ಚಿಕ್ಕಮಗಳೂರು | ವಿಡಿಯೋ ಮಾಡಲು ಹೋದಾಗ ದುರಂತ: ಎತ್ತಿನಗಾಡಿ ಹರಿದು ವ್ಯಕ್ತಿ ಸಾವು 

Date:

Advertisements

ಎತ್ತಿನಗಾಡಿ ಮೆರವಣಿಗೆಯ ವಿಡಿಯೋ ಮಾಡಲು ಹೋಗಿ ಎತ್ತಿನಗಾಡಿಯ ಅಡಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಅಂತರಘಟ್ಟ ಗಡೀಹಳ್ಳಿ ಗ್ರಾಮದ ಬಳಿ ನಡೆದಿದೆ.

ಗಡೀಹಳ್ಳಿ ಗ್ರಾಮದ ರವಿ (40) ಎಂಬಾತ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗಡಿಹಳ್ಳಿ ಗ್ರಾಮದಿಂದ ಅಂತರಘಟೆಗೆ ಎತ್ತಿನಗಾಡಿ ಓಡಿಸುವಾಗ ರಸ್ತೆ ಮಧ್ಯೆ ನಿಂತು ಮೆರವಣಿಗೆಯ ವಿಡಿಯೋ ಮಾಡುತ್ತಿದ್ದ ರವಿ ಮೇಲೆ ಎತ್ತಿನಗಾಡಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಡೂರು ತಾಲೂಕಿನ ದುರ್ಗಾಂಬ ಜಾತ್ರೆಗೆ ಎತ್ತಿನ ಗಾಡಿಗಳ ಮೂಲಕ ಭಕ್ತಾದಿಗಳು ಸಾಮಾನ್ಯವಾಗಿದ್ದು, ಈ ಜಾತ್ರೆಗೆ ಎತ್ತಿನ ಗಾಡಿಯ ಮೂಲಕ ಭಕ್ತಾಧಿಗಳು ಬರುವುದು ವಿಶೇಷ. ಐತಿಹಾಸಿಕ ಅಂತರಘಟ್ಟ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಪ್ರತಿ ವರ್ಷ ನಡೆಯುತ್ತದೆ. ಅದೇ ರೀತಿಯಲ್ಲಿ ಈ ವರ್ಷ ಜಾತ್ರಾ ಮಹೋತ್ಸವದ ಅಂಗವಾಗಿ ಎತ್ತಿನಗಾಡಿ ಓಡಿಸುವ ಸಂಪ್ರದಾಯವಿದೆ.

Advertisements

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ʼಸೂಸಲವಾನಿʼ ಗ್ರಾಮದ ರಸ್ತೆಗಿಲ್ಲ ಡಾಂಬರು ಭಾಗ್ಯ; ಗ್ರಾಮಸ್ಥರ ಅಳಲು ಕೇಳೋರೆ ಇಲ್ಲ

ಜಾತ್ರೆಯು ಪ್ರಾರಂಭವಾಗುವ ತಿಂಗಳ ಮುಂಚೆ ಭಕ್ತಾಧಿಗಳು ಲಕ್ಷ ಲಕ್ಷ ರೂಪಾಯಿ ಕೊಟ್ಟು ಹೊಸ ಎತ್ತುಗಳನ್ನು ಕೊಂಡುಕೊಂಡು, ಎತ್ತಿನಗಾಡಿಯನ್ನು ಸಿಂಗರಿಸಿ ಜಾತ್ರೆಗೆ ಇತರೆ ಎತ್ತಿನ ಗಾಡಿಗಳೊಂದಿಗೆ ನಾಮುಂದು ತಾಮುಂದೆಂದು ಹೋಗುವರು ಹೀಗೆ ಅಜ್ಜಂಪುರ ತಾಲ್ಲೂಕು ಗಡೀಹಳ್ಳಿಗ್ರಾಮದಲ್ಲೂ ಜಾತ್ರೆಗೆ ಪ್ರತಿವರ್ಷ ಎತ್ತಿನಗಾಡಿ ಹೋಡುವುದು ಸಾಮಾನ್ಯವಾಗಿದ್ದು ಜಾತ್ರೆಗೆ ಹೊರಡುವ ಮುನ್ನ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ಎತ್ತಿನ ಗಾಡಿಗಳು ಹೋಗಿ ಪೊಜೆ ಮಾಡಿಸಿಕೊಂಡು ಅಲ್ಲಿಂದ ಬರುವಾಗ ಗಡಿಹಳ್ಳಿ ಗ್ರಾಮದಲ್ಲಿಯೇ ಅದೇ ಗ್ರಾಮದ ಮೃತ ರವಿ ಗಾಡಿಯ ಜೊತೆ ಓಡಿಬರುವಾಗ ಪಕ್ಕದಲ್ಲಿನ ಇನ್ನೊಂದು ಎತ್ತಿನಗಾಡಿಯ ನೊಗ ತಾಗಿ ಕೆಳಗೆ ಬಿದ್ದಿದ್ದು, ಆ ಗಾಡಿಯು ಅವನ ಮೇಲೆ ಹರಿದಿದ್ದು, ಗಂಭೀರ ಗಾಯಗೊಂಡಿದ್ದ ಅವರು ಸಾವನಪ್ಪಿದ್ದಾರೆ. ಘಟನೆಯ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದೆ.

ಮೃತನಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ ಎಂದು ತಿಳಿದು ಬಂದಿದೆ. ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೊರಬ | 30 ಅಡಿ ಬಾವಿಗೆ ಬಿದ್ದ ಆಕಳು ರಕ್ಷಣೆ

ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ...

ಶಿವಮೊಗ್ಗ | ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು...

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

Download Eedina App Android / iOS

X