಾಬಾ ಬುಡನ್ ಗಿರಿಯಲ್ಲಿ ಪ್ರವಾಸಿಗರಿಲ್ಲದೆ ಖಾಲಿ ಕಾಣುತ್ತಿರುವ ಪ್ರದೇಶ

ಅದೇ ರೀತಿಯಲ್ಲಿ 15 ರಿಂದ ಶುರುವಾಗಿ ಮೂರು ದಿನಗಳ ಕಾಲ ಉರುಸ್ ಆಚರಣೆ ನಡೆಯುತ್ತದೆ. ಶನಿವಾರದಂದು ಎಂದಿನಂತೆ ಉರುಸ್ ಹಬ್ಬದ ಆಚರಣೆ ವಿಜೃಂಭಣೆಯಿಂದ ನಡೆದಿದೆ. ಆದರೆ, ವ್ಯವಸ್ಥೆ ಮಾತ್ರ ಕುಂಠಿತವಾಗಿದೆ ಎನ್ನಬಹುದು. ಈದಿನ.ಕಾಮ್ ತಂಡ ಉರುಸ್ ಹಬ್ಬದ ಆಚರಣೆ ಕುರಿತು ಜನಾಭಿಪ್ರಾಯ ಸಂಗ್ರಹ ಮಾಡಲು ತೆರಳಿದಾಗ ಅಲ್ಲಿನ ಜನರು ಉರುಸ್ ಹಬ್ಬದ ಅವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ.

“ಸುಮಾರು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಾ ಇದ್ದೇವೆ, 25 ವರ್ಷಗಳಿಂದ ಉರುಸ್ ನಡೆಯುವ ಸಮಯದಲ್ಲಿ ಈ ಭಾಗಕ್ಕೆ ಚಿಕ್ಕಮಗಳೂರಿನಿಂದ ಗಿರಿಗೆ ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಇತ್ತು, ದೂರದ ಊರುಗಳಿಂದ ಹಾಗೂ ಜಿಲ್ಲೆಗಳಿಂದ ಬರುವ ಜನರಿಗೆ ಅನುಕೂಲವಾಗುತ್ತಿತ್ತು. ಬರುವ ಜನರು ಬಹಳ ಸಂತೋಷದಿಂದ ಬಂದು ಹೋಗುತ್ತಿದ್ದರು. ಆದರೆ, ಈಗ ಉರುಸ್ ಹಬ್ಬದ ಸಮಯದಲ್ಲಿ 3 ದಿನಗಳ ಕಾಲ ಬಸ್ ಬಿಡುತ್ತೇವೆಂದು ಜಿಲ್ಲಾಡಳಿತ ತಿಳಿಸಿತ್ತು. ಇಲ್ಲಿ ನೋಡಿದರೆ ಬಸ್ಸು ಇಲ್ಲ, ಯಾವ ವಾಹನಗಳು ಇಲ್ಲ, ಅದರಲ್ಲೂ ಪ್ರವಾಸಿಗರು ಬರದಂತೆ 3 ದಿನಗಳ ಕಾಲ ನಿರ್ಬಂಧ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಉಪವಾಸದಲ್ಲೂ ದೂರದಿಂದ ಬರಬೇಕು. ಅವರೆಲ್ಲ ಏನು ಮಾಡಬೇಕು, ಕೆಲವರು ಬಡವರು ಹೇಗೋ ಹಣ ಉಳಿತಾಯ ಮಾಡಿ ಉರುಸ್ ಹಬ್ಬಕ್ಕೆ ಬರುತ್ತಾರೆ. ವಾಹನ ಬಾಡಿಗೆದಾರರು 100 ರೂ. ಬದಲು 500-1000 ಬಾಡಿಗೆ ಹೇಳಿದರೆ ಉರುಸ್ ಹಬ್ಬಕ್ಕೆ ಬರುವ ಜನರ ಪರಿಸ್ಥಿತಿ ಏನಾಗಬೇಕು” ಎಂದು ಅಭಿಬುಲ್ಲ ಖಾನ್ ಮತ್ತು ದಾವಣಗೆರೆಯ ಮಹಾಂತೇಶ್ ಈದಿನ ಡಾಟ್ ಕಾಮ್ ಜೊತೆ ಅಳಲು ತೋಡಿಕೊಂಡಿದ್ದಾರೆ.

Advertisements
IMG 20250316 WA0034
ಕುಡಿಯುವ ನೀರಿನ ಟ್ಯಾಂಕರ್

ನೀರು ಹರಿಯುವ ಗುಡ್ಡಗಾಡು ಪ್ರದೇಶ ನಮ್ಮದು. ಮೋಟಾರಿಂದ ನೀರನ್ನು ಬೇಕಾದಷ್ಟು ಬಳಸಬಹುದು. ವಾಟರ್ ಮ್ಯಾನ್ ಇದ್ದರು. ಅವರು ಈಗ ನಿವೃತ್ತಿ ಆಗಿದ್ದಾರೆ. ಕೇಳಿದರೆ ಸಮಿತಿ ನಿರ್ಧಾರ ಮಾಡಬೇಕು, ಜಿಲ್ಲಾಧಿಕಾರಿಯವರಿಗೆ ಈ ವಿಚಾರ ನಿರ್ಧಾರ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಸದ್ಯಕ್ಕೆ ಬೇರೆಯವರನ್ನು ಉರುಸ್ ಸಮಯದಲ್ಲಿ ತಾತ್ಕಾಲಿಕವಾಗಿ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಜವಾಬ್ದಾರಿ ಹೊತ್ತ ಇಓ ಅವರಿಗೆ ತಿಳಿಸಿದರೆ, ಬರಿ ಸರಿ ಎನ್ನುತ್ತಾರೆ ಬಿಟ್ಟರೆ ಏನೂ ಪ್ರಯೋಜನವಿಲ್. ಕೆಲಸ ಮಾತ್ರ ಶೂನ್ಯವಾಗಿದೆ. ನಮಗೆ ಉರುಸ್ ಸಮಯದಲ್ಲಿ ವಿದ್ಯುತ್, ನೀರಿನ ಸಮಸ್ಯೆ ಆಗಿದೆ. ನಿರಂತರವಾಗಿ ಅಧಿಕಾರಿಗೆ ಒತ್ತಡ ಹಾಕಿದ ನಂತರ ನೀರನ್ನು ತರಿಸಿ ಕೊಟ್ಟಿದ್ದಾರೆಂದು ಸ್ಥಳೀಯ ನಿವಾಸಿ ಮುನ್ನ ಈದಿನ ಡಾಟ್‌ ಕಾಮ್‌ಗೆ ತಿಳಿಸಿದ್ದಾರೆ.

Screenshot 2025 03 16 20 26 49 09 965bbf4d18d205f782c6b8409c5773a4

ಹಾಗೆಯೇ, ಒಂದು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದಾರೆ. ಆದರೆ ಸುಮಾರು ವರ್ಷಗಳಿಂದ ಈ ಭಾಗದಲ್ಲಿದ್ದ, ಸ್ಥಳೀಯ ಜನರು ಹಾಗೂ ಸಮಿತಿಯ ಸದಸ್ಯರನ್ನು ಬಿಟ್ಟು ಬೇರೆಯವರನ್ನು ಕರೆಸಿ ಸಭೆ ನಡೆಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಉರುಸ್ ಹಬ್ಬಕ್ಕೆ ಸರಿಯಾದ ತಯಾರಿ ಮಾಡಿಲ್ಲ, ಕುಂದು ಕೊರತೆ ಬಗ್ಗೆ ಕೇಳೋರು ಯಾರು ಇಲ್ಲದಾಗಿದೆ. ಸ್ಥಳೀಯರು ಹಾಗೂ ಪ್ರವಾಸಿಗರು ಪ್ಲಾಸ್ಟಿಕ್ ನೀರಿನ ಬಾಟಲ್ ಉಪಯೋಗಿಸಬಾರದು, ಪರಿಸರಕ್ಕೆ ಹಾನಿಯಾಗುತ್ತದೆಂದು ಆಡಳಿತಾಧಿಕಾರಿಗಳು ಹೇಳುತ್ತಾರೆ. ಆದರೆ, ಆಡಳಿತಾಧಿಕಾರಿಗಳು ಏನೂ ಮಾಡ್ತಾ ಇದ್ದಾರೆ? ಅವರು ಮಾತ್ರ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಬಳಸಬಹುದಾ? ಎಂದು ಬಾಬಾ ಬುಡನ್ ಗಿರಿಯ ಸ್ಥಳೀಯರು ಹಾಗೂ ನೆರದಿದ್ದ ಜನರು ಆಡಳಿತ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

IMG 20250316 WA0033
ನಮಾಜ್ ಮಾಡುವ ಮೊದಲು ವಝು ಮಾಡುವುದಕ್ಕೆ ಶೌಚಾಲಯದ ಬಜೆಟ್ ಹಾಗೂ ನೀರನ್ನು ಬಳಸುತ್ತಿರುವ ದೃಶ್ಯ

ಬೇರೆ ಬೇರೆ ಆಚರಣೆಗಳು ಇದ್ದಾಗ ಒಂದು ಚೂರು ಅವ್ಯವಸ್ಥೆಯಾಗದ ರೀತಿಯಲ್ಲಿ ಆಡಳಿತ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಹಾಗೆಯೇ, ಪ್ರವಾಸಿಗರು ಹಾಗೂ ಪ್ರತಿಯೊಬ್ಬರೂ ಹಾಜರಾಗುವ ಅವಕಾಶವಿರುತ್ತದೆ. ಆದರೆ, ಉರುಸ್ ಆಚರಣೆ ವೇಳೆ ಮಾತ್ರ ಪ್ರವಾಸಿಗರ ನಿರ್ಬಂಧ ಹಾಗೂ ಬೇರೆ ಸಮುದಾಯದ ಜನರು ಬರದಂತೆ ನಿರ್ಬಂಧವನ್ನು ಯಾಕೆ ಹೇರಲಾಗುತ್ತದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಹಾಗೆಯೇ ಎಲ್ಲಾ ಸಮುದಾಯದ ಸ್ಥಳೀಯ ನಿವಾಸಿಗಳು ಹಾಗೂ ನೆರದಿದ್ದ ಜನರು ಆಡಳಿತಾಧಿಕಾರಿಗಳನ್ನು ಟೀಕಿಸಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮಾರ್ಚ್ 15 ರಿಂದ 17ರವರೆಗೆ ಪ್ರವಾಸಿಗರ ನಿರ್ಬಂಧ 

ಬಾಬಾ ಬುಡನ್ ಗಿರಿಯಲ್ಲಿ ಹಿಂದೂ ಅಥವಾ ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಆಚರಿಸುವ ಹಬ್ಬ ಯಾವುದೇ ಇರಲಿ, ಆಚರಣೆಗಳು ಮಾಡುವಾಗ ಸರಿ ಸಮನಾದ ವ್ಯವಸ್ಥೆ ಆಗಬೇಕು. ಎಲ್ಲಾ ಸಮುದಾಯದವರು ಭಾಗಿಯಾಗಿ ಬರುವ ಜನರಿಗೆ ಸಂತೋಷ  ಅನಿಸಬೇಕೇ ಹೊರತು ಹೊರೆಯಾಗಬಾರದು. ಹಾಗೆಯೇ, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಆಗದಂತೆ ಆಡಳಿತ ವರ್ಗ ಹಾಗೂ ಸಮಿತಿಯವರು ಜಾಗರೂಕತೆಯಿಂದ ನೆರವೇರಿಸಬೇಕೆಂದು ದೂರದ ಊರುಗಳಿಂದ ಬಂದಂತಹ ಜನರು ಅಭಿಪ್ರಾಯ ವ್ಯಕಪಡಿಸಿದರು.

WhatsApp Image 2024 10 24 at 12.02.30
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X