ಚಿಕ್ಕಮಗಳೂರು l ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಸಗೀರ್ ಸಾವಿಗೆ ನ್ಯಾಯ ದೊರಕಿಸಿ; ಸಂಘಟನೆ ಮುಖಂಡರ ಆಗ್ರಹ

Date:

Advertisements

ಸಮಾಜಗಳ ಅಭಿವೃದ್ಧಿ, ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯದಿಂದ ಮಾತ್ರ ಎಲ್ಲರೊಡನೆ ಬದುಕಲು ಸಾಧ್ಯವೆಂದು ಸೂಫಿ ಸಂತರ ಸಂದೇಶ ಸೌಹಾರ್ದ ಬದುಕಿಗೆ ಮಾರ್ಗದರ್ಶಕರಾಗಿದ್ದಾರೆ. ಆದರೇ, ಮುಸ್ಲಿಂ ಸಮುದಾಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಅದೇ ಸಮುದಾಯದ ಜನರು ಜಾಮೀಯ ಮಸೀದಿ ಬಳಿ ವಾದ ವಿವಾದ ಮಾಡಿಕೊಂಡಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. 

Screenshot 2025 07 30 18 58 01 27 7352322957d4404136654ef4adb64504
ಒಂದೇ ಸಮುದಾಯದರು ಜಾಮಿಯಾ ಮಸೀದಿಯಲ್ಲಿ ನಡೆಸುತ್ತಿರುವ ವಾದ ವಿವಾದದ ದೃಶ್ಯ

ಒಂದೇ ಸಮುದಾಯದಲ್ಲಿ ವಿವಾದವಾಗಲು ಕಾರಣವೇನು?ಸುಮಾರು 16-20 ವರ್ಷಗಳಿಂದ ಜಾಮೀಯ ಮಸೀದಿಯಲ್ಲಿ ಮಸೂದ್ ಅಹಮದ್ ಅವರು ಅಧ್ಯಕ್ಷರಾಗಿದ್ದರು. ಮಸೀದಿಯ ಅಭಿವೃದ್ಧಿ ಹಾಗೂ ಕಾರ್ಯ ಚಟುವಟಿಕೆಗಳಿಗೆ ಬಂದಂತಹ ಹಣವನ್ನು ಬಳಸುತ್ತಿದ್ದರು. ಈ ಕುರಿತು ಮಸೀದಿಯ ಸದಸ್ಯರು ಹಾಗೂ ಮುಖಂಡರು ಸೇರಿ ಇಷ್ಟೂ ವರ್ಷದಲ್ಲಿ ಹಣ ಯಾವುದಕ್ಕೆ ಬಳಕೆಯಾಗಿದೆ ಹಾಗೆಯೇ, ಇನ್ನ ಉಳಿದ ಹಣ ಯಾವ ಅಭಿವೃದ್ಫಿ ಕೆಲಸಕ್ಕೆ ಬಳಸುತ್ತಿದ್ದಾರೆಂದು ಮಾಹಿತಿ ಪಡೆಯಲು ಸೌಹಾರ್ದತೆಯಿಂದ ವಿಚಾರಿಸಲು ಹೋಗುವ ವೇಳೆ ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ಸಗೀರ್ ಅವರನ್ನು ಕೂಡ ಸದಸ್ಯರು ಕರೆದುಕೊಂಡು ಮಸೀದಿಯ ಬಳಿ ಹೋಗಿ ವಿಚಾರಿಸುತ್ತಿದ್ದ ವೇಳೆ ಮಸೀದಿಯ ಅಧ್ಯಕ್ಷರ ಕಡೆಯಿಂದ ಗುಂಪೂಂದು ಹಲ್ಲೆ ಮಾಡಿ ನಿಂದಿಸಿದರು ಎಂದು ಹಲ್ಲೆಗೊಳಗಾದ ಮಸೀದಿಯ ಸದಸ್ಯರು ಹಾಗೂ ಮುಖಂಡರು ಈದಿನ.ಕಾಮ್ ಜೊತೆ ಮಾತಾಡಿದರು.

Screenshot 2025 07 30 18 55 11 17 99c04817c0de5652397fc8b56c3b3817

ದೂರು ದಾಖಲಿಸಲು ಹೋದಾಗ: ಈ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ತೆರಳಿದಾಗ ಅಧಿಕಾರಿಗಳು ನಮ್ಮನ್ನು ಗದರಿಸಿ ಅಲ್ಲೇ ಕೂರಿಸಿ ಪ್ರತಿ ದೂರನ್ನು ದಾಖಲಿಸಿ, ನಮ್ಮ ಮೇಲೆ ಇಲ್ಲಸಲ್ಲದ ಆರೋಪವನ್ನು ಮಾಡಿ ಅಧಿಕಾರಿಗಳ ನೇತೃತ್ವತದಲ್ಲಿ ನಮ್ಮನ್ನು 307 ಸೆಕ್ಷನ್ ಹಾಕಿಸಿ 18 ದಿನಗಳ ಕಾಲ ಬಂಧಿಸಿಟ್ಟಿದ್ದರು. ಕುಟುಂಬದವರು ಹಾಗೂ ಹಲವು ಸಂಘಟನೆ ಮುಖಂಡರು ಭೇಟಿಗೂ ಅವಕಾಶ ಕೊಡದೆ. ಸರಿಯಾಗಿ ಊಟವನ್ನು ಸಹ ಕೊಡುತ್ತಿರಲಿಲ್ಲ ಎಂದು ಮಸೀದಿಯ ಸದಸ್ಯ ಹಾಗೂ ಬಂಧನದಲಿದ್ದ ಅಬ್ದುಲ್ ಸಮೀರ್ ಈದಿನ. ಕಾಮ್ ಜೊತೆ ಮಾತಾಡಿದ್ದಾರೆ.

Advertisements
Screenshot 2025 07 30 18 56 52 45 99c04817c0de5652397fc8b56c3b3817
ಮೃತಪಟ್ಟಿರುವ ಅಬ್ದುಲ್ ಶಗೀರ್ ಅವರ ಕುಟುಂಬಸ್ಥರು

ಪ್ರತಿ ದೂರುದಾರರ ಆರೋಪ: ಮಸೀದಿಯಲ್ಲಿ ನಾನು ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೆ, ಅನ್ಯ ಗುಂಪೊಂದು ಜಗಳ ಮಾಡಿ, ಚಾಕುವಿನಿಂದ ಹಲ್ಲೆಗೈದು, ದೊಣ್ಣೆಯಿಂದ ಹೊಡೆದು, ಕೊಲೆ ಮಾಡಲು ಯತ್ನಿಸಿದ್ದಾರೆಂದು ಪ್ರತಿ ದೂರುದಾರ ಮಸೂದ್ ಅಹಮದ್ ಕೇಸ್ ದಾಖಲೆ ಮಾಡಿದ್ದಾರೆ.

Screenshot 2025 07 30 19 15 51 86 99c04817c0de5652397fc8b56c3b3817
ಪ್ರತಿ ದೂರುದಾರ ಮಸೂದ್ ಅಹಮದ್ ಕೇಸ್ ದಾಖಲಿಸುವಾಗ ಕೊಟ್ಟಿರುವ ಮಾಹಿತಿ

ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಸಗೀರ್ ಸಾವಿಗೆ ನ್ಯಾಯ ದೊರಕಿಸಿ ಕೊಡಿ: ನ್ಯಾಯ ಕೇಳಲು ಹೋಗಿದಕ್ಕೆ ನನ್ನ ಗಂಡನನ್ನು 18 ದಿನ ಬಂಧನದಲ್ಲಿಟ್ಟಿದರು. “ಎಷ್ಟೋತ್ತಿಗಾದಾರು ಯಾರಿಗೆ ಏನೇ ಸಮಸ್ಯೆ ಹಾಗೂ ಅನಾರೋಗ್ಯದಿಂದ ಪೀಡಿತರಾದವರಿಗೆ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ನನ್ನ ಗಂಡ ಯಾರಿಗೂ ಬೈದವರಲ್ಲ, ಬೆಳಗ್ಗೆನೇ ಮನೆ ಮುಂದೆ ಹಳ್ಳಿಕಡೆಯಿಂದ ಜನರು ವಯಸ್ಸಾದ ವೃದ್ಧರು ಕೇಳಿಕೊಂಡು ಬರುತ್ತಿದ್ದರು”. ಈಗ ನಮ್ಮನ್ನು ಅಗಲಿದ್ದಾರೆ. ಅವರು 18 ದಿನ ಜೈಲಿನಲ್ಲಿದ್ದಾಗ ನಾವು ಭೇಟಿ ಮಾಡಿ ಮಾತಾಡುವಾಗ “ನನ್ನದೇನು ತಪ್ಪಿಲ್ಲ ನಾನು ಇಲ್ಲಿಯವರೆಗೂ ಸಂಪಾದಿಸಿದ ಗೌರವ ಎಲ್ಲಾ ಮಣ್ಣು ಪಲಾಯಿತು ಏನು ಮಾಡದೇ ಜೈಲಿಗೆ ಬರುವಂತಾಯಿತು”ಎಂದು ಮಾನಸಿಕವಾಗಿ ನೊಂದು ಜೈಲಿನಿಂದ ಬಂದು ಮರು ದಿನವೇ ಅದೇ ಚಿಂತೆಯಿಂದ ಪ್ರಾಣ ಕಳೆದುಕೊಳ್ಳುವಂತ್ತಾಯಿತು”.  ನನಗೆ ಐದು ಜನ ಮಕ್ಕಳು ನಮ್ಮನ್ನು ಬಿಟ್ಟು ಅಗಲಿದ್ದಾರೆ. “ನನ್ನ ಗಂಡನನ್ನು ಮತ್ತೆ ಕೊಡಲು ಸಾಧ್ಯವಿಲ್ಲ, ನನ್ನ ಗಂಡನಿಗಾದ ಅನ್ಯಾಯಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ನ್ಯಾಯ ಕೊಡಿಸಿ ಎಂದು ಸಿಮಾ ಈದಿನ.ಕಾಮ್ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

Screenshot 2025 07 30 18 56 24 32 99c04817c0de5652397fc8b56c3b3817
ಮೃತ ವ್ಯಕ್ತಿ ಅಬ್ದುಲ್ ಸಗೀರ್ ಅವರ ಪತ್ನಿ ಸೀಮಾ

ಕಳೆದ ಭಾನುವಾರ ದಲಿತ, ಅಲ್ಪ ಸಂಖ್ಯಾತ, ರೈತ, ಹಾಗೂ ಇನ್ನೂ ಸಂಘಟನೆಯ ಮುಖಂಡರು ಸೇರಿ ಅಬ್ದುಲ್ ಸಗೀರ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಅಜ್ಜಂಪುರ ತಾಲೂಕಿನ ಕನಕ ಮಂಟಪದಲ್ಲಿ ಮಾಡಿದರು. ಈ ಕಾರ್ಯಕ್ರಮಕ್ಕೆ ನೆರದಿದ್ದ ಜನರು, ಸಂಘಟನೆಯ ಮುಖಂಡರೆಲ್ಲರೂ ಅಬ್ದುಲ್ ಸಗೀರ್ ಏನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ ನಮ್ಮನ್ನು ಅಗಲಿದ್ದಾರೆ, ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಪ್ರತಿಯೊಬ್ಬರು ಪ್ರತಿಕ್ರಿಯಿದರು.

Screenshot 2025 07 30 18 59 16 53 7352322957d4404136654ef4adb64504
ಅಬ್ದುಲ್ ಸಗೀರ್ ಅವರ ನೆನಪಿಗಾಗಿ ನುಡಿ ನಮನ ಕಾರ್ಯಕ್ರಮ

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡಾನೆ ಸೆರೆ ಕಾರ್ಯಾಚರಣೆ: ಒಂದು ಪುಂಡಾನೆ ಸೆರೆ

ಈ ಕುರಿತು ಅಜ್ಜಂಪುರ ವ್ಯಾಪ್ತಿಯ ಹಲವು ಸಂಘಟನೆ ಹಾಗೂ ಸಾಮಾಜಿಕ ಕಾರ್ಯಕರ್ತರು “ತಪ್ಪು ಮಾಡದೇ ಸುಳ್ಳು ಮಾಹಿತಿ ಆದರದಲ್ಲಿ ಶಿಕ್ಷೆ ಅನುಭವಿಸಿದ ಅಬ್ದುಲ್ ಸಗೀರ್ ಅವರ ಸಾವಿಗೆ ಹಾಗೂ ಸುಳ್ಳು ಕೇಸ್ ದಾಖಲಿಸಿ ಶಿಕ್ಷೆಗೆ ಒಳಪಡಿಸಿದ್ದ ಸ್ನೇಹಿತರಿಗೆ ನ್ಯಾಯ ದೊರಕಬೇಕು” ಎಂದು ಈ ದಿನ.ಕಾಮ್ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

WhatsApp Image 2024 10 24 at 12.02.30
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೊರಬ | 30 ಅಡಿ ಬಾವಿಗೆ ಬಿದ್ದ ಆಕಳು ರಕ್ಷಣೆ

ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ...

ಶಿವಮೊಗ್ಗ | ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು...

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

Download Eedina App Android / iOS

X